ಸಾರಾಂಶ
ಕನ್ನಡಪ್ರಭ ವಾರ್ತೆ ಎಚ್.ಡಿ. ಕೋಟೆಪಟ್ಟಣದ ಸಮಾಜ ಕಲ್ಯಾಣ ಇಲಾಖೆಯಲ್ಲಿ ಕಚೇರಿ ಅಧೀಕ್ಷಕರಾಗಿ 42 ವರ್ಷಗಳ ಕಾಲ ಸುದೀರ್ಘ ಸೇವೆ ಸಲ್ಲಿಸಿ ಶನಿವಾರ ವಯೋ ನಿವೃತ್ತಿ ಹೊಂದಿದ ಎಸ್. ಗೋಪಾಲ ಕೃಷ್ಣಮೂರ್ತಿ ಅವರನ್ನು ಬೀಳ್ಕೊಡಲಾಯಿತು.ಪಟ್ಟಣದ ಅಂಬೇಡ್ಕರ್ ಭವನದಲ್ಲಿ ನಡೆದ ಬೀಳ್ಕೊಡುಗೆ ಸಮಾರಂಭದಲ್ಲಿ ಅಧಿಕಾರಿಗಳು, ಇಲಾಖೆಯ ಸಿಬ್ಬಂದಿ ಎಸ್. ಗೋಪಾಲ ಕೃಷ್ಣಮೂರ್ತಿ ಅವರನ್ನು ಬೀಳ್ಕೊಟ್ಟರು.ತಹಸೀಲ್ದಾರ್ ಶ್ರೀನಿವಾಸ್ ಮಾತನಾಡಿ, ಗೋಪಾಲ ಕೃಷ್ಣಮೂರ್ತಿ ಅವರಿಗೆ ನೀವು ಇನ್ನು ಯಂಗ್ ಇದ್ದೀರಿ, ನಿವೃತ್ತಿ ಅಂದರೆ ನಂಬಲು ಆಗುತ್ತಿಲ್ಲ ಏಕೆಂದರೆ ಇಲಾಖೆಯ ಏನೇ ಕೆಲಸ ಕೊಟ್ಟರು ಅದನ್ನು ಮುಗಿಸದೇ ಬಿಡುತ್ತಿರಲಿಲ್ಲ, ಈಗಿನ ಸರ್ಕಾರಿ ಕೆಲಸದ ಯುವ ಪೀಳಿಗೆಗೆ ನಿಮ್ಮ ಮಾರ್ಗದರ್ಶನ ಅವಶ್ಯಕವಿದೆ ಎಂದು ಹೇಳಿದರು.ಜೀವಿಕಾ ಬಸವರಾಜ್ ಮಾತನಾಡಿ, ಗೋಪಾಲ ಕೃಷ್ಣಮೂರ್ತಿ ಅವರು ಇಲಾಖೆಯ ಏಳಿಗೆಗಾಗಿ ಶ್ರಮಿಸಿದವರು, ಎಷ್ಟೇ ಕೆಲಸದ ಒತ್ತಡ ಇದ್ದರು ತಮ್ಮ ಸೌಮ್ಯ ಸ್ವಭಾವದಿಂದ ಎಲ್ಲ ಸಿಬ್ಬಂದಿಗಳೊಂದಿಗೆ ಪ್ರೀತಿಯಿಂದ ಕೆಲಸ ನಿರ್ವಹಿಸುತ್ತಿದ್ದರು. ಹಾಗೂ ಇಲಾಖೆಗೆ ಹಗಲು ಇರಳು ಎನ್ನದೇ ಶ್ರಮಿಸಿದವರು, ಆದರ್ಶ ವ್ಯಕ್ತಿಯಾಗಿ ಇಲಾಖೆಗೆ ಮಾದರಿಯಾಗಿದ್ದಾರೆ ಎಂದು ತಿಳಿಸಿದರು.