ನೂತನ ಬಸ್‌ಗೆ ಅಲ್ಲಂಪ್ರಭು ಪಾಟೀಲ್‌ ಹಸಿರು ನಿಶಾನೆ

| Published : Jan 13 2024, 01:36 AM IST

ನೂತನ ಬಸ್‌ಗೆ ಅಲ್ಲಂಪ್ರಭು ಪಾಟೀಲ್‌ ಹಸಿರು ನಿಶಾನೆ
Share this Article
  • FB
  • TW
  • Linkdin
  • Email

ಸಾರಾಂಶ

ಕಲಬುರಗಿಯಿಂದ ದಾವಣಗೆರೆ ಹಾಗೂ ಶಿವಮೊಗ್ಗಕ್ಕೆ ಸಂಚರಿಸಲು ಪ್ರಯಾಣಿಕರು ಅನುಕೂಲವಾಗುವಂತೆ ನಾನ್‌ ಎಸಿ ಸ್ಲೀಪರ್‌ ಕೋಚ್‌ನ ನೂತನ ಬಸ್‌ ಸೇವೆಗಳಿಗೆ ಕಲಬುರಗಿ ದಕ್ಷಿಣ ಶಾಸಕ ಅಲ್ಲಂಪ್ರಭು ಪಾಟೀಲ್‌ ಹಸಿರು ನಿಶಾನೆ ತೋರಿಸಿದರು. ಈ ವೇಳೆ ಸಾರಿಗೆ ಸಂಸ್ತೆಯ ಅಧಿಕಾರಿಗಳು ಇದ್ದರು.

ಕಲಬುರಗಿ: ಕಲಬುರಗಿಯಿಂದ ದಾವಣಗೆರೆ ಹಾಗೂ ಶಿವಮೊಗ್ಗಕ್ಕೆ ಸಂಚರಿಸಲು ಪ್ರಯಾಣಿಕರು ಅನುಕೂಲವಾಗುವಂತೆ ನಾನ್‌ ಎಸಿ ಸ್ಲೀಪರ್‌ ಕೋಚ್‌ನ ನೂತನ ಬಸ್‌ ಸೇವೆಗಳಿಗೆ ಕಲಬುರಗಿ ದಕ್ಷಿಣ ಶಾಸಕ ಅಲ್ಲಂಪ್ರಭು ಪಾಟೀಲ್‌ ಹಸಿರು ನಿಶಾನೆ ತೋರಿಸಿದರು.

ಕಲಬುರಗಿಯಿಂದ ದಾವಣಗೆರೆಗೆ ನಿತ್ಯ ರಾತ್ರಿ 8 ಗಂಟೆಗೆ ಹೊರಡುವ ಈ ಬಸ್‌ ಮರುದಿನ ಬೆಳಗ್ಗೆ 9 ಗಂಟೆಯೊಳಗೆ ದಾವಣಗೆರೆ ತಲುಪಲಿದೆ. ಇನ್ನು ಕಲಬುರಗಿಯಿಂದ ನಿತ್ಯ ಸಂಜೆ 6.30ಕ್ಕೆ ಹೊರಡುವ ಬಸ್‌ ಮರುದಿನ ಬೆಳಗಿನ ಜಾವ ಶಿವಮೊಗ್ಗ ತಲುಪಲಿದೆ. ಪ್ರಯಾಣಿಕರು ಈ ಹೊಸ ಬಸ್‌ಗಳ ಸೇವೆ ಬಳಸಿಕೊಂಡು ಹೆಚ್ಚಿನ ಅನುಕೂಲ ಹೊಂದಲಿ ಎಂದು ಅಲ್ಲಂಪ್ರಭು ಪಾಟೀಲರು ಹಾರೈಸಿದ್ದಾರೆ.

ಈ ವೇಳೆ ಕಲ್ಯಾಣ ಕರ್ನಾಟಕ ಸಾರಿಗೆ ಸಂಸ್ಥೆಯ ಎಲ್ಲಾ ಹಿರಿಯ ಅಧಿಕಾರಿಗಳು ಹಾಜರಿದ್ದು, ಬಸ್‌ ಸೇವೆಯ ಮಾಹಿತಿ ಶಾಸಕರಿಗೆ ವಿವರಿಸಿದರು. ಶಾಸಕ ಅಲ್ಲಂಪ್ರಭು ಪಾಟೀಲರು ಬಸ್‌ ಸೇವೆಗೆ ಚಾಲನೆ ನೀಡಿದ ನಂತರ, ತಾವೇ ಬಸ್‌ ಹತ್ತಿ ಒಳಗಿರುವ ಪ್ರಯಾಣಿಕರಿಗೆ ನೀಡಲಾಗಿರುವ ಸವಲತ್ತುಗಳನ್ನು ವೀಕ್ಷಿಸಿ ಮೆಚ್ಚುಗೆ ವ್ಯಕ್ತಪಡಿಸಿದರು.