ನಗರದಿಂದ ಕೌಲಲಾಂಪುರಕ್ಕೆ ₹52 ಲಕ್ಷ ನಗದು ಸಾಗಿಸಲೆತ್ನ

KannadaprabhaNewsNetwork |  
Published : Mar 05, 2024, 01:38 AM ISTUpdated : Mar 05, 2024, 02:51 PM IST
gold

ಸಾರಾಂಶ

ಬ್ಯಾಗ್‌ನಲ್ಲಿ 52 ಲಕ್ಷ ತುಂಬಿಸಿಕೊಂಡು ಕೌಲಾಲಾಂಪುರ್‌ಗೆ ಸಾಗಿಸಲು ಯತ್ನಿಸಿದ ವ್ಯಕ್ತಿಯನ್ನು ಬಂಧಿಸಿರುವ ಬೆಂಗಳೂರು ಏರ್‌ಪೋರ್ಟ್‌ ಅಧಿಕಾರಿಗಳು ಹಣವನ್ನು ಜಪ್ತಿ ಮಾಡಿದ್ದಾರೆ.

ಕನ್ನಡಪ್ರಭ ವಾರ್ತೆ ಬೆಂಗಳೂರು

ಎರಡು ಪ್ರತ್ಯೇಕ ಪ್ರಕರಣಗಳಲ್ಲಿ ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ(ಕೆಐಎ)ದ ಕಸ್ಟಮ್ಸ್‌ ಅಧಿಕಾರಿಗಳು ಇಬ್ಬರು ಪ್ರಯಾಣಿಕರನ್ನು ಬಂಧಿಸಿ, ₹51.95 ಲಕ್ಷ ನಗದು ಹಾಗೂ ₹50.79 ಲಕ್ಷ ಮೌಲ್ಯದ 824 ಗ್ರಾಂ ತೂಕದ ಚಿನ್ನವನ್ನು ಜಪ್ತಿ ಮಾಡಿದ್ದಾರೆ.

ಭಾರತೀಯ ಪ್ರಯಾಣಿಕನೊಬ್ಬ ಫೆ.29ರಂದು ರಾತ್ರಿ ಕೆಐಎ ವಿಮಾನ ನಿಲ್ದಾಣದಿಂದ ಕೌಲಲಾಂಪುರಕ್ಕೆ ₹500 ಮುಖಬೆಲೆಯ ನೋಟುಗಳಲ್ಲಿ ₹51.95 ಲಕ್ಷವನ್ನು ಲಗೇಜ್‌ ರೂಪದಲ್ಲಿ ಅಕ್ರಮವಾಗಿ ಸಾಗಿಸಲು ಯತ್ನಿಸಿದ್ದಾನೆ. 

ಪ್ರಯಾಣಿಕರ ಲಗೇಜುಗಳನ್ನು ಕಸ್ಟಮ್ಸ್ ಅಧಿಕಾರಿಗಳು ತಪಾಸಣೆ ಮಾಡುವಾಗ ಬ್ಯಾಗ್‌ವೊಂದರ ಬಗ್ಗೆ ಅನುಮಾನಗೊಂಡು ವಶಕ್ಕೆ ಪಡೆದು ಪರಿಶೀಲಿಸಿದಾಗ ಹಣ ಇರುವುದು ಕಂಡು ಬಂದಿದೆ. ಕೂಡಲೇ ಆ ಹಣವನ್ನು ಜಪ್ತಿ ಮಾಡಿ ಪ್ರಯಾಣಿಕನನ್ನು ಬಂಧಿಸಿದ್ದಾರೆ.

ಮತ್ತೊಂದು ಪ್ರಕರಣದಲ್ಲಿ ಮಾ.1ರ ರಾತ್ರಿ ದುಬೈನಿಂದ ಕೆಐಎ ವಿಮಾನ ನಿಲ್ದಾಣಕ್ಕೆ ಆಗಮಿಸಿದ ಪ್ರಯಾಣಿಕರನ್ನು ಕಸ್ಟಮ್ಸ್‌ ಆಧಿಕಾರಿಗಳು ತಪಾಸಣೆ ಮಾಡಿದ್ದಾರೆ. 

ಈ ವೇಳೆ ಥೈಲ್ಯಾಂಡ್‌ ಮೂಲದ ಪ್ರಯಾಣಿಕನೊಬ್ಬನ ಲಗೇಜ್‌ ಪರಿಶೀಲಿಸಿದಾಗ ಪೇಸ್ಟ್‌ ರೂಪದಲ್ಲಿ ಬರೋಬ್ಬರಿ 824 ಗ್ರಾಂ ಚಿನ್ನ ಕಳ್ಳ ಸಾಗಣೆ ಮಾಡುತ್ತಿರುವುದು ಕಂಡು ಬಂದಿದೆ. ಆತನನ್ನು ಬಂಧಿಸಿ, ಚಿನ್ನವನ್ನು ಜಪ್ತಿ ಮಾಡಲಾಗಿದೆ.

PREV
Stay informed with the latest crime news in Kannada from Karnataka and India, criminal incidents, police actions, investigations, court verdicts, public safety alerts and breaking updates on Kannada Prabha.

Recommended Stories

ಸಹವಾಸ, ಒತ್ತಾಯಕ್ಕೆ ಗಾಂಜಾ ಜಾಲಕ್ಕೆ ವಿದ್ಯಾರ್ಥಿಗಳು!
15 ವರ್ಷಗಳಿ ಸುವರ್ಣನ್ಯೂಸ್, ಕನ್ನಡಪ್ರಭದಲ್ಲಿ ಕೆಲಸ ಮಾಡುತ್ತಿದ್ದ ಮಹಿ‍ಳೆ ಅಪಘಾತದಲ್ಲಿ ದಾರುಣ ಸಾವು