250 ವಿದ್ಯಾರ್ಥಿನಿಯರ ಮೇಲಿನ ರೇಪ್‌ ಕೇಸಲ್ಲಿ 6 ಜನರಿಗೆ ಜೀವಾವಧಿ ಶಿಕ್ಷೆ

KannadaprabhaNewsNetwork |  
Published : Aug 21, 2024, 12:35 AM IST
ದೋಷಿಗಳು | Kannada Prabha

ಸಾರಾಂಶ

250ಕ್ಕೂ ಹೆಚ್ಚು ಶಾಲಾ, ಕಾಲೇಜು ವಿದ್ಯಾರ್ಥಿನಿಯರನ್ನು ಬ್ಲಾಕ್‌ಮೇಲ್‌ ಮಾಡಿ ಅವರ ಮೇಲೆ ಅತ್ಯಾಚಾರ ಎಸಗಿದ್ದ ಪ್ರಕರಣದಲ್ಲಿ 6 ಜನರನ್ನು ದೋಷಿಗಳು ಎಂದು ತೀರ್ಪು ನೀಡಿರುವ ಸ್ಥಳೀಯ ಪೋಸ್ಕೋ ನ್ಯಾಯಾಲಯ, ದೋಷಿಗಳಿಗೆ ಜೀವಾವಧಿ ಶಿಕ್ಷೆ ವಿಧಿಸಿದೆ.

ಜೈಪುರ: 250ಕ್ಕೂ ಹೆಚ್ಚು ಶಾಲಾ, ಕಾಲೇಜು ವಿದ್ಯಾರ್ಥಿನಿಯರನ್ನು ಬ್ಲಾಕ್‌ಮೇಲ್‌ ಮಾಡಿ ಅವರ ಮೇಲೆ ಅತ್ಯಾಚಾರ ಎಸಗಿದ್ದ ಪ್ರಕರಣದಲ್ಲಿ 6 ಜನರನ್ನು ದೋಷಿಗಳು ಎಂದು ತೀರ್ಪು ನೀಡಿರುವ ಸ್ಥಳೀಯ ಪೋಸ್ಕೋ ನ್ಯಾಯಾಲಯ, ದೋಷಿಗಳಿಗೆ ಜೀವಾವಧಿ ಶಿಕ್ಷೆ ವಿಧಿಸಿದೆ. ನಫೀಸ್ ಚಿಸ್ತಿ, ನಸೀಂ, ಸಲೀಂ ಚಿಸ್ತಿ, ಇಕ್ಬಾಲ್‌ ಭಾಟಿ, ಸೋಹೇಲ್‌ ಗನಿ, ಸಯೀದ್‌ ಜಮೀರ್‌ ಹುಸ್ಸೇನ್‌ ಶಿಕ್ಷೆಗೊಳಗಾದವರು.

ಇದರೊಂದಿಗೆ 32 ವರ್ಷಗಳ ಹಿಂದೆ ನಡೆದಿದ್ದ ಪ್ರಕರಣ ತಾರ್ಕಿಕ ಅಂತ್ಯ ಕಂಡಂತೆ ಆಗಿದೆ. ಇದೇ ಪ್ರಕರಣಲ್ಲಿ ಇನ್ನಿತರೆ ಕೆಲವರು ಈಗಾಗಲೇ ಜೀವಾವಧಿ ಶಿಕ್ಷೆಗೆ ಒಳಗಾಗಿದ್ದರೆ, ಕೆಲವರು ಶಿಕ್ಷೆ ಪೂರ್ಣಗೊಳಿಸಿ ಬಿಡುಗಡೆಯಾಗಿದ್ದಾರೆ. ಇನ್ನು ಕೆಲವರು ನಾಪತ್ತೆಯಾಗಿದ್ದಾರೆ. ಪ್ರಕರಣದ ದೋಷಿಗಳ ಪೈಕಿ ಬಹುತೇಕರು ಮುಸ್ಲಿಂ ಸಮುದಾಯಕ್ಕೆ ಸೇರಿದವರಾಗಿದ್ದು, ಸಂತ್ರಸ್ತ ವಿದ್ಯಾರ್ಥಿಗಳು ಹಿಂದೂ ಸಮುದಾಯಕ್ಕೆ ಸೇರಿದವರಾಗಿದ್ದ ಕಾರಣ ಘಟನೆ ನಡೆದ ಅವಧಿಯಲ್ಲಿ ರಾಜಸ್ಥಾನದಲ್ಲಿ ಭಾರೀ ಉದ್ವಿಗ್ನ ಸ್ಥಿತಿ ನಿರ್ಮಾಣವಾಗಿತ್ತು.ಏನಿದು ಪ್ರಕರಣ?:

