ನಿರ್ಮಲಾ ಸೀತಾರಾಮನ್‌ ಅವರು ಮಂಡಿಸಿದ ಬಜೆಟ್‌ ಕೇಂದ್ರದ ಕುರ್ಚಿ ಬಚಾವೋ ಬಜೆಟ್‌: ರಾಹುಲ್‌

KannadaprabhaNewsNetwork |  
Published : Jul 24, 2024, 12:20 AM ISTUpdated : Jul 24, 2024, 07:12 AM IST
ರಾಹುಲ್‌ | Kannada Prabha

ಸಾರಾಂಶ

ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್‌ ಅವರು ಮಂಡಿಸಿರುವ ಬಜೆಟ್‌ಗೆ ವಿಪಕ್ಷ ನಾಯಕ ರಾಹುಲ್‌ ಗಾಂಧಿ ಪ್ರತಿಕ್ರಿಯಿಸಿದ್ದು, ಇದು ಕುರ್ಚಿ ಉಳಿಸಿಕೊಳ್ಳುವ ಬಜೆಟ್‌ ಎಂದು ಕೊಂಕಾಡಿದ್ದಾರೆ.

ನವದೆಹಲಿ: ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್‌ ಅವರು ಮಂಡಿಸಿರುವ ಬಜೆಟ್‌ಗೆ ವಿಪಕ್ಷ ನಾಯಕ ರಾಹುಲ್‌ ಗಾಂಧಿ ಪ್ರತಿಕ್ರಿಯಿಸಿದ್ದು, ಇದು ಕುರ್ಚಿ ಉಳಿಸಿಕೊಳ್ಳುವ ಬಜೆಟ್‌ ಎಂದು ಕೊಂಕಾಡಿದ್ದಾರೆ. ಜೊತೆಗೆ ಆಪ್ತಮಿತ್ರರು, ಮೈತ್ರಿ ಪಕ್ಷಗಳನ್ನು ಓಲೈಕೆ ಮಾಡುವುದಕ್ಕಾಗಿ ಮಂಡನೆ ಮಾಡಲಾಗಿದೆ ಎಂದು ಟೀಕಿಸಿದರು.

ಈ ಬಗ್ಗೆ ಟ್ವೀಟ್‌ ಮಾಡಿರುವ ರಾಹುಲ್‌,‘ ಇದು ಖುರ್ಚಿ ಬಚಾವ್‌ ಬಜೆಟ್‌. ಮಿತ್ರರ ಕಣ್ಣೊರೆಸುವಿಕೆ. ಅನ್ಯರಾಜಗಳಿಗೆ ಧೋಖಾ ಮಾಡುವ ಮೂಲಕ ಅವರಿಗೆ ಪೊಳ್ಳು ಭರವಸೆಯನ್ನು ನೀಡಿದೆ’ ಎಂದರು.

ಆಪ್ತಮಿತ್ರರ ಓಲೈಕೆ: ಸಾಮಾನ್ಯ ಜನರಿಗೆ ಯಾವುದೇ ನೆರವು ನೀಡದೆ, ‘ಎಎ’ಗಳಿಗೆ (ಅಂಬಾನಿ ಅದಾನಿ) ವಿಶೇಷ ನೆರವು ನೀಡಲಾಗಿದೆ. 

ಕಾಪಿ ಪೇಸ್ಟ್‌: ಕಾಂಗ್ರೆಸ್‌ ಪ್ರಣಾಳಿಕೆ ಹಾಗೂ ಕಳೆದ ಬಜೆಟ್‌ಗಳ ಕಾಪಿ ಪೇಸ್ಟ್‌ ಆಗಿದೆ’ ಎಂದು ಟ್ವೀಟ್‌ನಲ್ಲಿ ಹೇಳಿಕೊಂಡಿದ್ದಾರೆ.

PREV
Stay updated with breaking India news (ರಾಷ್ಟ್ರೀಯ ಸುದ್ಧಿ) – national politics, economy, social issues, major events and real‑time headlines from across India only on KannadaPrabha News.

Recommended Stories

ಎಚ್‌ಎಎಲ್ ಲ್ಲಿ ಉಪಗ್ರಹ ಬಳಸಿ ಕಾಪ್ಟರ್‌ ಲ್ಯಾಂಡ್‌
ರಫ್‌ಶೀಟ್‌ ಬಳಸಿ ಶಿಕ್ಷಕರಿಂದಲೇ ನೀಟ್ ಪ್ರಶ್ನೆಪತ್ರಿಕೆಯ ಸೋರಿಕೆ!