ಕನ್ನಡಪ್ರಭ ವಾರ್ತೆ ಬೆಂಗಳೂರು
ಭಾನುವಾರ ಕರ್ನಾಟಕ ರಕ್ಷಣಾ ವೇದಿಕೆ ನಗರದಲ್ಲಿ ಆಯೋಜಿಸಿದ್ದ ‘ಸಮಗ್ರ ಭಾಷಾ ನೀತಿ, ಸಮಗ್ರ ಭಾಷಾ ಯೋಜನೆ: ಕರ್ನಾಟಕದ ಸಾಧ್ಯತೆಗಳು-ಸವಾಲುಗಳು’ ಎಂಬ ವಿಷಯದ ಕುರಿತ ದುಂಡುಮೇಜಿನ ಸಭೆಯಲ್ಲಿ ಅವರು ಮಾತನಾಡಿದರು.
ಸಮಗ್ರವಾದ ಯೋಜನೆ ಅಥವಾ ನೀತಿಯನ್ನು ರೂಪಿಸುವುದು ಬಹಳ ಕಷ್ಟ. ಕನ್ನಡವಿಲ್ಲದೇ ಆಡಳಿತ ನಡೆಸಬಾರದು. ಕನ್ನಡವಿಲ್ಲದೆ ಶಿಕ್ಷಣ ಇರಬಾರದು. ಕನ್ನಡವಿಲ್ಲದೇ ಉದ್ಯೋಗ ಸಿಗಬಾರದು ಎಂಬುದು ಮೂಲ ಧಾತು. ಈ ಮೂಲ ಧಾತು ಇಟ್ಟುಕೊಂಡು ಇದರ ಆಧಾರದ ಮೇಲೆ ಸಮಗ್ರ ಭಾಷಾ ನೀತಿಯನ್ನು ರೂಪಿಸಬೇಕಿದೆ ಎಂದರು. ಒಂದು ಭಾಷೆಯನ್ನು ಹೊಸ ತಂತ್ರಜ್ಞಾನಗಳು ಬಂದಾಗ ಅದರ ಸಮಾನಕ್ಕೆ ಸಿದ್ಧಗೊಳಿಸುವುದು ಹೇಗೆ ಎಂಬ ಸಮಸ್ಯೆಯನ್ನು ಮೊದಲು ಪರಿಹರಿಸಿಕೊಳ್ಳಬೇಕಾಗಿದೆ. ಯಾವುದೇ ತಂತ್ರಜ್ಞಾನ ಸರ್ವಜ್ಞವಲ್ಲ. ಯಾವುದೇ ತಂತ್ರಜ್ಞಾನದ ಹಿಂದೆ ಮನುಷ್ಯ ಜ್ಞಾನದ ತಂತ್ರ ಇರುತ್ತದೆ. ಮನುಷ್ಯ ಜ್ಞಾನ ತಂತ್ರಜ್ಞಾನವನ್ನು ಸೃಷ್ಟಿ ಮಾಡುತ್ತದೆ. ಆ ಸೃಷ್ಟಿಯಾದ ಜ್ಞಾನವನ್ನು ಖರೀದಿಸಿ ಮನುಷ್ಯನೇ ಬಳಸುವಂತ ಸ್ಥಿತಿ ಇದೆ. ಕನ್ನಡ ಭಾಷೆ, ಕನ್ನಡಿಗರು ಎದುರಿಸುವ ಸಮಸ್ಯೆಗಳನ್ನೂ ಒಳಗೊಂಡಂತೆ ನಾವು ಕಾರ್ಯಯೋಜನೆ ರೂಪಿಸಬೇಕೆಂದು ಹೇಳಿದರು.ಕುವೆಂಪು ಭಾಷಾ ಭಾರತಿ ಪ್ರಾಧಿಕಾರದ ಮಾಜಿ ಆಧ್ಯಕ್ಷ ಕೆ.ವಿ.ನಾರಾಯಣ ಮಾತನಾಡಿ, ಹೊಸದಾಗಿ ಹೊಸ ಭಾಷಾ ನೀತಿಯನ್ನು ರೂಪಿಸಬೇಕಾದರೆ ಇದುವರೆಗೂ ಮಾಡಿರುವ ತಪ್ಪುಗಳು ಯಾವ್ಯಾವು, ಎಲ್ಲೆಲ್ಲಿ ತಪ್ಪು ಹೆಜ್ಜೆಗಳನ್ನು ಇಟ್ಟಿದ್ದೇವೆ ಎನ್ನುವುದನ್ನು ಗುರುತಿಸಬೇಕು. ಮತ್ತೆ ಅಂತಹ ತಪ್ಪುಗಳನ್ನು ಮಾಡಬಾರದು. ಮೊದಲು ನಮ್ಮದು ಕನ್ನಡ ಭಾಷಾ ನೀತಿಯೋ ಅಥವಾ ಕರ್ನಾಟಕ ಭಾಷಾ ನೀತಿಯೋ ಎಂದು ಖಚಿತಪಡಿಸಿಕೊಳ್ಳಬೇಕು ಎಂದು ತಿಳಿಸಿದರು.
ಶಿಕ್ಷಣ ತಜ್ಞ ವಿ.ಪಿ.ನಿರಂಜನಾರಾಧ್ಯ ಮಾತನಾಡಿ, ಇಲ್ಲಿಯವರೆಗೆ ದೇಶದಲ್ಲಿ ಸಮಗ್ರ ಭಾಷಾ ನೀತಿ ಎನ್ನುವುದು ಇಲ್ಲ. ಭಾಷಾ ಸೂತ್ರಗಳನ್ನು ಮಾಡಿಕೊಂಡಿದ್ದೇವೆ. ಅದು ಕೂಡ ತಪ್ಪು ತಪ್ಪಾಗಿಯೇ ಇದೆ. ಶಿಕ್ಷಣದಲ್ಲಿ ಇಂದು ಚರ್ಚೆಯಾಗುತ್ತಿರುವ ಭಾಷಾ ಸೂತ್ರ ಅರ್ಥ ಮಾಡಿಕೊಂಡು ಜಾರಿಗೆ ತಂದ ಸೂತ್ರವಲ್ಲ. ಇದಕ್ಕೂ ಶಿಕ್ಷಣಕ್ಕೂ ಯಾವುದೇ ಸಂಬಂಧವಿಲ್ಲ ಎಂದರು.
ಫೋಟೋ ಕ್ಯಾಪ್ಷನ್