ಫಾದರ್‌ ಕಥೆ ಕೇಳಿ ಕಣ್ಣೀರು ಬಂತು : ನಿರ್ಮಾಪಕ ಆರ್‌ ಚಂದ್ರು

KannadaprabhaNewsNetwork |  
Published : Apr 28, 2024, 01:18 AM ISTUpdated : Apr 28, 2024, 05:44 AM IST
Dilpasand Darling Krishna

ಸಾರಾಂಶ

ನಿರ್ದೇಶಕರು ಫಾದರ್‌ ಸಿನಿಮಾ ಕಥೆ ವಿವರಿಸಿದ ರೀತಿ ಕಣ್ಣೀರು ತರಿಸಿತು ಎಂದು ನಿರ್ಮಾಪಕ ಆರ್‌ ಚಂದ್ರು ಹೇಳಿದ್ದಾರೆ.

  ಸಿನಿವಾರ್ತೆ‘

ನಮ್ಮ ಫಾದರ್‌ ಚಿತ್ರದ ರಿಯಲ್‌ ಫಾದರ್‌ ನಿರ್ದೇಶಕ ರಾಜ್‌ಮೋಹನ್‌. ಅವರು ಕಥೆ ಹೇಳಿದ ರೀತಿ ಕೇಳಿ ನಾನೇ ಕಣ್ಣೀರಾದೆ. ನಮ್ಮ ಬ್ಯಾನರ್‌ನಿಂದ ಬರಬೇಕಿದ್ದ ಒಟ್ಟು 5 ಸಿನಿಮಾಗಳಲ್ಲಿ ಇದೇ ಸಿನಿಮಾವನ್ನು ಮೊದಲು ಕೈಗೆತ್ತಿಕೊಂಡೆ. 

9 ತಿಂಗಳ ಟೀಮ್‌ ವರ್ಕ್‌ನ ಫಲಶ್ರುತಿಯಾಗಿ ಸಿನಿಮಾವೀಗ ಶೂಟಿಂಗ್‌ಗೆ ಸಜ್ಜಾಗಿದೆ’ ಎಂದು ನಿರ್ಮಾಪಕ ಆರ್‌ ಚಂದ್ರು ಹೇಳಿದ್ದಾರೆ. ಆರ್‌ಸಿ ಸ್ಟುಡಿಯೋಸ್‌ ಲಾಂಛನದಲ್ಲಿ ಆರ್‌ ಚಂದ್ರು ನಿರ್ಮಿಸುತ್ತಿರುವ ‘ಫಾದರ್‌’ ಸಿನಿಮಾದ ಮುಹೂರ್ತ ಇತ್ತೀಚೆಗೆ ಬೆಂಗಳೂರಿನ ಬಂಡೆ ಮಹಾಂಕಾಳಿ ದೇವಾಲಯದಲ್ಲಿ ನಡೆಯಿತು. ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ನಾಯಕ ಡಾರ್ಲಿಂಗ್‌ ಕೃಷ್ಣ, ‘ಸಿನಿಮಾ ಕಥೆಯನ್ನು ನಾನು, ಪತ್ನಿ ಮಿಲನಾ ಜೊತೆಗೇ ಕೇಳಿದೆವು. 

ನರೇಶನ್‌ ಕೇಳಿದ ತಕ್ಷಣ ಮಿಲನಾ ಈ ಸಿನಿಮಾ ಮಾಡಿ ನೀವು, ನೆನಪಲ್ಲಿ ಉಳಿಯುವ ಸಿನಿಮಾ ಆಗುತ್ತೆ ಅಂತ ಡೈರೆಕ್ಟರ್‌ ಮುಂದೆಯೇ ಹೇಳಿಬಿಟ್ರು. ಸಾಮಾನ್ಯವಾಗಿ ಹೇಳುವ ಹಾಗೆ ಯೋಚನೆ ಮಾಡಿ ಹೇಳ್ತೀನಿ ಅನ್ನೋದಕ್ಕೂ ಅವಕಾಶ ಇಲ್ಲದೇ ಆ ಕ್ಷಣವೇ ಚಿತ್ರಕ್ಕೆ ಗ್ರೀನ್‌ ಸಿಗ್ನಲ್‌ ಕೊಟ್ಟುಬಿಟ್ಟೆ’ ಎಂದರು.

ನಾಯಕಿ ಅಮೃತಾ ಅಯ್ಯಂಗಾರ್‌, ‘ಫಾದರ್‌ ಸಿನಿಮಾ ನರೇಶನ್‌ ಕೇಳಿದ ಮೂರ್ನಾಲ್ಕು ದಿನದವರೆಗೆ ಆ ಗುಂಗಲ್ಲೇ ಇದ್ದೆ’ ಎಂದರು.

ನಿರ್ದೇಶಕ ರಾಜ್‌ಮೋಹನ್‌, ನಿರ್ಮಾಪಕ ಆರ್‌ ಚಂದ್ರು ಅವರ ಹೃದಯ ವೈಶಾಲ್ಯತೆಯ ಗುಣಗಾನ ಮಾಡಿದರು.

‘ಹನುಮಾನ್‌’ ಖ್ಯಾತಿ ಸಂಗೀತ ನಿರ್ದೇಶಕ ಗೌರ ಹರಿ ಈ ಸಿನಿಮಾಕ್ಕೆ ಸಂಗೀತ ಸಂಯೋಜಿಸುತ್ತಿದ್ದಾರೆ.

ಮಾಜಿ ಸಚಿವ ಹೆಚ್‌ ಎಂ ರೇವಣ್ಣ, ಶಾಸಕ ಪ್ರದೀಪ್‌ ಈಶ್ವರ್‌, ಜೇಮ್ಸ್‌ ನಿರ್ದೇಶಕ ಚೇತನ್‌, ನಿರ್ಮಾಪಕ ಕೆ ಪಿ ಶ್ರೀಕಾಂತ್‌ ಸುದ್ದಿಗೋಷ್ಠಿಯಲ್ಲಿದ್ದರು.

PREV
Stay updated with the latest Kannada Cinema News (ಸಿನಿಮಾ ಸುದ್ದಿ) — Sandalwood, TV serials, celebrity gossip, movie reviews, and trending film-world updates. Read fresh entertainment news headlines on Kannada Prabha.

Recommended Stories

45 ಚಿತ್ರದ ಪೇಯ್ಡ್‌ ಪ್ರೀಮಿಯರ್‌ ಶೋಗಳಿಗೆ ಭಾರಿ ಮೆಚ್ಚುಗೆ
ಮಾರ್ಕ್‌ ಬಜೆಟ್‌ ಮ್ಯಾಕ್ಸ್‌ಗಿಂತ 3 ಪಟ್ಟು ದೊಡ್ಡದು: ಸುದೀಪ್‌