ಸೀರೆ ಇಲ್ಲದ ಸರಸ್ವತಿ ಮೂರ್ತಿ ಕೆತ್ತನೆ: ತ್ರಿಪುರಾದಲ್ಲಿ ವಿವಾದ

KannadaprabhaNewsNetwork |  
Published : Feb 16, 2024, 01:46 AM ISTUpdated : Feb 16, 2024, 08:43 AM IST
goddess

ಸಾರಾಂಶ

ವಸಂತ ಪಂಚಮಿಗೆ ತಯಾರಿಸಲಾಗಿದ್ದ ಸರಸ್ವತಿ ದೇವಿಯ ಮೂರ್ತಿಯನ್ನು ಹಿಂದೂ ಸಂಸ್ಕೃತಿಯ ವಿರುದ್ಧವಾಗಿ ಕೆತ್ತಿರುವುದನ್ನು ಎಬಿವಿಪಿ ಖಂಡಿಸಿದೆ

ಅಗರ್ತಲಾ: ತ್ರಿಪುರಾ ರಾಜಧಾನಿ ಅಗರ್ತಲಾದ ಲಲಿತಕಲಾ ಕಾಲೇಜಿನಲ್ಲಿ ವಸಂತ ಪಂಚಮಿಯಂದು ಪೂಜಿಸಲು ಕೆತ್ತನೆ ಮಾಡಲಾಗಿದ್ದ ಸರಸ್ವತಿ ದೇವಿಯ ವಿಗ್ರಹಕ್ಕೆ ಸೀರೆಯೇ ಇರಲಿಲ್ಲ ಎಂಬುದ ವಿವಾದಕ್ಕೆ ಕಾರಣವಾಗಿದೆ. ಇದನ್ನು ಖಂಡಿಸಿ ಎಬಿವಿಪಿ ಮತ್ತು ಭಜರಂಗದಳ ಕಾರ್ಯಕರ್ತರು ಪ್ರತಿಭಟನೆ ನಡೆಸಿದರು. 

ಈ ಕುರಿತು ಮಾತನಾಡಿದ ತ್ರಿಪುರಾ ಎಬಿವಿಪಿ ಕಾರ್ಯದರ್ಶಿ ದಿಬಾಕರ್‌, ‘ಸರಸ್ವತಿ ದೇವಿಯ ವಿಗ್ರಹವನ್ನು ಅಶ್ಲೀಲವಾಗಿ ಭಾರತೀಯ ಸಂಪ್ರದಾಯದಂತೆ ಸೀರೆ ಉಟ್ಟಿರದ ರೀತಿಯಲ್ಲಿ ಕೆತ್ತನೆ ಮಾಡಲಾಗಿದೆ. 

ಈ ಹಿನ್ನೆಲೆಯಲ್ಲಿ ಕಾಲೇಜಿನ ವಿರುದ್ಧ ಕಠಿಣ ಕ್ರಮ ಕೈಗೊಳ್ಳಬೇಕು’ ಎಂದು ಆಗ್ರಹಿಸಿದ್ದಾರೆ.ಬಳಿಕ ಕಾಲೇಜು ಆಡಳಿತ ಮಂಡಳಿ ಸರಸ್ವತಿ ದೇವಿಯ ವಿಗ್ರಹವನ್ನು ತೆರವು ಮಾಡಿದೆ.

PREV
Stay updated with breaking India news (ರಾಷ್ಟ್ರೀಯ ಸುದ್ಧಿ) – national politics, economy, social issues, major events and real‑time headlines from across India only on KannadaPrabha News.

Recommended Stories

ತನ್ನದೇ ಸೈನಿಕರ ಸಾಯಲು ಬಿಟ್ಟ ದ್ರೋಹಿ ಪಾಕಿಸ್ತಾನ!
ಶಾಲೇಲಿ ಬ್ಲೇಡಿಂದ ಒಂದೇ ರೀತಿ ಕೈ ಕೊಯ್ದುಕೊಂಡ 35 ಮಕ್ಕಳು!