ಹಿಮಾಚಲ: 6 ಅನರ್ಹ ಕಾಂಗ್ರೆಸ್‌ ಶಾಸಕರ ಕ್ಷೇತ್ರದಲ್ಲೂ ಉಪಚುನಾವಣೆ

KannadaprabhaNewsNetwork |  
Published : Mar 17, 2024, 01:46 AM ISTUpdated : Mar 17, 2024, 08:09 AM IST
ಮತದಾನ | Kannada Prabha

ಸಾರಾಂಶ

ರಾಜ್ಯಸಭೆಯಲ್ಲಿ ಅಡ್ಡಮತದಾನ ಮಾಡಿದ್ದ ಶಾಸಕರು ಅನರ್ಹಗೊಂಡ ಹಿನ್ನೆಲೆಯಲ್ಲಿ ಅವರ ಕ್ಷೇತ್ರಗಳಿಗೂ ಉಪಚುನಾವಣೆಯನ್ನು ಘೊಷಿಸಲಾಗಿದೆ.

ಶಿಮ್ಲಾ: ಹಿಮಾಚಲ ಪ್ರದೇಶದ 6 ಅನರ್ಹ ಕಾಂಗ್ರೆಸ್‌ ಶಾಸಕರ ಕ್ಷೇತ್ರಕ್ಕೂ ಲೋಕಸಭೆ ಚುನಾವಣೆ ಜತೆಗೆ ಮತದಾನ ಘೋಷಣೆ ಆಗಿದೆ. ಜೂ.1ರಂದು ದ ಧರ್ಮಶಾಲಾ, ಸುಜಾನ್‌ಪುರ, ಲಾಹೌಲ್‌, ಸ್ಪಿಟಿ, ಬರ್ಸಾರ್, ಗಾರ್ಗೆಟ್‌ ಮತ್ತು ಕುತ್ಲೆಹಾರ್‌ ಕ್ಷೇತ್ರಗಳಲ್ಲಿ ಮತದಾನ ನಡೆಯಲಿದೆ.

ರಾಜ್ಯಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಪಕ್ಷದ ವಿಪ್‌ ಉಲ್ಲಂಘಿಸಿ 6 ಶಾಸಕರು ಬಿಜೆಪಿಗೆ ಮತ ಹಾಕಿದ್ದರು. ಹೀಗಾಗಿ ಈ 6 ಶಾಸಕರನ್ನು ಸ್ಪೀಕರ್‌ ಅನರ್ಹ ಮಾಡಿದ್ದರು.

ಪ್ರಸ್ತುತ ಅನರ್ಹ ಶಾಸಕರು ಹೃಷಿಕೇಶದ ತಾಜ್‌ ರೆಸಾರ್ಟ್‌ನಲ್ಲಿ ತಂಗಿದ್ದು, ಸುಪ್ರೀಂ ಕೋರ್ಟ್‌ನಲ್ಲಿ ತಮ್ಮ ಅನರ್ಹತೆ ಕ್ರಮದ ವಿರುದ್ಧ ಅರ್ಜಿ ಸಲ್ಲಿಸಿದ್ದಾರೆ. ಅದರ ನರುವೆಯೇ ಚುನಾವಣೆ ಘೋಷಣೆ ಆಗಿದೆ.

PREV
Stay updated with breaking India news (ರಾಷ್ಟ್ರೀಯ ಸುದ್ಧಿ) – national politics, economy, social issues, major events and real‑time headlines from across India only on KannadaPrabha News.

Recommended Stories

ಮುಸ್ಲಿಮರು ಸೂರ್‍ಯನಮಸ್ಕಾರ ಮಾಡ್ಬೇಕು : ಹೊಸಬಾಳೆ ಕರೆ
ಮರುಭೂಮಿ ಸೌದಿಯಲ್ಲಿ ಹಿಮಪಾತ, ಮಳೆ!