ಮತ್ತೆ ಕರ್ನಾಟಕ ತಂಡ ಪರ ಕಣಕ್ಕಿಳಿಯಲು ಕರುಣ್ ಸಜ್ಜು : ಗೋವಾ ಸೇರಿದ ಕೌಶಿಕ್‌

KannadaprabhaNewsNetwork |  
Published : Jul 21, 2025, 01:30 AM ISTUpdated : Jul 21, 2025, 08:48 AM IST
ಕರುಣ್‌ ನಾಯರ್‌ | Kannada Prabha

ಸಾರಾಂಶ

2 ವರ್ಷ ಹಿಂದೆ ವಿದರ್ಭ ಸೇರಿದ್ದ ತಾರಾ ಬ್ಯಾಟರ್‌. ಆದರೆ ಕೌಟುಂಬಿಕ ಕಾರಣಗಳಿಂದಾಗಿ ಮತ್ತೆ ಕರ್ನಾಟಕ ಪರ ಆಡಲು ಮುಂದಾಗಿದ್ದಾರೆ.

 ಬೆಂಗಳೂರು :  ಎರಡು ವರ್ಷಗಳ ಹಿಂದೆ ಕರ್ನಾಟಕ ತಂಡ ತೊರೆದು ವಿದರ್ಭ ಸೇರ್ಪಡೆಗೊಂಡಿದ್ದ ತಾರಾ ಕ್ರಿಕೆಟಿಗ ಕರುಣ್‌ ನಾಯರ್‌ ಮತ್ತೆ ರಾಜ್ಯ ತಂಡಕ್ಕೆ ಸೇರ್ಪಡೆಗೊಳ್ಳಲಿದ್ದಾರೆ. ಅವರು ಈ ಬಾರಿ ದೇಸಿ ಋತುವಿನಲ್ಲಿ ಕರ್ನಾಟಕ ಪರ ಆಡುವುದು ಬಹುತೇಕ ಖಚಿತವಾಗಿದೆ ಎಂದು ಮೂಲಗಳು ತಿಳಿಸಿವೆ.

2023ರಲ್ಲಿ ವಿದರ್ಭ ಸೇರಿದ್ದ ಕರುಣ್ 2 ಆವೃತ್ತಿಗಳಲ್ಲಿ ತಂಡ ಪ್ರತಿನಿಧಿಸಿದ್ದಾರೆ. ಕಳೆದ ಬಾರಿ ಬ್ಯಾಟಿಂಗ್‌ನಲ್ಲಿ ಅಭೂತಪೂರ್ವ ಪ್ರದರ್ಶನ ನೀಡಿದ್ದ ಅವರು ವಿದರ್ಭ ತಂಡ ರಣಜಿಯಲ್ಲಿ ಚಾಂಪಿಯನ್‌, ವಿಜಯ್‌ ಹಜಾರೆಯಲ್ಲಿ ರನ್ನರ್‌-ಅಪ್‌ ಆಗಲು ಪ್ರಮುಖ ಕಾರಣರಾಗಿದ್ದರು. ಆದರೆ ಕೌಟುಂಬಿಕ ಕಾರಣಗಳಿಂದಾಗಿ ಮತ್ತೆ ಕರ್ನಾಟಕ ಪರ ಆಡಲು ಮುಂದಾಗಿದ್ದು, ಇದಕ್ಕಾಗಿ ವಿದರ್ಭ ಕ್ರಿಕೆಟ್‌ ಸಂಸ್ಥೆ ಜೊತೆ ಎನ್‌ಒಸಿ ಕೇಳಿದ್ದಾರೆ ಎಂದು ತಿಳಿದುಬಂದಿದೆ.

ವೇಗಿ ಕೌಶಿಕ್ ಗೋವಾ ಸೇರ್ಪಡೆಇತ್ತೀಚೆಗಷ್ಟೇ ಕರ್ನಾಟಕ ತಂಡ ತೊರೆದಿದ್ದ ವೇಗಿ ವಾಸುಕಿ ಕೌಶಿಕ್‌ ಮುಂದಿನ ಋತುವಿನಲ್ಲಿ ಗೋವಾ ಪರ ಆಡುವುದು ಖಚಿತವಾಗಿದೆ. ಅವರ ಮನವಿಯನ್ನು ಗೋವಾ ಕ್ರಿಕೆಟ್‌ ಸಂಸ್ಥೆ ಪುರಸ್ಕರಿಸಿದೆ. ‘ಗೋವಾ ಪರ ಆಡುವುದಕ್ಕೆ ಅನುಮತಿ ಕೇಳಿದ್ದೆ. ಅದಕ್ಕೆ ಸಮ್ಮತಿಸಿದ್ದಾರೆ. ಮುಂದಿನ ಬಾರಿ ಗೋವಾ ತಂಡ ಪರ ಕಣಕ್ಕಿಳಿಯಲಿದ್ದೇನೆ’ ಎಂದು ಕೌಶಿಕ್‌ ಕನ್ನಡಪ್ರಭ ಪತ್ರಿಕೆಗೆ ತಿಳಿಸಿದ್ದಾರೆ.

PREV
Get the latest sports news in Kannada (ಕ್ರೀಡಾ ಸುದ್ದಿ) — live cricket scores, football highlights, tennis, badminton, and updates on all major sports events. Stay ahead with Kannada Prabha’s full-coverage sports reporting.
Read more Articles on

Recommended Stories

ಕಪ್‌ತುಳಿತ ತನಿಖಾ ವರದಿ ಹೈಕೋರ್ಟ್‌ ಪರಾಮರ್ಶೆಗೆ
₹10 ಲಕ್ಷ ಕೊಡಿ, ಮೆಸ್ಸಿ ಜೊತೆಗೆ ಒಂದು ಫೋಟೋ ತೆಗೆಸಿಕೊಳ್ಳಿ!