38 ತಂಡಗಳ ನಡುವಿನ ರಣಜಿ ಟ್ರೋಫಿ ಕದನ ಇಂದಿನಿಂದ ಶುರು

KannadaprabhaNewsNetwork |  
Published : Jan 05, 2024, 01:45 AM ISTUpdated : Jan 05, 2024, 04:48 PM IST
ಮಯಾಂಕ್‌ ಅಗರ್‌ವಾಲ್‌ | Kannada Prabha

ಸಾರಾಂಶ

ಈ ಬಾರಿ ರಣಜಿ ಕ್ರಿಕೆಟ್‌ ಟೂರ್ನಿಯಲ್ಲಿ 38 ತಂಡಗಳು ಪಾಲ್ಗೊಳ್ಳಲಿವೆ. ಕರ್ನಾಟಕದ ಚಿನ್ನಸ್ವಾಮಿ, ಹುಬ್ಬಳ್ಳಿ ಸೇರಿದಂತೆ ದೇಶದ ವಿವಿಧ ನಗರಗಳ 50ಕ್ಕೂ ಹೆಚ್ಚು ಕ್ರೀಡಾಂಗಣಗಳು ಟೂರ್ನಿಯ ಪಂದ್ಯಗಳಿಗೆ ಆತಿಥ್ಯ ವಹಿಸಲಿವೆ.

ಹುಬ್ಬಳ್ಳಿ: ರಾಷ್ಟ್ರೀಯ ತಂಡಕ್ಕೆ ಕಮ್‌ಬ್ಯಾಕ್‌, ಪಾದಾರ್ಪಣೆ ಸೇರಿದಂತೆ ಹಿರಿಯ-ಯುವ ಕ್ರಿಕೆಟಿಗರ ಕ್ರಿಕೆಟ್‌ ಬದುಕು ನಿರ್ಧರಿಸುವ ರಣಜಿ ಟ್ರೋಫಿ ರಾಷ್ಟ್ರೀಯ ಕ್ರಿಕೆಟ್‌ ಟೂರ್ನಿಗೆ ಶುಕ್ರವಾರ ಚಾಲನೆ ಸಿಗಲಿದೆ. 8 ಬಾರಿ ಚಾಂಪಿಯನ್‌ ಕರ್ನಾಟಕ ಹುಬ್ಬಳ್ಳಿಯಲ್ಲಿ ಪಂಜಾಬ್‌ ವಿರುದ್ಧ ಆಡುವ ಮೂಲಕ ಟೂರ್ನಿಯಲ್ಲಿ ಅಭಿಯಾನ ಆರಂಭಿಸಲಿದೆ.

ಟೂರ್ನಿಯಲ್ಲಿ 38 ತಂಡಗಳು ಪಾಲ್ಗೊಳ್ಳಲಿದ್ದಸು, ಈ ಪೈಕಿ ತಲಾ 8 ತಂಡಗಳ 4 ಎಲೈಟ್ ಗುಂಪುಗಳು ಹಾಗೂ 6 ತಂಡವಿರುವ 1 ಪ್ಲೇಟ್‌ ಗುಂಪನ್ನಾಗಿ ವಿಂಗಡಿಸಲಾಗಿದೆ. ಕರ್ನಾಟಕ ಎಲೈಟ್‌ ‘ಸಿ’ ಗುಂಪಿನಲ್ಲಿ ಪಂಜಾಬ್, ರೈಲ್ವೇಸ್‌, ತಮಿಳುನಾಡು, ಗೋವಾ, ಗುಜರಾತ್‌, ತ್ರಿಪುರಾ, ಚಂಡೀಗಢ ಜೊತೆ ಸ್ಥಾನ ಗಿಟ್ಟಿಸಿಕೊಂಡಿದೆ.