ಅಜ್ಮೇರ್‌ನ ಪ್ರಸಿದ್ಧ ದರ್ಗಾದ ಉಸ್ತುವಾರಿ ಹೊತ್ತಿರುವ ಕುಟುಂಬ ಕೆಲವರು ಸೇರಿದಂತೆ ಅಜ್ಮೇರ್‌ನ ಪ್ರಭಾವಿಗಳ ಗುಂಪೊಂದು 90ರ ದಶಕದಲ್ಲಿ ಈ ಹೀನ ಕೃತ್ಯ ಎಸಗಿತ್ತು. ಮೊದಲಿಗೆ ಈ ತಂಡದ ಸದಸ್ಯನೊಬ್ಬ, ಸ್ಥಳೀಯ ಶಾಲೆಯೊಂದರ ವಿದ್ಯಾರ್ಥಿನಿಯನ್ನ ಬಲೆಗೆ ಬೀಳಿಸಿಕೊಂಡು ಆಕೆಯ ಜೊತೆ ಲೈಂಗಿಕ ಸಂಬಂಧ ಬೆಳೆಸಿದ್ದ. ಬಳಿಕ ಈ ಘಟನೆಯ ಚಿತ್ರ ತೆಗೆದು ಆಕೆಯನ್ನು ಬ್ಲ್ಯಾಕ್‌ ಮೇಲ್‌ ಮಾಡಿದ್ದ.

ಈ ಫೋಟೋ ಬಿಡುಗಡೆ ಮಾಡಬಾರದು ಎಂದಾದಲ್ಲಿ ನಿನ್ನ ಸ್ನೇಹಿತೆಯರನ್ನೂ ಕರೆತಾ ಎಂದು ಬೆದರಿಕೆ ಹಾಕುತ್ತಿದ್ದ. ಹೀಗೆ ಒಬ್ಬೊಬ್ಬರೇ ತಮ್ಮ ಸ್ನೇಹಿತೆಯರನ್ನು ಕರೆತಂದು ಕಾಮುಕರ ಕೈಗೆ ಒಪ್ಪಿಸುತ್ತಿದ್ದರು. ಹೀಗೆ ಸರಣಿಯಾಗಿ 250ಕ್ಕೂ ಹೆಚ್ಚು ವಿದ್ಯಾರ್ಥಿಗಳನ್ನು ಸ್ಥಳೀಯ ಫಾರ್ಮ್‌ಹೌಸ್‌ಗೆ ಕರೆತಂದು ಗುಂಪು ಸಾಮೂಹಿಕ ಅತ್ಯಾಚಾರ ಎಸಗಿತ್ತು. ಗುಂಪು ಎಲ್ಲರನ್ನೂ ಫೋಟೋ ತೆಗೆದು ಹೆದರಿಸುತ್ತಿದ್ದ ಕಾರಣ ಯಾರೂ ಬಾಯಿ ಬಿಟ್ಟಿರಲಿಲ್ಲ.

ಈ ಬಗ್ಗೆ 1992ರಲ್ಲಿ ಸ್ಥಳೀಯ ಪತ್ರಿಕೆಯೊಂದು ವರದಿ ಮಾಡಿದ ಬಳಿಕ ಪ್ರಕರಣ ಬೆಳಕಿಗೆ ಬಂದು ತನಿಖೆಗೆ ಆದೇಶಿಸಲಾಗಿತ್ತು. ಅದರಲ್ಲಿ 18 ಜನರು ಆರೋಪಿಗಳೆಂದು ಕಂಡುಬಂದಿತ್ತು.

ಆದರೆ ಆರೋಪಿಗಳು ಸಾಮಾಜಿಕವಾಗಿ, ಆರ್ಥಿಕವಾಗಿ ಪ್ರಭಾವಿಗಳಾಗಿದ್ದ ಕಾರಣ 250ಕ್ಕೂ ಹೆಚ್ಚು ಸಂತ್ರಸ್ತರ ಪೈಕಿ ಯಾರೂ ದೂರು ನೀಡಲು ಮುಂದೆ ಬರಲಿಲ್ಲ. ದೂರು ನೀಡಿದ್ದ ಕೆಲವರು ಪೈಕಿ ಕೇವಲ ಇಬ್ಬರು ಮಾತ್ರ ಪ್ರಕರಣ ಮುಂದುವರೆಸಿಕೊಂಡು ಹೋಗಿದ್ದರು. ಈ ಪ್ರಕರಣ ಸಂಬಂಧ 1998ರಲ್ಲಿ ಜನರಿಗೆ ಜೀವಾವಧಿ ಶಿಕ್ಷೆಯಾಗಿತ್ತು. ಉಳಿದ 6 ಜನರಿಗೆ ಇದೀಗ ಜೀವಾವಧಿ ಶಿಕ್ಷೆ ಮತ್ತು ತಲಾ 5 ಲಕ್ಷ ರು. ದಂಡ ವಿಧಿಸಲಾಗಿದೆ.

PREV
Stay updated with breaking India news (ರಾಷ್ಟ್ರೀಯ ಸುದ್ಧಿ) – national politics, economy, social issues, major events and real‑time headlines from across India only on KannadaPrabha News.

Recommended Stories

ಗಲ್ವಾನ್‌ ಸಂಘರ್ಷದ ಸೇನಾ ಪುಸ್ತಕದಿಂದ‘ರಾಜಕೀಯ ಕದನ’!
ಬಂಗಾಳದಲ್ಲಿ ಬಾಬ್ರಿ ಶೈಲಿ ಮಸೀದಿ ನಿರ್‍ಮಾಣ ಶುರು