ಖಲಿಸ್ತಾನಿ ಒತ್ತಡ : ವೈಷ್ಣೋದೇವಿ ದೇಗುಲ ಹಿಂದೂ ಕಾರ್ಯಕ್ರಮಕ್ಕೆ ಕೆನಡಾ ಅನುಮತಿ ನಕಾರ

KannadaprabhaNewsNetwork |  
Published : Nov 23, 2024, 12:34 AM ISTUpdated : Nov 23, 2024, 04:31 AM IST
ಕೆನಡಾ | Kannada Prabha

ಸಾರಾಂಶ

ನ.23ರಂದು ಕೆನಡಾದ ಒಂಟಾರಿಯೋ ಪ್ರಾಂತ್ಯದ ಓಕ್‌ವಿಲ್ಲೆಯಲ್ಲಿ ಸ್ಥಳೀಯ ವೈಷ್ಣೋದೇವಿ ದೇಗುಲವು ಭಾರತೀಯ ದೂತಾವಾಸ ಸಹಯೋಗದಲ್ಲಿ ಹಮ್ಮಿಕೊಂಡಿದ್ದ ಕಾರ್ಯಕ್ರಮಕ್ಕೆ ಸ್ಥಳೀಯ ಪೊಲೀಸರು ಅನುಮತಿ ನಿರಾಕರಿಸಿದ್ದಾರೆ.

ಒಟ್ಟಾವ: ನ.23ರಂದು ಕೆನಡಾದ ಒಂಟಾರಿಯೋ ಪ್ರಾಂತ್ಯದ ಓಕ್‌ವಿಲ್ಲೆಯಲ್ಲಿ ಸ್ಥಳೀಯ ವೈಷ್ಣೋದೇವಿ ದೇಗುಲವು ಭಾರತೀಯ ದೂತಾವಾಸ ಸಹಯೋಗದಲ್ಲಿ ಹಮ್ಮಿಕೊಂಡಿದ್ದ ಕಾರ್ಯಕ್ರಮಕ್ಕೆ ಸ್ಥಳೀಯ ಪೊಲೀಸರು ಅನುಮತಿ ನಿರಾಕರಿಸಿದ್ದಾರೆ.

ಹಿರಿಯ ಭಾರತೀಯರಿಗೆ ಜೀವಿತ ಪ್ರಮಾಣಪತ್ರ ನೀಡಲು ಆಯೋಜಿಸಿದ್ದ ಕಾರ್ಯಕ್ರಮಕ್ಕೆ ಭದ್ರತೆಯ ಕಾರಣ ನೀಡಿ ಪೊಲೀಸರು ಅನುಮತಿ ನಿರಾಕರಿಸಿದ್ದಾರೆ. ಆದರೆ ಖಲಿಸ್ತಾನಿ ಉಗ್ರರ ಒತ್ತಡಕ್ಕೆ ಮಣಿದು ಪೊಲೀಸರು ಹೀಗೆ ಮಾಡಿದ್ದಾರೆ ಎಂದು ಸ್ಥಳೀಯ ಹಿಂದೂ ಸಮುದಾಯ ಆರೋಪಿಸಿದೆ.

ಜೊತೆಗೆ ಪೊಲೀಸರ ಇಂಥ ವರ್ತನೆಯು ಸಮುದಾಯದ ಒಳಿತಿನ ಕಾರ್ಯಕ್ರಮಕ್ಕೆ ಭದ್ರತೆ ನೀಡಲಾಗದ ಅವರ ಅಸಮರ್ಥತೆಯನ್ನು ತೋರಿಸುತ್ತದೆ. ಹೀಗಾಗಿ ಸ್ಥಳೀಯ ಹಿಂದೂ, ಸಿಖ್‌, ಮುಸ್ಲಿಂ ಮತ್ತು ಇತರೆ ಸಮುದಾಯದ ಜನರಿಗೆ ನೆರವಾಗುವ ಕಾರ್ಯಕ್ರಮಗಳಿಗೆ ಅಡ್ಡಿ ತಪ್ಪಿಸಲು ಹಾಲ್ಟನ್‌ ಪ್ರಾಂತೀಯ ಪೊಲೀಸ್ ಸೇವೆ ಸೂಕ್ತ ಕ್ರಮ ಕೈಗೊಳ್ಳಬೇಕು ಎಂದು ವೈಷ್ಣೋದೇವಿ ದೇಗುಲದ ಆಡಳಿತ ಮಂಡಳಿ ಆಗ್ರಹ ಮಾಡಿದೆ.

ಕಳೆದ 2 ವಾರದ ಅವಧಿಯಲ್ಲೂ ದೇಶದ ವಿವಿಧ ಭಾಗಗಳಲ್ಲಿ ಪೊಲೀಸರು ಹಿಂದೂ ದೇಗುಲ ಮಂಡಳಿ ಆಯೋಜಿಸಿದ್ದ ಇದೇ ರೀತಿಯ ಕಾರ್ಯಕ್ರಮಕ್ಕೆ ಅನುಮತಿ ನಿರಾಕರಿಸಿದ್ದರು. ಜೊತೆಗೆ ಭದ್ರತೆ ನೀಡಲು ಹಣ ಕೇಳಿದ್ದರು.

PREV
Stay updated with breaking India news (ರಾಷ್ಟ್ರೀಯ ಸುದ್ಧಿ) – national politics, economy, social issues, major events and real‑time headlines from across India only on KannadaPrabha News.

Recommended Stories

ಕಾಂತಾರಾ ಹಿಂದಿಕ್ಕಿದ ಧುರಂಧರ್‌: 876 ಕೋಟಿ ಸಂಪಾದನೆಯ ದಾಖಲೆ
ಛತ್ತೀಸ್‌ಗಢ ಮದ್ಯ ಹಗರಣ: ಮಾಜಿ ಸಿಎಂ ಪುತ್ರಗೆ ₹250 ಕೋಟಿ ಲಂಚ