ಶಾಲಾ ಬಸ್ ಅಡ್ಡಗಟ್ಟಿ ಕಿರಿಕ್ ಮಾಡಿದ ಕಿಡಿಗೇಡಿಗಳ ಬಂಧನ

KannadaprabhaNewsNetwork |  
Published : Dec 10, 2025, 12:45 AM IST
Crime News

ಸಾರಾಂಶ

ಕುಡಿದ ಅಮಲಿನಲ್ಲಿ ಶಾಲಾ ವಾಹನ ಅಡ್ಡಗಟ್ಟಿ ಬಾಲಕಿಯರಿಗೆ ಹಿಂಸೆ ನೀಡಿದ್ದ ಕಿಡಿಗೇಡಿಗಳನ್ನು ಕಿಕ್ಕೇರಿ ಪೊಲೀಸರು ಬಂಧಿಸಿದ್ದಾರೆ. ಪಟ್ಟಣದ ಖಾಸಗಿ ಶಾಲೆ ಬಸ್ ತಡೆದು ಕಿರಿಕ್ ಮಾಡಿದ್ದ ವಡ್ಡರಹಳ್ಳಿಯ ಗಿರೀಶ ಮತ್ತು ಕಿರಣ್ ಬಂಧಿತರು.

ಕಿಕ್ಕೇರಿ: ಕುಡಿದ ಅಮಲಿನಲ್ಲಿ ಶಾಲಾ ವಾಹನ ಅಡ್ಡಗಟ್ಟಿ ಬಾಲಕಿಯರಿಗೆ ಹಿಂಸೆ ನೀಡಿದ್ದ ಕಿಡಿಗೇಡಿಗಳನ್ನು ಕಿಕ್ಕೇರಿ ಪೊಲೀಸರು ಬಂಧಿಸಿದ್ದಾರೆ.

ಖಾಸಗಿ ಶಾಲೆ ಬಸ್ ತಡೆದು ಕಿರಿಕ್

ಪಟ್ಟಣದ ಖಾಸಗಿ ಶಾಲೆ ಬಸ್ ತಡೆದು ಕಿರಿಕ್ ಮಾಡಿದ್ದ ವಡ್ಡರಹಳ್ಳಿಯ ಗಿರೀಶ (21) ಮತ್ತು ಕಿರಣ್(20) ಬಂಧಿತರು.

ಸಂಜೆ ವಾಹನಗಳಲ್ಲಿ ವಾಪಸ್ ಕರೆದುಕೊಂಡು ಹೋಗುತ್ತಿರುವಾಗ ಕಿರಿಕ್

ಖಾಸಗಿ ಶಾಲೆಯಿಂದ ಮಕ್ಕಳನ್ನು ಎಂದಿನಂತೆ ಸೋಮವಾರ ಸಂಜೆ ವಾಹನಗಳಲ್ಲಿ ವಾಪಸ್ ಕರೆದುಕೊಂಡು ಹೋಗುತ್ತಿರುವಾಗ ಬಸವನಹಳ್ಳಿ ಮಾರ್ಗವಾಗಿ ವಡ್ಡರಹಳ್ಳಿಯಲ್ಲಿ ಇಬ್ಬರು ಕಿಡಿಗೇಡಿಗಳು ಕುಡಿದ ಮತ್ತಿನಲ್ಲಿ ವಾಹನ ಅಡ್ಡಗಟ್ಟಿ ವಿದ್ಯಾರ್ಥಿನಿಯರನ್ನು ವಾಹನದಿಂದ ಕೆಳಗಿಳಿಸಲು ಚಾಲಕನಿಗೆ ಧಮಕಿ ಹಾಕಿದ್ದಾರೆ. ಈ ಸಂಬಂಧ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್‌ ಆಗಿತ್ತು. ಘಟನೆ ನಂತರ ಕಿಡಿಗೇಡಿಗಳು ಸ್ಥಳದಿಂದ ಪರಾರಿಯಾಗಿದ್ದರು. ಈ ಕುರಿತು ಶಾಲಾ ಆಡಳಿತ ಮಂಡಳಿಯವರು ಕಿಕ್ಕೇರಿ ಪೊಲೀಸರಿಗೆ ದೂರು ನೀಡಲಾಗಿದೆ. ಆರೋಪಿಗಳನ್ನು ಪೊಲೀಸರು ಪತ್ತೆಹಚ್ಚಿ ಬಂಧಿಸಿದ್ದಾರೆ.

PREV
Stay informed with the latest crime news in Kannada from Karnataka and India, criminal incidents, police actions, investigations, court verdicts, public safety alerts and breaking updates on Kannada Prabha.
Read more Articles on

Recommended Stories

ಕಾರಿಗೆ ಕಂಟೇನರ್ ಲಾರಿ ಡಿಕ್ಕಿ : ನಾಲ್ವರಿಗೆ ಗಾಯ
ವಿಚ್ಛೇದಿತ ಪತ್ನಿ ಕೊಂದವನಿಗೆ ಜೀವಾವಧಿ ಶಿಕ್ಷೆ..!