SIR ಸಭೆಗೆ ಗೈರಾದ ಕೆಪಿಸಿಸಿ ಪದಾಧಿಕಾರಿಗಳ ವಿರುದ್ಧ ಕ್ರಮ

Published : May 28, 2026, 12:03 PM IST
KPCC DK Shivakumar dismisses Bhavana Ramanna Niketh Raj Maurya who was absent SIR meet

ಸಾರಾಂಶ

ಬೆಂಗಳೂರಿನ ಹೊರವಲಯದಲ್ಲಿ ಮೇ 25 ರಂದು ನಡೆದ ಎಸ್‌ಐಆರ್‌ ಕುರಿತು ಸಭೆಗೆ ಗೈರುಹಾಜರಾದ ಹಿನ್ನೆಲೆಯಲ್ಲಿ ಭಾವನಾ ರಾಮಣ್ಣ, ನಿಕೇತ್‌ ರಾಜ್‌ ಮೌರ್ಯ ಸೇರಿದಂತೆ ಪಕ್ಷದ ಮೂರು ಮಂದಿ ಉಪಾಧ್ಯಕ್ಷರು, 29 ಮಂದಿ ಪ್ರಧಾನ ಕಾರ್ಯದರ್ಶಿಗಳನ್ನು ಹುದ್ದೆಯಿಂದ ಬಿಡುಗಡೆ ಮಾಡಲಾಗಿದೆ.

 ಬೆಂಗಳೂರು  :  ಬೆಂಗಳೂರಿನ ಹೊರವಲಯದಲ್ಲಿ ಮೇ 25 ರಂದು ನಡೆದ ಎಸ್‌ಐಆರ್‌ ಕುರಿತು ಸಭೆಗೆ ಗೈರುಹಾಜರಾದ ಹಿನ್ನೆಲೆಯಲ್ಲಿ ಭಾವನಾ ರಾಮಣ್ಣ, ನಿಕೇತ್‌ ರಾಜ್‌ ಮೌರ್ಯ ಸೇರಿದಂತೆ ಪಕ್ಷದ ಮೂರು ಮಂದಿ ಉಪಾಧ್ಯಕ್ಷರು, 29 ಮಂದಿ ಪ್ರಧಾನ ಕಾರ್ಯದರ್ಶಿಗಳನ್ನು ಹುದ್ದೆಯಿಂದ ಬಿಡುಗಡೆ ಮಾಡಲಾಗಿದೆ. 

ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್‌ ಆದೇಶ

ಈ ಬಗ್ಗೆ ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್‌ ಆದೇಶ ಹೊರಡಿಸಿದ್ದು, ಎಐಸಿಸಿ ಸೂಚನೆ ಮೇರೆಗೆ ಶಿಸ್ತು ಕ್ರಮ ಕೈಗೊಳ್ಳಲಾಗಿದ್ದು, ತಕ್ಷಣದಿಂದ ಜಾರಿಗೆ ಬರುವಂತೆ ಅವರ ಪ್ರಸ್ತುತ ಹುದ್ದೆಗಳಿಂದ ಬಿಡುಗಡೆಗೊಳಿಸಿರುವುದಾಗಿ ತಿಳಿಸಿದ್ದಾರೆ.ಕೆಪಿಸಿಸಿ ಉಪಾಧ್ಯಕ್ಷರಾದ ಕೆ. ಶಿವಮೂರ್ತಿ, ಬಾಬುರಾವ್‌ ಜಾಗಿರ್ದಾರ್‌, ಎಂ.ಸಿ .ವೇಣುಗೋಪಾಲ್ ಅವರನ್ನು ತೆಗೆದು ಹಾಕಲಾಗಿದೆ.

 ಪ್ರಧಾನ ಕಾರ್ಯದರ್ಶಿಗಳು 

ಪ್ರಧಾನ ಕಾರ್ಯದರ್ಶಿಗಳ ಪೈಕಿ ಎನ್.ಐ ಕೋಡಹಳ್ಳಿ, ಭಾವನಾ ರಾಮಣ್ಣ, ಕೆ.ಸಿ. ಪ್ರಭಾಕರ್‌ ರೆಡ್ಡಿ, ತಿಬ್ಬೇಗೌಡ, ಜುಲ್ಫಿಕರ್‌ ಅಹ್ಮದ್, ಶಂಕರ್‌ ದೊಡ್ಡಿ, ರೇಖಾ ಹುಲಿಯಪ್ಪ, ಎಚ್.ಎ. ಷಣ್ಮುಖಪ್ಪ, ಎಂ. ರಾಮಪ್ಪ, ವಡ್ನಾಳ್‌ ಜಗದೀಶ್, ಷಣ್ಮುಖಪ್ಪ ಶಿವಳ್ಳಿ, ಮಲ್ಲಿಕಾರ್ಜುನ ಅಕ್ಕಿ, ಸ್ವಾತಿ ಮಾಳಗಿ, ಅಲ್ತಾಫ್‌ ನವಾಜ್‌ ಕಿತ್ತೂರು, ನಾಗೇಶ್ವರರಾವ್‌, ರಮೇಶ್ ಮರಗೋಳು, ಚಂದ್ರಕಲಾ ಪ್ರಸನ್ನ, ಸಿ.ಆರ್‌. ಮನೋಹರ್‌, ಎಚ್‌.ಆರ್‌. ಶ್ರೀನಾಥ್‌, ಎಚ್. ತ್ಯಾಗರಾಜ್‌, ಎಲ್‌.ಪದ್ಮನಾಭ, ನಿಕೇತ್‌ ರಾಜ್‌ ಮೌರ್ಯ, ಸಿ.ಬಿ. ಶಶಿಧರ್, ವೆಂಕಟೇಶ್ ಹೆಗ್ಡೆ ಹೊಸಬಾಳೆ, ವಿ.ವೈ. ಘೋರ್ಪಡೆ, ಮಕ್ಬುಲ್‌ ಭಗವಾನ್‌, ಇಸ್ಮಾಯಿಲ್‌ ತಮಟಗರ್, ಬನ್ನಿಕೊಡ್, ಸಂಜಯ್‌ ಜಾಗಿರ್ದಾರ್‌ ಅವರನ್ನು ಹುದ್ದೆಯಿಂದ ಬಿಡುಗಡೆಗೊಳಿಸಲಾಗಿದೆ.

PREV
Stay updated with breaking India news (ರಾಷ್ಟ್ರೀಯ ಸುದ್ಧಿ) – national politics, economy, social issues, major events and real‑time headlines from across India only on KannadaPrabha News.
Read more Articles on

Recommended Stories

ಟಿಎಂಸಿ ಕಚೇರಿ ಬಳಿ ಹೂತಿಟ್ಟಿದ್ದ₹500 ನೋಟಿನ ಚೀಲ ಪತ್ತೆ?
ರಾಮ್‌ಚರಣ್‌ಗೆ ಆಫ್ರಿಕನ್‌ ಕುಸ್ತಿಪಟು ಬಾಡಿಗಾರ್ಡ್‌:ದಿನಕ್ಕೆ ₹4 ಲಕ್ಷ ಸಂಬಳ!