ರಾಜಭವನದಲ್ಲಿ ಬಾಂಬ್‌ ಇಲ್ಲವೆಂದು ತೋರಿಸಲು ರಾಜ್ಯಪಾಲ ಬೋಸ್‌ ಖುದ್ದು ‘ಭದ್ರತಾ ಚೆಕ್’!

KannadaprabhaNewsNetwork |  
Published : Nov 18, 2025, 12:30 AM IST
Bose

ಸಾರಾಂಶ

ಪಶ್ಚಿಮ ಬಂಗಾಳ ರಾಜಭವನದಲ್ಲಿ ಗನ್‌ ಹಾಗೂ ಬಾಂಬು ಅಡಗಿಸಿಡಲಾಗಿದೆ ಎಂದು ಟಿಎಂಸಿ ಸಂಸದ ಕಲ್ಯಾಣ್ ಬ್ಯಾನರ್ಜಿ ಅವರು ಮಾಡಿದ ಆರೋಪಕ್ಕೆ ಸಂಬಂಧಿಸಿದಂತೆ ರಾಜ್ಯಪಾಲ ಸಿ.ವಿ. ಆನಂದ ಬೋಸ್‌ ಖುದ್ದು ಸೋಮವಾರ ಭದ್ರತಾ ತಪಾಸಣೆ ಕೈಗೊಂಡಿದ್ದಾರೆ.

ಕೋಲ್ಕತಾ: ಪಶ್ಚಿಮ ಬಂಗಾಳ ರಾಜಭವನದಲ್ಲಿ ಗನ್‌ ಹಾಗೂ ಬಾಂಬು ಅಡಗಿಸಿಡಲಾಗಿದೆ ಎಂದು ಟಿಎಂಸಿ ಸಂಸದ ಕಲ್ಯಾಣ್ ಬ್ಯಾನರ್ಜಿ ಅವರು ಮಾಡಿದ ಆರೋಪಕ್ಕೆ ಸಂಬಂಧಿಸಿದಂತೆ ರಾಜ್ಯಪಾಲ ಸಿ.ವಿ. ಆನಂದ ಬೋಸ್‌ ಖುದ್ದು ಸೋಮವಾರ ಭದ್ರತಾ ತಪಾಸಣೆ ಕೈಗೊಂಡಿದ್ದಾರೆ.

ಬೋಸ್‌ ಅವರು ತಮ್ಮದೇ ನೇತೃತ್ವ

ಬೋಸ್‌ ಅವರು ತಮ್ಮದೇ ನೇತೃತ್ವದಲ್ಲಿ ಕೋಲ್ಕತಾ ಪೊಲೀಸ್‌, ಬಾಂಬ್‌ ನಿಷ್ಕ್ರಿಯ ದಳ, ಶ್ವಾನ ದಳ, ವಿಪತ್ತು ನಿರ್ವಹಣಾ ಪಡೆಗಳಿಂದ ರಾಜಭವನ ಪರಿಶೀಲನೆ ನಡೆಸಿದ್ದಾರೆ. ಬಳಿಕ ಅಂಥದ್ದೇನೂ ಕಂಡುಬಂದಿಲ್ಲ ಎಂದು ಸ್ಪಷ್ಟಪಡಿಸಿದ್ದಾರೆ.

ರಾಜಭವನದಲ್ಲಿ ಆಯುಧಗಳಿವೆ

ಮತಪಟ್ಟಿ ಪರಿಷ್ಕರಣೆ ಬೆಂಬಲಿಸಿ ಬೋಸ್‌ ನೀಡಿದ್ದ ಹೇಳಿಕೆಗೆ ಪ್ರತಿಕ್ರಿಯಿಸುವಾಗ ಬ್ಯಾನರ್ಜಿ ಅವರು ರಾಜಭವನದಲ್ಲಿ ಆಯುಧಗಳಿವೆ ಎಂದಿದ್ದರು. ಹೀಗಾಗಿ ಖುದ್ದು ಬೋಸ್‌ ಅವರೇ ಮಾದ್ಯಮದ ಸಮ್ಮುಖದಲ್ಲಿಯೇ ರಾಜಭವನ ಪರಿಶೀಲಿಸಿದ್ದಾರೆ. ಈ ವೇಳೆ ಬ್ಯಾನರ್ಜಿ ವಿರುದ್ಧ ಕಾನೂನು ಹೋರಾಟ ನಡೆಸುವುದಾಗಿ ಹೇಳಿದ್ದಾರೆ.

PREV
Stay updated with breaking India news (ರಾಷ್ಟ್ರೀಯ ಸುದ್ಧಿ) – national politics, economy, social issues, major events and real‑time headlines from across India only on KannadaPrabha News.
Read more Articles on

Recommended Stories

ಜನನಾಯಗನ್‌ಗೆ ಸಿಹಿ - ಕಹಿ! - ಜ.21ರವರೆಗೆ ವಿಜಯ್‌ ನಟನೆಯ ಚಿತ್ರ ಬಿಡುಗಡೆ ಇಲ್ಲ
ಇರಾನ್‌ನಲ್ಲಿ ಖಮೇನಿ ವಿರುದ್ಧ ಪ್ರತಿಭಟನೆ ಮತ್ತಷ್ಟು ತೀವ್ರ