ಬೆಂಗಳೂರು : ಅಕ್ರಮ ಸಂಬಂಧ ಶಂಕೆ ಹಿನ್ನೆಲೆಯಲ್ಲಿ ಮದ್ಯ ಸೇವಿಸಿ ಸ್ನೇಹಿತೆ ಜತೆ ಮನೆಗೆ ಬಂದು ಮಲಗಿದ್ದ ಪತ್ನಿ ಹತ್ಯೆ

KannadaprabhaNewsNetwork |  
Published : Aug 29, 2024, 02:03 AM ISTUpdated : Aug 29, 2024, 04:34 AM IST
Bengaluru Beauty Navya

ಸಾರಾಂಶ

ಪತ್ನಿಯ ಶೀಲ ಶಂಕಿಸಿದ ಪತಿಯು ಆಕೆ ಮಲಗಿದ್ದಾಗ ಕತ್ತನ್ನು ಸೀಳಿ ಕೊಂದು ಪೊಲೀಸರಿಗೆ ಶರಣಾಗಿದ್ದಾನೆ.

 ಬೆಂಗಳೂರು : ಅಕ್ರಮ ಸಂಬಂಧ ಶಂಕೆ ಹಿನ್ನೆಲೆಯಲ್ಲಿ ಮದ್ಯ ಸೇವಿಸಿ ಸ್ನೇಹಿತೆ ಜತೆ ಮನೆಗೆ ಬಂದು ಮಲಗಿದ್ದ ಪತ್ನಿಯನ್ನು ಹತ್ಯೆಗೈದು ಬಳಿಕ ಪೊಲೀಸ್ ಠಾಣೆಗೆ ತೆರಳಿ ಕ್ಯಾಬ್ ಚಾಲಕನೊಬ್ಬ ಶರಣಾಗಿರುವ ಘಟನೆ ಕೆಂಗೇರಿ ಉಪನಗರ ಸಮೀಪ ನಡೆದಿದೆ.

ಕೆಂಗೇರಿ ಉಪನಗರ ಸಮೀಪದ ವಿಶ್ವೇಶ್ವರಯ್ಯ ಲೇಔಟ್ ನಿವಾಸಿ ನವ್ಯಶ್ರೀ (28) ಕೊಲೆಯಾದ ದುರ್ದೈವಿ. ಈ ಹತ್ಯೆ ಬಳಿಕ ಕೆಂಗೇರಿ ಪೊಲೀಸ್ ಠಾಣೆಗೆ ತೆರಳಿ ಆರೋಪಿ ಕಿರಣ್ ಶರಣಾಗಿದ್ದಾನೆ. ಕೌಟುಂಬಿಕ ಕಲಹ ಹಿನ್ನೆಲೆಯಲ್ಲಿ ಪತ್ನಿಯನ್ನು ಆತ ಹತ್ಯೆಗೈದಿದ್ದಾಗಿ ವಿಚಾರಣೆ ವೇಳೆ ಆರೋಪಿ ತಪ್ಪಿಕೊಂಡಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ.

ಹೇಗೆ ಘಟನೆ?:

ಮೂರು ವರ್ಷಗಳ ಹಿಂದೆ ಶಿವಮೊಗ್ಗ ಜಿಲ್ಲೆ ಭದ್ರಾವತಿ ತಾಲೂಕಿನ ನೃತ್ಯ ಶಿಕ್ಷಕಿ ನವ್ಯಾ ಹಾಗೂ ಕ್ಯಾಬ್ ಚಾಲಕ ಕಿರಣ್ ಪ್ರೇಮ ವಿವಾಹವಾಗಿದ್ದು, ಮದುವೆ ನಂತರ ಕೆಂಗೇರಿ ಸಮೀಪದ ಸರ್‌.ಎಂ.ವಿಶ್ವೇಶ್ವರಯ್ಯ ಲೇಔಟ್‌ನಲ್ಲಿ ದಂಪತಿ ವಾಸವಾಗಿದ್ದರು. ಇತ್ತೀಚೆಗೆ ಕೌಟುಂಬಿಕ ಕಲಹದಿಂದ ಸತಿ-ಪತಿ ಮಧ್ಯೆ ಮನಸ್ತಾಪವಾಗಿತ್ತು. ಪತ್ನಿಯ ಶೀಲ ಶಂಕಿಸಿ ಕಿರಣ್ ಜಗಳವಾಡುತ್ತಿದ್ದ. ತನಗೆ ಪತಿ ಕಿರಣ್ ಚಿತ್ರ ಹಿಂಸೆ ಕೊಡುತ್ತಿರುವ ಸಂಗತಿಯನ್ನು ಸ್ನೇಹಿತರ ಜತೆ ನವ್ಯಾ ತೋಡಿಕೊಂಡಿದ್ದಳು ಎನ್ನಲಾಗಿದೆ.

