ಕನ್ನಡಪ್ರಭ ವಾರ್ತೆ ಹುಬ್ಬಳ್ಳಿಈಗಾಗಲೇ ರಣಜಿ ಟ್ರೋಫಿ ಕ್ವಾರ್ಟರ್ ಫೈನಲ್ ಪ್ರವೇಶಿಸುವುದನ್ನು ಖಚಿತಪಡಿಸಿಕೊಂಡಿರುವ ಕರ್ನಾಟಕ, ಚಂಡೀಗಢ ವಿರುದ್ಧ ಇನ್ನಿಂಗ್ಸ್ ಜಯದೊಂದಿಗೆ ನಾಕೌಟ್ ಹಂತಕ್ಕೆ ಕಾಲಿಡಲು ಕಾಯುತ್ತಿದೆ.
2ನೇ ದಿನದಂತ್ಯಕ್ಕೆ 3 ವಿಕೆಟ್ಗೆ 268 ರನ್ ಗಳಿಸಿ 1 ರನ್ ಮುನ್ನಡೆ ಪಡೆದಿದ್ದ ರಾಜ್ಯ ತಂಡ, ಭಾನುವಾರ ತನ್ನ ಬಿರುಸಿನ ಬ್ಯಾಟಿಂಗ್ ಮುಂದುವರಿಸಿತು. ಹಾರ್ದಿಕ್ ರಾಜ್ ಹಾಗೂ ಮನೀಶ್ ಪಾಂಡೆ 4ನೇ ವಿಕೆಟ್ಗೆ 239 ರನ್ ಜೊತೆಯಾಟವಾಡಿದರು. 17 ವರ್ಷದ ಹಾರ್ದಿಕ್ 82 ರನ್ಗೆ ಔಟಾಗಿ ಚೊಚ್ಚಲ ಶತಕ ಬಾರಿಸುವ ಅವಕಾಶದಿಂದ ವಂಚಿತರಾದರೆ, ಮನೀಶ್ 181 ಎಸೆತದಲ್ಲಿ 148 ರನ್ ಗಳಿಸಿ ವಿಕೆಟ್ ಕಳೆದುಕೊಂಡರು.ವೈಶಾಖ್, ಶರತ್ ಮಿಂಚು: ಈ ಋತುವಿನಲ್ಲಿ ತಮ್ಮ ಬ್ಯಾಟಿಂಗ್ ಮೂಲಕವೂ ಗಮನ ಸೆಳೆಯುತ್ತಿರುವ ವೇಗಿ ವೈಶಾಖ್ (103*) ಚೊಚ್ಚಲ ಶತಕ ಬಾರಿಸಿದರೆ, ವಿಕೆಟ್ ಕೀಪರ್ ಎಸ್.ಶರತ್(100*) ಆಕರ್ಷಕ ಶತಕ ಸಿಡಿಸಿ ತಮ್ಮ ಆಯ್ಕೆ ಸಮರ್ಥಿಸಿಕೊಂಡರು.ಸ್ಕೋರ್: ಚಂಡೀಗಢ 267/10 ಮತ್ತು 61/0, ಕರ್ನಾಟಕ 563/5 ಡಿ., (ಮನೀಶ್ 148, ವೈಶಾಕ್ 103*, ಎಸ್.ಶರತ್ 100*, ಹಾರ್ದಿಕ್ 82, ಕರಣ್ 3-143)