ಏಡನ್‌ ಕೊಲ್ಲಿಯಲ್ಲಿ ಕ್ಷಿಪಣಿ ದಾಳಿಗೆ ತುತ್ತಾದ 21 ಮಂದಿಯ ರಕ್ಷಣೆ

KannadaprabhaNewsNetwork |  
Published : Mar 08, 2024, 01:45 AM IST
ಭಾರತೀಯನ ರಕ್ಷಣೆ | Kannada Prabha

ಸಾರಾಂಶ

ಭಾರತೀಯ ನೌಕಾಪಡೆಯಿಂದ ಮತ್ತೊಂದು ಯಶಸ್ವಿ ಕಾರ್ಯಾಚರಣೆ ನಡೆದಿದ್ದು, ಏಡೆನ್‌ ಕೊಲ್ಲಿಯಲ್ಲಿ ಕ್ಷಿಪಣಿ ದಾಳಿಗೆ ತುತ್ತಾಗಿದ್ದ ಬಾರ್ಬಡೋಸ್‌ನ ಸರಕು ಸಾಗಾಣೆ ಹಡಗಿನಲ್ಲಿದ್ದ ಒಬ್ಬ ಭಾರತೀಯನೂ ಸೇರಿದಂತೆ 21 ಸಿಬ್ಬಂದಿಯನ್ನು ರಕ್ಷಿಸಿದೆ.

ನವದೆಹಲಿ: ಏಡನ್‌ ಕೊಲ್ಲಿಯಲ್ಲಿ ಕ್ಷಿಪಣಿ ದಾಳಿಗೆ ತುತ್ತಾದ ಬಾರ್ಬಡೋಸ್‌ ಹಡಗಿನಲ್ಲಿದ್ದ ಒಬ್ಬ ಭಾರತೀಯನೂ ಸೇರಿದಂತೆ 21 ಸಿಬ್ಬಂದಿಯನ್ನು ರಕ್ಷಣೆ ಮಾಡುವಲ್ಲಿ ಭಾರತೀಯ ನೌಕಾಪಡೆ ಗುರುವಾರ ಯಶಸ್ವಿಯಾಗಿದೆ. ಈ ಕುರಿತು ಮಾಹಿತಿ ನೀಡಿದ ನೌಕಾಪಡೆಯ ವಕ್ತಾರರಾದ ವಿವೇಕ್‌ ಮಾಧ್ವಾಲ್‌, ‘ಭಾರತೀಯ ನೌಕಾಪಡೆಯು ಕ್ಷಿಪಣಿ ದಾಳಿಗೆ ತುತ್ತಾಗಿದ್ದ ಬಾರ್ಬಡೋಸ್‌ ರಾಷ್ಟ್ರದ ಸರಕು ಸಾಗಾಣೆ ಹಡಗು ಎಂವಿ ಟ್ರೂ ಕಾನ್ಫಿಡೆನ್ಸ್‌ನಲ್ಲಿದ್ದ ಒಬ್ಬ ಭಾರತೀಯನೂ ಸೇರಿದಂತೆ 21 ಸಿಬ್ಬಂದಿಯನ್ನು ರಕ್ಷಿಸಿ ಜಿಬೌತಿಗೆ ಕಳುಹಿಸಲಾಗಿದೆ. ಈ ಕಾರ್ಯಾಚರಣೆಯಲ್ಲಿ ನೌಕಾಪಡೆ ಐಎನ್‌ಎಸ್‌ ಕೋಲ್ಕತಾ ಸಮರನೌಕೆಯ ಜೊತೆಗೆ ಹಲವು ಹೆಲಿಕಾಪ್ಟರ್‌ಗಳು ಮತ್ತು ದೋಣಿಗಳನ್ನು ಬಳಸಿದೆ’ ಎಂದು ತಿಳಿಸಿದ್ದಾರೆ.

ಇತ್ತೀಚೆಗೆ ಕಡಲ್ಗಳ್ಳರಿಂದ ದಾಳಿಗೆ ಒಳಗಾದ ಹಲವು ಹಡಗುಗಳನ್ನು ಭಾರತೀಯ ನೌಕಾಪಡೆ ರಕ್ಷಿಸಿತ್ತು.

PREV
Stay updated with breaking India news (ರಾಷ್ಟ್ರೀಯ ಸುದ್ಧಿ) – national politics, economy, social issues, major events and real‑time headlines from across India only on KannadaPrabha News.

Recommended Stories

ಶಬರಿಮಲೆ ಚಿನ್ನಕ್ಕೆ ಕನ್ನ: ದೇವಸ್ವಂ ಮಾಜಿ ಸದಸ್ಯ ಸೆರೆ
ಷೇರಿಗಿಂತ ಚಿನ್ನ ಬೆಳ್ಳಿ ಹೂಡಿಕೆಯೇ ಹೆಚ್ಚು ಲಾಭ