ನನ್ನ ಸರ್ಕಾರ ಕೆಡವಲು ಬಿಜೆಪಿಯಿಂದ ಲಂಚದ ಆಮಿಷ: ಕೇಜ್ರಿವಾಲ್‌

KannadaprabhaNewsNetwork |  
Published : Jan 28, 2024, 01:19 AM ISTUpdated : Jan 28, 2024, 07:21 AM IST
Aam Admi Party

ಸಾರಾಂಶ

7 ಆಪ್ ಶಾಸಕರಿಗೆ ತಲಾ ₹25 ಕೋಟಿ ಆಫರ್‌ ನೀಡಲಾಗಿದೆ ಎಂದು ದಿಲ್ಲಿ ಸಿಎಂ ಅರವಿಂದ್‌ ಕೇಜ್ರಿವಾಲ್‌ ಆರೋಪಿಸಿದ್ದಾರೆ. ಸಾಕ್ಷ್ಯ ಸಮೇತ ಹೇಳಿಕೆ ನೀಡಿ ಎಂದು ಬಿಜೆಪಿ ತಿರುಗೇಟು ನೀಡಿದೆ.

ನವದೆಹಲಿ: ದೆಹಲಿಯ ಆಮ್‌ ಆದ್ಮಿ ಪಕ್ಷದ 7 ಶಾಸಕರಿಗೆ ಬಿಜೆಪಿ ತಲಾ 25 ಕೋಟಿ ರು. ಆಮಿಷ ಒಡ್ಡಿದೆ ಹಾಗೂ ಬಿಜೆಪಿಗೆ ಬರುವಂತೆ ಆಹ್ವಾನಿಸಿ ನಮ್ಮ ಸರ್ಕಾರ ಕೆಡವಲು ಯತ್ನಿಸುತ್ತಿದೆ ಎಂದು ಮುಖ್ಯಮಂತ್ರಿ ಅರವಿಂದ್‌ ಕೇಜ್ರಿವಾಲ್‌ ಆರೋಪಿಸಿದ್ದಾರೆ. 

ಈ ಕುರಿತು ತಮ್ಮ ಎಕ್ಸ್‌ ಖಾತೆಯಲ್ಲಿ ಟ್ವೀಟ್‌ ಮಾಡಿರುವ ಅವರು, ‘ಬಿಜೆಪಿಯ ಏಜೆಂಟರು ನಮ್ಮ ಪಕ್ಷದ 21 ಶಾಸಕರಿಗೆ ಕರೆ ಮಾಡಿ ಕೇಜ್ರಿವಾಲ್‌ ಬಂಧನದೊಂದಿಗೆ ದೆಹಲಿ ಸರ್ಕಾರ ಉರುಳಲಿದೆ ಎಂದು ಹೇಳಿದ್ದಲ್ಲದೆ, ಬಿಜೆಪಿಗೆ ಬರುವಂತೆ ಆಹ್ವಾನಿಸಿದ್ದಾರೆ. 

ಅಲ್ಲದೆ 7 ಶಾಸಕರಿಗೆ ತಲಾ 25 ಕೋಟಿ ರು. ನೀಡುವ ಜೊತೆಗೆ ಮುಂದಿನ ಚುನಾವಣೆಯಲ್ಲಿ ಟಿಕೆಟ್‌ ನೀಡುವ ಆಮಿಷ ಒಡ್ಡಿದ್ದಾರೆ’ ಎಂದಿದ್ದಾರೆ.‘

‘ಆದರೆ ನಮ್ಮ ಪಕ್ಷದ ನಿಷ್ಠಾವಂತರು. ಬಿಜೆಪಿಯ ಆಮಿಷಕ್ಕೆ ಮರುಳಾಗಿಲ್ಲ’ ಎಂದೂ ಅವರು ಸ್ಪಷ್ಟಪಡಿಸಿದ್ದಾರೆ.

ಇನ್ನು ಈ ಕುರಿತು ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ದೆಹಲಿಯ ಸಚಿವ ಅತಿಷಿ, ‘ಬಿಜೆಪಿಯು ಆಪರೇಷನ್‌ ಕಮಲ 2.0 ಆರಂಭ ಮಾಡಿದೆ. ಇದೇ ಪ್ರಯತ್ನವನ್ನೂ ಕಳೆದ ವರ್ಷವೂ ಮಾಡಿ ವಿಫಲರಾಗಿದ್ದರು. ಈ ಬಾರಿಯೂ ವಿಫಲರಾಗುತ್ತಾರೆ’ ಎಂದು ಟೀಕಿಸಿದರು.

ಬಿಜೆಪಿ ನಕಾರ:ಇದಕ್ಕೆ ರಾಜ್ಯ ಬಿಜೆಪಿ ಕಾರ್ಯದರ್ಶಿ ಹರೀಶ್‌ ಖುರಾನಾ ತಿರುಗೇಟು ನೀಡಿದ್ದು, ‘ಆಪ್‌ ಪಕ್ಷದ ಆರೋಪ ಆಧಾರರಹಿತವಾಗಿದೆ. ಎಲ್ಲ 7 ಶಾಸಕರು ಮತ್ತು ಅವರಿಗೆ ಕರೆ ಮಾಡಿದ ವ್ಯಕ್ತಿಗಳ ಹೆಸರನ್ನು ಕೇಜ್ರಿವಾಲ್‌ ಬಹಿರಂಗಪಡಿಸಬೇಕು’ ಎಂದು ಒತ್ತಾಯ ಮಾಡಿದ್ದಾರೆ.

PREV
Stay updated with breaking India news (ರಾಷ್ಟ್ರೀಯ ಸುದ್ಧಿ) – national politics, economy, social issues, major events and real‑time headlines from across India only on KannadaPrabha News.

Recommended Stories

ಮೊಜ್ತಬಾ ಪತ್ತೆಗಾಗಿ ಅಮೆರಿಕ,ಇಸ್ರೇಲ್‌ ಗುಪ್ತಚರ ಹುಡುಕಾಟ
ಟ್ರಂಪ್‌ ಬಳಿ ಇಲ್ಲ ಯುದ್ಧದ ಸೂಕ್ತ ಎಕ್ಸಿಟ್‌ ಪ್ಲ್ಯಾನ್‌!