ಮುಂಬೈ: ಮಹಾರಾಷ್ಟ್ರ ವಿಧಾನಸಭಾ ಚುನಾವಣೆಯಲ್ಲಿ ಬಿಜೆಪಿ, ಶಿವಸೇನೆ ಮತ್ತು ಅಜಿತ್ ಪವಾರ್ ಬಣದ ಎನ್ಸಿಪಿಯ ಅಭೂತಪೂರ್ವ ಸಾಧನೆ, 15ನೇ ವಿಧಾನಸಭೆಯಲ್ಲಿ ಯಾವುದೇ ವಿಪಕ್ಷಕ್ಕೆ ಅಧಿಕೃತ ವಿಪಕ್ಷ ಮತ್ತು ಅಧಿಕೃತ ವಿಪಕ್ಷ ನಾಯಕನ ಸ್ಥಾನಮಾನವನ್ನೇ ತಪ್ಪಿಸಿದೆ.
ಆದರೆ ಪ್ರಸಕ್ತ ಚುನಾವಣೆಯಲ್ಲಿ ವಿಪಕ್ಷಗಳ ಪೈಕಿ ಶಿವಸೇನೆ ಗರಿಷ್ಠ 21 ಸ್ಥಾನ ಗೆದ್ದಿದೆ. ಅಘಾಡಿ ಕೂಟದ ಕಾಂಗ್ರೆಸ್, ಶರದ್ ಪವಾರ್ ಬಣದ ಸಾಧನೆ ಇದಕ್ಕಿಂತಲೂ ಕಡಿಮೆ ಇದೆ. ಹೀಗಾಗಿ ವಿಪಕ್ಷಗಳಿಗೆ ಈ ಬಾರಿ ಸ್ಥಾನಮಾನ ತಪ್ಪುವುದು ಖಚಿತವಾಗಿದೆ. 1960ರಲ್ಲಿ ಮಹಾರಾಷ್ಟ್ರ ವಿಧಾನಸಭೆ ರಚನೆಯಾದ ಬಳಿಕ ಅದು ಅಧಿಕೃತ ವಿಪಕ್ಷ ನಾಯಕನ ಹೊಂದದೇ ಇರುವುದು ಇದೇ ಮೊದಲು.