ಬಿಜೆಪಿ ಜತೆ ಬಿಆರ್‌ಎಸ್‌ ವಿಲೀನಕ್ಕೆ ಷಡ್ಯಂತ್ರ : ಕೆಸಿಆರ್ ಪುತ್ರಿ ಕವಿತಾ

KannadaprabhaNewsNetwork |  
Published : May 30, 2025, 12:34 AM ISTUpdated : May 30, 2025, 04:41 AM IST
ಎಂಎಲ್‌ಸಿ ಕವಿತಾ | Kannada Prabha

ಸಾರಾಂಶ

ತೆಲಂಗಾಣ ಮಾಜಿ ಮುಖ್ಯಮಂತ್ರಿ ಕೆ.ಸಿ.ಚಂದ್ರಶೇಖರ್‌ ರಾವ್‌ ನೇತೃತ್ವದ ಬಿಆರ್‌ಎಸ್‌ನಲ್ಲಿ ಆಂತರಿಕ ಕಲಹ ಜೋರಾಗಿದ್ದು ‘ಬಿಜೆಪಿ ಜೊತೆ ಬಿಆರ್‌ಎಸ್‌ ವಿಲೀನಕ್ಕೆ ಕೆಲವರು ಷಡ್ಯಂತ್ರ ರೂಪಿಸುತ್ತಿದ್ದಾರೆ’ ಎಂದು  ಕೆಸಿಆರ್‌ ಪುತ್ರಿ ಎಂಎಲ್‌ಸಿ ಕವಿತಾ ಗಂಭೀರ ಆರೋಪ ಮಾಡಿದ್ದಾರೆ.

ಹೈದರಾಬಾದ್‌: ತೆಲಂಗಾಣ ಮಾಜಿ ಮುಖ್ಯಮಂತ್ರಿ ಕೆ.ಸಿ.ಚಂದ್ರಶೇಖರ್‌ ರಾವ್‌ ನೇತೃತ್ವದ ಬಿಆರ್‌ಎಸ್‌ನಲ್ಲಿ ಆಂತರಿಕ ಕಲಹ ಜೋರಾಗಿದ್ದು ‘ಬಿಜೆಪಿ ಜೊತೆ ಬಿಆರ್‌ಎಸ್‌ ವಿಲೀನಕ್ಕೆ ಕೆಲವರು ಷಡ್ಯಂತ್ರ ರೂಪಿಸುತ್ತಿದ್ದಾರೆ’ ಎಂದು ತಮ್ಮ ಸೋದರ ಕೆ.ಟಿ.ರಾಮರಾವ್ ವಿರುದ್ಧವೇ, ಕೆಸಿಆರ್‌ ಪುತ್ರಿ ಎಂಎಲ್‌ಸಿ ಕವಿತಾ ಗಂಭೀರ ಆರೋಪ ಮಾಡಿದ್ದಾರೆ.

ಸುದ್ದಿಗಾರರೊಂದಿಗಿನ ಅನೌಪಚಾರಿಕ ಸಂಭಾಷಣೆಯಲ್ಲಿ ಮಾತನಾಡಿದ ಅವರು, ‘ತೆಲಂಗಾಣ ಸರ್ಕಾರದ ಸಂಪನ್ಮೂಲವನ್ನು ಲೂಟಿ ಮಾಡಲು ಪ್ರಯತ್ನಿಸುತ್ತಿರುವ ಬಿಜೆಪಿಯನ್ನು ನಿಯಂತ್ರಿಸುವ ಬದಲು ಬಿಆರ್‌ಎಸ್‌ ಅನ್ನು ಬಿಜೆಪಿ ಜೊತೆ ವಿಲೀನ ಮಾಡಲು ಕೆಲವು ಪ್ರಯತ್ನಗಳು ನಡೆಯುತ್ತಿದೆ ಎಂದು ನನಗೆ ಅನಿಸುತ್ತಿದೆ. ಯಾಕೆಂದರೆ ನಾನು ಜೈಲಿನಲ್ಲಿ ದ್ದಾಗ ಇದೇ ರೀತಿಯ ಪ್ರಸ್ತಾಪವನ್ನು ನನ್ನ ಬಳಿಗೆ ತಂದಿದ್ದರು. ಆದರೆ ನಾನು ಅದನ್ನು ತಿರಸ್ಕರಿಸಿದೆ. ತೆಲಂಗಾಣಕ್ಕೆ ಬಿಆರ್‌ಎಸ್‌ ಶ್ರೀರಾಮನ ರಕ್ಷೆಯಿದ್ದಂತೆ’ ಎಂದರು.

ಆದರೆ ಕವಿತಾ ಆರೋಪಕ್ಕೆ ಸಂಬಂಧಿಸಿದಂತೆ ಭಾರತೀಯ ರಾಷ್ಟ್ರೀಯ ಸಮಿತಿ( ಬಿಆರ್‌ಎಸ್‌) ಪಕ್ಷದಿಂದ ಯಾವುದೇ ಅಧಿಕೃತ ಪ್ರತಿಕ್ರಿಯೆ ಬಂದಿಲ್ಲ. ಅಲ್ಲದೇ ಈ ಹಿಂದೆಯೂ ಬಿಆರ್‌ಎಸ್‌ ಬಿಜೆಪಿ ಜೊತೆ ಮೈತ್ರಿ ಮಾಡಿಕೊಳ್ಳಬಹುದು ಎನ್ನುವ ವದಂತಿ ಹಬ್ಬಿತ್ತು.

PREV
Stay updated with breaking India news (ರಾಷ್ಟ್ರೀಯ ಸುದ್ಧಿ) – national politics, economy, social issues, major events and real‑time headlines from across India only on KannadaPrabha News.
Read more Articles on

Recommended Stories

ಗದ್ದಲದ ಮಧ್ಯೆಯೇ ‘ಜಿ ರಾಮ್‌ ಜಿ’ ವಿಧೇಯಕ ಲೋಕಸಭೇಲಿ ಮಂಡನೆ
ಆಳಸಮುದ್ರ ಡ್ರೋನ್‌ ಬಳಸಿದ ಉಕ್ರೇನ್‌ : ರಷ್ಯಾ ಸಬ್‌ಮರೀನ್‌ ಧ್ವಂಸ