ದೇವರಾಜ್ ಮಾತನಾಡಿ, ಎಸ್. ಗೋಪಾಲ ಕೃಷ್ಣಮೂರ್ತಿ ಅವರು ಅಂಬೇಡ್ಕರ್ ಭವನ ನಿರ್ಮಾಣಕ್ಕೆ ಶ್ರಮಿಸಿದವರು ಹಾಗೂ ಸುತ್ತಲಿನ ಪರಿಸರವನ್ನು ಚೆನ್ನಾಗಿ ಇರಿಸಲು ಗಿಡಗಳನ್ನು ನೆಡುಸುವುದರ ಮೂಲಕ ಅಂಬ್ಕೇಡರ್ ಭವನದ ಅಂದವನ್ನು ಇನ್ನಷ್ಟು ಹೆಚ್ಚಿಸಿದ್ದಾರೆ ಎಂದು ಅವರ ಪರಿಸರ ಕಾಳಜಿ ಬಗ್ಗೆ ಮಾತನಾಡಿದರು. ಅಭಿನಂದನೆ ಸ್ವೀಕರಿಸಿ ಗೋಪಾಲ ಕೃಷ್ಣಮೂರ್ತಿ ಬಾವುಕರಾಗಿ ಮಾತನಾಡಿ, ಈ ಇಲಾಖೆಗೆ ಸೇವೆ ಸಲ್ಲಿಸಲು ಸಹಕರಿಸಿದ ಎಲ್ಲ ಅಧಿಕಾರಿಗಳು, ರಾಜಕಾರಾಣಿಗಳು ಹಾಗೂ ಸಿಬ್ಬಂದಿ ವರ್ಗದವರಿಗೆ ಧನ್ಯವಾದ ತಿಳಿಸಿದರು, ಇಲಾಖೆಯಲ್ಲಿ ಸಹಾಯಕ ನಿರ್ದೇಶಕರಾಗಿಯೂ ಸೇವೆ ಸಲ್ಲಿಸಲು ಅವಕಾಶ ಸಿಕ್ಕಿದೆ, ಹಾಗಾಗಿ ಬಾಬಾ ಸಾಹೇಬ್ ಅಂಬೇಡ್ಕರ್ ಅವರನ್ನು ಸ್ಮರಿಸಿ, ಎಲ್ಲರಿಗೂ ಕೃತಜ್ಞತೆ ಸಲ್ಲಿಸಿದರು.ಇದೇ ವೇಳೆ ಎಲ್ಲಾ ಸಿಬ್ಬಂದಿ ವರ್ಗದವರು ನಿಮ್ಮ ನಿವೃತ್ತಿ ಜೀವನ ಚೆನ್ನಾಗಿರಲಿ ಎಂದು ಹಾರೈಸಿದರು.
ಬಿಆರ್.ಪಿ ಶಿವಶಂಕರ್, ಸಹಾಯಕ ನಿರ್ದೇಶಕ ಸಮಾಜ ಕಲ್ಯಾಣ ಇಲಾಖೆ ರಾಮಸ್ವಾಮಿ, ತನಿಖಾ ಸಹಾಯಕ ಶ್ರೀನಿವಾಸ್ ಪ್ರಸಾದ್, ಕಚೇರಿ ಅಧೀಕ್ಷಕ ಎಂ.ಜೆ. ರಮೇಶ್, ಮಹಾಲಿಂಗಯ್ಯ, ಆಶೀಷ್ ಬೋದನ್ ಕರ್, ಮಹೇಂದ್ರ, ಮಹದೇವಸ್ವಾಮಿ, ಕಲಾವತಿ ಹಾಗೂ ಕಚೇರಿ ಸಿಬ್ಬಂದಿ ವರ್ಗದವರು, ನಿಲಯ ಮೇಲ್ವಿಚಾಕರು, ತಾಲೂಕಿನ ಅಡುಗೆ ತಯಾರಕರು ಹಾಗೂ ಸಹಾಯಕರು ಇದ್ದರು.