ಮುದ್ದು ಮಾಡಲು ಬಳಿಬಂದ ನಾಯಿಮರಿಯಹೊಡೆದು ಕೊಂದ ಪಾಪಿ

KannadaprabhaNewsNetwork |  
Published : Dec 11, 2023, 01:15 AM IST
ನಾಯಿ | Kannada Prabha

ಸಾರಾಂಶ

ಮುದ್ದು ಮಾಡಲು ಬಂದ ಪುಟ್ಟ ನಾಯಿಮರಿಯೊಂದನ್ನು ವ್ಯಕ್ತಿಯೊಬ್ಬ ಆಕ್ರೋಶದಿಂದ ಎತ್ತಿ ನೆಲಕ್ಕೆ ಬಡಿದು ಹತ್ಯೆ ಮಾಡಿದ ಪೈಶಾಚಿಕ ಘಟನೆ ಮಧ್ಯಪ್ರದೇಶದಲ್ಲಿ ನಡೆದಿದೆ

ಸಿಟ್ಟಲ್ಲಿ ನಾಯಿಯನ್ನು ರಸ್ತೆಗೆ ಎತ್ತಿ ಒಗೆದು ಕಾಲಿನಿಂದ ತುಳಿದು ಕೊಲೆಜಾಲತಾಣಗಳಲ್ಲಿ ವಿಡಿಯೋ ವೈರಲ್‌, ಆರೋಪಿ ವಿರುದ್ಧ ಭಾರೀ ಆಕ್ರೋಶ

ಭೋಪಾಲ್: ಮುದ್ದು ಮಾಡಲು ಬಂದ ಪುಟ್ಟ ನಾಯಿಮರಿಯೊಂದನ್ನು ವ್ಯಕ್ತಿಯೊಬ್ಬ ಆಕ್ರೋಶದಿಂದ ಎತ್ತಿ ನೆಲಕ್ಕೆ ಬಡಿದು ಹತ್ಯೆ ಮಾಡಿದ ಪೈಶಾಚಿಕ ಘಟನೆ ಮಧ್ಯಪ್ರದೇಶದಲ್ಲಿ ನಡೆದಿದೆ. ಈ ಘಟನೆಗೆ ಜಾಲತಾಣದಲ್ಲಿ ತೀವ್ರ ಆಕ್ರೋಶ ವ್ಯಕ್ತವಾಗಿದ್ದು, ಆರೋಪಿ ವಿರುದ್ಧ ಸೂಕ್ತ ಕ್ರಮದ ಭರವಸೆಯನ್ನು ಮುಖ್ಯಮಂತ್ರಿ ಶಿವರಾಜ್‌ ಸಿಂಗ್‌ ಚೌಹಾಣ್‌ ನೀಡಿದ್ದಾರೆ.

ರಾಜ್ಯದ ಗುಣಾ ನಗರದ ಸುಭಾಷ್‌ ಕಾಲೊನಿಯಲ್ಲಿ ವ್ಯಕ್ತಿಯೊಬ್ಬ ಮುಚ್ಚಿದ ಅಂಗಡಿ ಮುಗ್ಗಟ್ಟಿನ ಮೆಟ್ಟಿಲುಗಳ ಮೇಲೆ ಕುಳಿತುಕೊಂಡಿದ್ದ. ಈ ವೇಳೆ ಆತನ ಬಳಿ ಎರಡು ಪುಟ್ಟ ನಾಯಿಮರಿಗಳು ಬಾಲ ಅಲ್ಲಾಡಿಸುತ್ತ ಬಂದಿವೆ. ಈ ಪೈಕಿ ಒಂದು ಮರಿ ಹಿಂದಿನಿಂದ ಆತನನ್ನು ಮುಟ್ಟಿದಾಗ ಒಮ್ಮೆಗೆ ಗಾಬರಿಗೊಂಡ ಆತ, ಸಿಟ್ಟಿನಲ್ಲಿ ನಾಯಿಮರಿಯನ್ನು ಎತ್ತಿ ನೆಲಕ್ಕೆ ಅಪ್ಪಳಿಸಿದ್ದಾನೆ. ಬಳಿಕ ಎದ್ದು ಹೋಗಿ ಮತ್ತೆ ನಾಯಿಯನ್ನು ಜೋರಾಗಿ ಎರಡು ಮೂರು ತುಳಿದಿದ್ದಾನೆ. ಪರಿಣಾಮ ಮರಿ ಅಲ್ಲೇ ಸಾವನ್ನಪ್ಪಿದೆ. ಈ ಘಟನೆ ಸಿಸಿಟೀವಿಯೊಂದಲ್ಲಿ ಸೆರೆಯಾಗಿದ್ದು, ನಾಯಿಮರಿ ಕೊಂದ ವ್ಯಕ್ತಿ ಭಾರೀ ಆಕ್ರೋಶ ವ್ಯಕ್ತವಾಗಿದೆ.

PREV
Stay informed with the latest crime news in Kannada from Karnataka and India, criminal incidents, police actions, investigations, court verdicts, public safety alerts and breaking updates on Kannada Prabha.

Recommended Stories

ಒಂದು ವರ್ಷದಲ್ಲಿ ಲಕ್ಷಗಟ್ಟಲೇ ಮೆಟ್ರೋ ನಿಯಮ ಉಲ್ಲಂಘನೆ ಕೇಸ್‌ ದಾಖಲು
ಮೈಸೂರಲ್ಲಿ ಮತ್ತೊಂದು ಹೈಟೆಕ್‌ ಡ್ರಗ್ಸ್‌ ಫ್ಯಾಕ್ಟರಿ ಪತ್ತೆ