 ಟೂರ್ನಿಯ ಮಾದರಿ: 6 ತಂಡಗಳಿರುವ ಪ್ಲೇಟ್‌ ಗುಂಪಿನಲ್ಲಿ ಪ್ರತಿ ತಂಡಗಳು ಒಮ್ಮೆ ಪರಸ್ಪರ ಸೆಣಸಾಡಲಿದೆ. ಅಗ್ರ 4 ತಂಡಗಳು ಸೆಮೀಸ್‌ಗೇರಿ, ಗೆಲ್ಲುವ ತಂಡಗಳು ಫೆ.17ರಿಂದ ಪ್ಲೇಟ್‌ ಫೈನಲ್‌ನಲ್ಲಿ ಸೆಣಸಾಡಲಿದೆ. ಇನ್ನು, ಎಲೈಟ್‌ ಗುಂಪಿನ ತಂಡಗಳು ಗುಂಪು ಹಂತದಲ್ಲಿ ಇತರ ತಂಡಗಳ ವಿರುದ್ಧ 1 ಬಾರಿ ಮುಖಾಮುಖಿಯಾಗಲಿದ್ದು, ಅಗ್ರ 2 ತಂಡಗಳು ಕ್ವಾರ್ಟರ್‌ ಫೈನಲ್‌ಗೇರಲಿವೆ.

ಮಾ.10ರಿಂದ ಫೈನಲ್‌ ಪಂದ್ಯ ನಡೆಯಲಿದ್ರಾದು, ರಾಜ್ಯಕ್ಕೆ ದಶಕದ ಬಳಿಕ ಪ್ರಶಸ್ತಿ ಗುರಿ ಕರ್ನಾಟಕ ತಂಡ ರಣಜಿಯ ಬಲಿಷ್ಠ ತಂಡಗಳಲ್ಲಿ ಒಂದು. 8 ಬಾರಿ ಪ್ರಶಸ್ತಿ ಗೆದ್ದಿದ್ದು, 6 ಬಾರಿ ರನ್ನರ್‌ ಅಪ್‌ ಆಗಿದೆ. ಆದರೆ 2014-15ರಲ್ಲಿ ಪ್ರಶಸ್ತಿ ಗೆದ್ದ ಬಳಿಕ ಒಮ್ಮೆಯೂ ಫೈನಲ್‌ಗೇರಿಲ್ಲ. ಅಂದರೆ ರಾಜ್ಯ ತಂಡ ಒಂದು ದಶಕದಿಂದಲೂ ಪ್ರಶಸ್ತಿ ಬರ ಎದುರಿಸುತ್ತಿದೆ. 

ಈ ವರ್ಷ ಸೆಮಿಫೈನಲ್‌ನಲ್ಲಿ ಎಡವಿದ್ದ ಕರ್ನಾಟಕ ಈ ವರ್ಷ ಪ್ರಶಸ್ತಿ ಮೇಲೆ ಕಣ್ಣಿಟ್ಟಿದೆ. ಅನುಭವಿಗಳಾದ ಮಯಾಂಕ್‌, ಮನೀಶ್‌ ಪಾಂಡೆ ಜೊತೆಗೆ ಮೊದಲ ಬಾರಿ ರಾಜ್ಯ ರಣಜಿ ತಂಡಕ್ಕೆ ಆಯ್ಕೆಯಾಗಿರುವ ಶಶಿಕುಮಾರ್‌, ಕಿಶನ್‌ ಬಿದಾರೆ, ರೋಹಿತ್‌ ಕುಮಾರ್‌ ಸೇರಿದಂತೆ ಯುವ ಪ್ರತಿಭಾವಂತ ಆಟಗಾರರ ಮೇಲೆ ಹೆಚ್ಚಿನ ನಿರೀಕ್ಷೆ ಇದೆ.

PREV

Recommended Stories

ಭಾರತ-ಇಂಗ್ಲೆಂಡ್‌ ಸರಣಿ ಕ್ಲೈಮ್ಯಾಕ್ಸ್‌ ಇಂದು !
ವಯೋ ವಂಚನೆ ಪತ್ತೆಗೆ ಖಾಸಗಿ ಸಂಸ್ಥೆ ನೆರವುಪಡೆಯಲಿದೆ ಬಿಸಿಸಿಐ