ಕನ್ನಡಪ್ರಭ ವಾರ್ತೆ ಬೆಳಗಾವಿ
ದೀಪಾ ಅವಟಗಿ, ಶಿವಾನಂದ ಮಠಪತಿ, ಅಪ್ಪಯ್ಯ ಪೂಜಾರಿ, ಸುನೀಲ ವಿಭೂತಿ, ಸಚಿನಕುಮಾರ ಅಂಬ್ಲಿ, ಭರತೇಶ ಅಗಸರ ಮತ್ತು ಶಶಾಂಕ ರಾವಸಾಹೇಬ ದೊಡ್ಡಣ್ಣವರ ಬಂಧಿತ ಆರೋಪಿಗಳು. ಆರೋಪಿಗಳಿಂದ ಕೃತ್ಯಕ್ಕೆ ಬಳಿಸಿದ ಎರಡು ವಾಹನ ಹಾಗೂ ₹11 ಲಕ್ಷ ನಗದು ಸೇರಿದಂತೆ ಒಟ್ಟು ₹22 ಲಕ್ಷ ಮೌಲ್ಯದ ಸ್ವತ್ತನ್ನು ವಶಪಡಿಸಿಕೊಳ್ಳಲಾಗಿದೆ. ಈ ಕುರಿತು ಕಾಕತಿ ಪೊಲೀಸ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಸಿದ್ದನಗೌಡ ಬಿರಾದಾರ ಕೊಲ್ಲಾಪುರಕ್ಕೆ ತೆರಳಿ ವಾಪಸ್ ಬರುತ್ತಿದ್ದ ವೇಳೆ ಈ ವಂಚಕರ ತಂಡ ಪರಿಚಯ ಮಾಡಿಕೊಂಡಿತ್ತು. ಈ ವೇಳೆ ವಂಚಕಿ ಮತ್ತು ಬಿರಾದಾರ ಪರಸ್ಪರ ಮೊಬೈಲ್ ನಂಬರ ವಿನಿಮಯ ಮಾಡಿಕೊಂಡಿದ್ದರು. 15 ದಿನಗಳ ಕಾಲ ಇಬ್ಬರ ನಡುವೆ ಮೊಬೈಲ್ ಸಮರ್ಪಕದಲ್ಲಿದ್ದರು. ಬಳಿಕಹಣ ದುಪ್ಪಟ್ಟು ಮಾಡಿಕೊಡುವುದಾಗಿ ನಂಬಿಸಿ, ಬಿರಾದಾರಕಡೆಯಿಂದ ₹25 ಲಕ್ಷ ಪಡೆದಿದ್ದರು. ಈ ವೇಳೆ ಹೋಟೆಲ್ಗೆ ನಕಲಿ ಪೊಲೀಸರ ತಂಡ ಆಗಮಿಸಿ,ಹಣ ಸಮೇತವಾಗಿ ಮಹಿಳೆಯನ್ನು ಕರೆದುಕೊಂಡು ಹೋಗಿದ್ದರು. ಈ ಸಂಬಂಧ ವಂಚನೆಗೊಳಗಾದ ಸಿದ್ದನಗೌಡ ಬಿರಾದಾರ ಅವರನ್ನು ಕಾಕತಿ ಠಾಣೆಗೆದೂರು ನೀಡಿದ್ದರು.