ನವದೆಹಲಿ: ಭೂಹಗರಣದ ಅಕ್ರಮ ಹಣ ವರ್ಗಾವಣೆ ಕೇಸಿನ ವಿಚಾರಣೆಗೆ ಜಾರ್ಖಂಡ್ ಸಿಎಂ ಹೇಮಂತ್ ಸೊರೇನ್ರ ದೆಹಲಿಯ ಮನೆಗೆ ಬಂದ ಇ.ಡಿ. ಸಿಬ್ಬಂದಿ, ರಾತ್ರಿವರೆಗೆ ಶೋಧ ನಡೆಸಿ ಅವರ ಬಿಎಂಡಬ್ಲ್ಯು ಕಾರು ಜಪ್ತಿ ಮಾಡಿದ್ದಾರೆ.
ಈ ನಡುವೆ, ಜ.31 ರಂದು ವಿಚಾರಣೆಗೆ ಅಧಿಕಾರಿಗಳ ಮುಂದೆ ಹಾಜರಾಗುವುದಾಗಿ ಹೇಮಂತ್ ಅವರ ಕಚೇರಿ ಇ.ಡಿ.ಗೆ ಮಾಹಿತಿ ನೀಡಿದೆ ಎನ್ನಲಾಗಿದೆ.ವಿಚಾರಣೆಗೆ ಬರುವಂತೆ ಇ.ಡಿ. ನೀಡಿದ 9 ನೋಟಿಸ್ಗೂ ಹೇಮಂತ್ ಸೊಪ್ಪು ಹಾಕಿಲ್ಲ. ಇತ್ತೀಚೆಗೆ ಅಧಿಕಾರಿಗಳ ತಂಡ ರಾಂಚಿಯ ಹೇಮಂತ್ ನಿವಾಸಕ್ಕೆ ತೆರಳಿ ಕೆಲ ದಾಖಲೆಗಳನ್ನು ಪರಿಶೀಲಿಸಿ ಮರಳಿ ಬಂದಿತ್ತು. ಅದರ ಬೆನ್ನಲ್ಲೇ ಈ ಭೇಟಿ ನಡೆದಿದೆ.