ಲೋಕಸಭೆ ಚುನಾವಣೆಯಲ್ಲಿ ಪಶ್ಚಿಮ ಬಂಗಾಳದ ಬಂಕುರಾದ ಬಿಷ್ಣುಪುರ ಕ್ಷೇತ್ರದಲ್ಲಿ ವಿಶಿಷ್ಟವಾದ ಸ್ಪರ್ಧೆ ಕಾಣಲಿದೆ.
ಕೋಲ್ಕತಾ: ಲೋಕಸಭೆ ಚುನಾವಣೆಯಲ್ಲಿ ಪಶ್ಚಿಮ ಬಂಗಾಳದ ಬಂಕುರಾದ ಬಿಷ್ಣುಪುರ ಕ್ಷೇತ್ರದಲ್ಲಿ ವಿಶಿಷ್ಟವಾದ ಸ್ಪರ್ಧೆ ಕಾಣಲಿದೆ. ಮಮತಾ ಬ್ಯಾನರ್ಜಿ ನೇತೃತ್ವದ ತೃಣಮೂಲ ಕಾಂಗ್ರೆಸ್ (ಟಿಎಂಸಿ) ಸುಜಾತಾ ಮಂಡಲ್ ಅವರನ್ನು ಕಣಕ್ಕಿಳಿಸಿದೆ. ಹಾಗೂ ಬಿಜೆಪಿ ಸೌಮಿತ್ರಾ ಖಾನ್ ಅವರಿಗೆ ಟಿಕೆಟ್ ನೀಡಿದೆ. ಈ ಇಬ್ಬರೂ ವಿಚ್ಛೇದಿತ ಪತಿ-ಪತ್ನಿಯರು ಎಂಬುದು ಇಲ್ಲಿ ವಿಶೇಷ.
ಬಿಷ್ಣುಪುರಕ್ಕೆ ಈಗ ಖಾನ್ ಹಾಲಿ ಬಿಜೆಪಿ ಸಂಸದರಾಗಿದ್ದು, ಮತ್ತೆ ಅವರು ಸ್ಪರ್ಧೆ ಮಾಡುತ್ತಿದ್ದಾರೆ. ‘ಟಿಎಂಸಿ ತಮ್ಮ ಮಾಜಿ ಪತ್ನಿಗೆ ಟಿಕೆಟ್ ನೀಡಿದ್ದಕ್ಕೆ ವ್ಯಂಗ್ಯವಾಡಿರುವ ಅವರು ಟಿಎಂಸಿ ರಾಜಕೀಯ ಅನುಭವ ಇರುವ ಯಾರಾದರೂ ಒಬ್ಬರಿಗೆ ಟಿಕೆಟ್ ನೀಡಿದ್ದರೆ ಒಂದೊಳ್ಳೆ ಸ್ಪರ್ಧೆಯಾಗುತ್ತಿತ್ತು’ ಎಂದು ಲೇವಡಿ ಮಾಡಿದ್ದಾರೆ.
ಖಾನ್ 2019ರಲ್ಲಿ ಬಿಜೆಪಿಯ ಅಭ್ಯರ್ಥಿಯಾಗಿ ಸ್ಪರ್ಧಿಸಿದ್ದರು. 2020ರ ಡಿಸೆಂಬರ್ನಲ್ಲಿ ಸೌಮಿತ್ರಾ ಖಾನ್ ಮತ್ತು ಸಜಾತಾ ಮಂಡಲ್ ಅವರಿಗೆ ವಿಚ್ಛೇದನವಾಗಿತ್ತು.
Stay updated with breaking India news (ರಾಷ್ಟ್ರೀಯ ಸುದ್ಧಿ) – national politics, economy, social issues, major events and real‑time headlines from across India only on KannadaPrabha News.