ಕದನ ಕಾಲದಲ್ಲಿ ಅಧಿಕಾರಿಗಳಿಗೆ ನೆರವಾಗಿದ್ದ ಈ ರಹಸ್ಯ ಕೈಪಿಡಿ!

KannadaprabhaNewsNetwork |  
Published : May 13, 2025, 01:35 AM ISTUpdated : May 13, 2025, 04:30 AM IST
ಕೈಪಿಡಿ | Kannada Prabha

ಸಾರಾಂಶ

ಪಾಕಿಸ್ತಾನದ ಉದ್ಧಟತನದಿಂದ ದೇಶದಲ್ಲಿ ಇದ್ದಕ್ಕಿದ್ದಂತೆ ಸೃಷ್ಟಿಯಾದ ಸಮರ ಪರಿಸ್ಥಿತಿಯನ್ನು ನಿರ್ವಹಿಸುವಲ್ಲಿ ಹಿರಿಯ ಅಧಿಕಾರಿಗಳಿಗೆ ನೆರವಾಗಿದ್ದು 2010ರಲ್ಲಿ ಸರ್ಕಾರ ಹೊರತಂದ, ನೀಲಿ ಮುಖಪುಟದ ‘ಯೂನಿಯನ್‌ ವಾರ್‌ ಬುಕ್‌’ ಎಂಬ ರಹಸ್ಯ ಪುಸ್ತಕ.

ನವದೆಹಲಿ: ಪಾಕಿಸ್ತಾನದ ಉದ್ಧಟತನದಿಂದ ದೇಶದಲ್ಲಿ ಇದ್ದಕ್ಕಿದ್ದಂತೆ ಸೃಷ್ಟಿಯಾದ ಸಮರ ಪರಿಸ್ಥಿತಿಯನ್ನು ನಿರ್ವಹಿಸುವಲ್ಲಿ ಹಿರಿಯ ಅಧಿಕಾರಿಗಳಿಗೆ ನೆರವಾಗಿದ್ದು 2010ರಲ್ಲಿ ಸರ್ಕಾರ ಹೊರತಂದ, ನೀಲಿ ಮುಖಪುಟದ ‘ಯೂನಿಯನ್‌ ವಾರ್‌ ಬುಕ್‌’ ಎಂಬ ರಹಸ್ಯ ಪುಸ್ತಕ.

ಸಾರ್ವಜನಿಕವಾಗಿ ಲಭ್ಯವಿರದ ಈ ಪುಸ್ತಕದಲ್ಲಿ, ಸಂಘರ್ಷದ ಸಮಯದಲ್ಲಿ ಸರ್ಕಾರದ ವಿವಿಧ ಅಂಗಗಳು ಹೇಗೆ ಪ್ರತಿಕ್ರಿಯಿಸಬೇಕು ಮತ್ತು ಕಾರ್ಯ ನಿರ್ವಹಿಸಬೇಕು ಎಂಬುದನ್ನು ವಿವರವಾಗಿ ವಿವರಿಸಲಾಗಿದೆ. ಅಗ್ನಿಶಾಮಕ ಕವಾಯತು, ಸ್ಥಳಾಂತರಿಸುವಿಕೆ ಸೇರಿದಂತೆ ತುರ್ತು ಪ್ರತಿಕ್ರಿಯೆಗೆ ಅಗತ್ಯವಾದ ಎಲ್ಲಾ ವಿಶಯಗಳಿರುವ ಈ ಪುಸ್ತಕದ ತಯಾರಿ ಮತ್ತು ಪರಿಷ್ಕರಣೆಯಲ್ಲಿ ತೊಡಗುವ ರಕ್ಷಣೆ, ಗೃಹ ವ್ಯವಹಾರ ಮತ್ತು ಸಂಪುಟ ಸಚಿವಾಲಯದ ಅಧಿಕಾರಿಗಳು ಕೂಡ ಅದಲ್ಲಿರುವ ಮಾಹಿತಿಯನ್ನು ಗೌಪ್ಯವಾಗಿಡುತ್ತಾರೆ. ಕೇಂದ್ರ ಸಚಿವಾಲಯಗಳನ್ನು ಹೊರತುಪಡಿಸಿ ಪ್ರತಿ ರಾಜ್ಯದ ಮುಖ್ಯ ಕಾರ್ಯದರ್ಶಿಗಳ ಬಳಿ ಇದರ ಒಂದು ಪ್ರತಿ ಇರುತ್ತದೆ.

26/11 ಮುಂಬೈ ದಾಳಿ ನಡೆದ ಎರಡೇ ವರ್ಷಗಳಲ್ಲಿ (2010), ಗೃಹ ಕಾರ್ಯದರ್ಶಿ ಜಿ.ಕೆ. ಪಿಳ್ಳೈ ಅವರ ನೇತೃತ್ವದಲ್ಲಿ ಈ ಕೈಪಿಡಿಯ ರಚನೆಯಾಯಿತು. ಇದರಲ್ಲಿ ತಾಂತ್ರಿಕ ಪ್ರಗತಿ ಸೇರಿದಂತೆ ಪ್ರಸ್ತುತ ಸ್ಥಿತಿಯ ಅಗತ್ಯತೆಗಳಿಗೆ ತಕ್ಕಹಾಗೆ ಪ್ರತಿ 15 ವರ್ಷಗಳಿಗೊಮ್ಮೆ ಅಪ್‌ಡೇಟ್‌ ಮಾಡಲಾಗುತ್ತದೆ.

PREV
Stay updated with breaking India news (ರಾಷ್ಟ್ರೀಯ ಸುದ್ಧಿ) – national politics, economy, social issues, major events and real‑time headlines from across India only on KannadaPrabha News.

Recommended Stories

ಶೀಘ್ರದಲ್ಲೇ ಆಲ್ಕೋಹಾಲ್‌ನಿಂದ ಓಡಾಡಲಿವೆ ಭಾರತದ ಕಾರುಗಳು
ಪುರುಷರ ಕೋಣೆಗೆ ಹೋಗ್ದೆ ಸ್ತ್ರೀ ರಾಜಕಾರಣಿಗಳು ಯಶಸ್ವಿ ಆಗಲ್ಲ: ಪಪ್ಪು