ಅಂತೆಯೇ ತನ್ನ ಸ್ನೇಹಿತೆಯನ್ನು ಮಂಗಳವಾರ ಬೆಳಗ್ಗೆ ನವ್ಯ ಭೇಟಿಯಾಗಿದ್ದಳು. ನಂತರ ರಾಜರಾಜೇಶ್ವರಿ ನಗರಕ್ಕೆ ಕಾರಿನಲ್ಲಿ ತೆರಳಿ ಅಲ್ಲಿ ತಮ್ಮ ಸ್ನೇಹಿತನನ್ನು ಇಬ್ಬರು ಭೇಟಿಯಾಗಿದ್ದಾರೆ. ಆಗ ತನ್ನ ಕೌಟುಂಬಿಕ ಗಲಾಟೆ ಸಂಗತಿಯನ್ನು ಮತ್ತೆ ನವ್ಯಾ ಹೇಳಿಕೊಂಡು ಕಣ್ಣೀರಿಟ್ಟಿದ್ದಳು. ಆಗ ಈ ಬಗ್ಗೆ ಪತಿ ವಿರುದ್ಧ ಪೊಲೀಸ್ ಠಾಣೆಗೆ ದೂರು ಕೊಡುವಂತೆ ಆಕೆಗೆ ಸ್ನೇಹಿತ ಅನಿಲ್‌ ಸಲಹೆ ಕೊಟ್ಟಿದ್ದ.ಇದಾದ ನಂತರ ಮದ್ಯ ಸೇವಿಸಿ ರಾತ್ರಿ 11.30 ಗಂಟೆಗೆ ತನ್ನ ಸ್ನೇಹಿತೆಯ ಜತೆ ಮನೆಗೆ ಬಂದು ನವ್ಯಾ ಮಲಗಿದ್ದಾಳೆ. ಆದರೆ ಪತ್ನಿ ಬರುವ ಮುನ್ನವೇ ತನ್ನ ಬಳಿ ಇದ್ದ ಮನೆಯ ಮತ್ತೊಂದು ಕೀ ಬಳಸಿ ಒಳ ಪ್ರವೇಶಿಸಿದ ಕಿರಣ್‌, ರೂಮ್‌ನಲ್ಲಿ ಮಲಗಿದ ಬಳಿಕ ಪತ್ನಿ ಕುತ್ತಿಗೆ ಚಾಕುವಿನಿಂದ ಕುಯ್ದು ಕೊಂದು ಪರಾರಿಯಾಗಿದ್ದಾನೆ. ಈ ಬಗ್ಗೆ ಠಾಣೆಯಲ್ಲಿ ದೂರು ದಾಖಲಾದ ಬಳಿಕ ತಾನಾಗಿಯೇ ಬಂದು ಆತ ಶರಣಾಗಿದ್ದಾನೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಈ ಹತ್ಯೆ ಸಂಬಂಧ ಕೆಂಗೇರಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಬಟ್ಟೆ ರಕ್ತದಲ್ಲಿ ನೆನೆದು ತಂಪಾದಾಗ ಎಚ್ಚರ

ತಾನು ರಾತ್ರಿ ಬಿಯರ್‌ ಕುಡಿದಿದ್ದರಿಂದ ರಾತ್ರಿ ಗಾಢ ನಿದ್ರೆಗೆ ಹೋಗಿದ್ದು, ಬೆಳಗ್ಗೆ 6 ಗಂಟೆಗೆ ತನ್ನ ಬಟ್ಟೆ ತೇವಗೊಂಡಿರುವ ಅರಿವಿಗೆ ಬಂತು. ತಕ್ಷಣವೇ ಎಚ್ಚರವಾದಾಗ ಪಕ್ಕದಲ್ಲಿ ಮಲಗಿದ್ದ ನವ್ಯಶ್ರೀ ಕೊಲೆಯಾಗಿರುವುದು ಕಂಡು ಆಘಾತವಾಯಿತು. ಕೂಡಲೇ ತಾನು ಭಯದಿಂದ ಜೋರಾಗಿ ಚೀರಾಡಿದೆ. ಬಳಿಕ ಸ್ಥಳೀಯರಿಗೆ ವಿಷಯ ತಿಳಿಸಿ ಪೊಲೀಸ್ ನಿಯಂತ್ರಣ ಕೊಠಡಿಗೆ ಕರೆ ಮಾಡಿ ಘಟನೆ ಕುರಿತು ಮಾಹಿತಿ ನೀಡಿದೆ ಎಂದು ಮೃತಳ ಸ್ನೇಹಿತೆ ದೂರಿನಲ್ಲಿ ಉಲ್ಲೇಖಿಸಿದ್ದಾರೆ.

PREV
Stay informed with the latest crime news in Kannada from Karnataka and India, criminal incidents, police actions, investigations, court verdicts, public safety alerts and breaking updates on Kannada Prabha.

Recommended Stories

ಸಹವಾಸ, ಒತ್ತಾಯಕ್ಕೆ ಗಾಂಜಾ ಜಾಲಕ್ಕೆ ವಿದ್ಯಾರ್ಥಿಗಳು!
15 ವರ್ಷಗಳಿ ಸುವರ್ಣನ್ಯೂಸ್, ಕನ್ನಡಪ್ರಭದಲ್ಲಿ ಕೆಲಸ ಮಾಡುತ್ತಿದ್ದ ಮಹಿ‍ಳೆ ಅಪಘಾತದಲ್ಲಿ ದಾರುಣ ಸಾವು