ಜ.22ಕ್ಕೆ ಕೋಲ್ಕತಾದಲ್ಲಿ ಮಮತಾ ಬ್ಯಾನರ್ಜಿ ಸಾಮರಸ್ಯ ಯಾತ್ರೆ

KannadaprabhaNewsNetwork |  
Published : Jan 17, 2024, 01:47 AM ISTUpdated : Jan 17, 2024, 04:57 PM IST
ಮಮತಾ | Kannada Prabha

ಸಾರಾಂಶ

ಅಯೋಧ್ಯೆಯಲ್ಲಿ ರಾಮಮಂದಿರ ಉದ್ಘಾಟನೆಯಾಗುವ ದಿನವೇ ಕೋಲ್ಕತಾದಲ್ಲಿ ಸಾಮರಸ್ಯ ಯಾತ್ರೆ ಮಾಡುವುದಾಗಿ ದೀದಿ ಎಂದೇ ಖ್ಯಾತರಾದ ಮಮತಾ ಬ್ಯಾನರ್ಜಿ ಘೋಷಣೆ ಮಾಡಿದ್ದಾರೆ.

ಕೋಲ್ಕತಾ: ಜ.22ರಂದು ಅಯೋಧ್ಯೆಯಲ್ಲಿ ರಾಮಲಲ್ಲಾ ಪ್ರಾಣ ಪ್ರತಿಷ್ಠಾಪನೆಯಾಗುವ ದಿನವೇ ಕೋಲ್ಕತಾದಲ್ಲಿ ‘ಸರ್ವ ಧರ್ಮ ಸಾಮರಸ್ಯ ಮೆರವಣಿಗೆ’ ಮಾಡುವುದಾಗಿ ಪಶ್ಚಿಮ ಬಂಗಾಳ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಹೇಳಿದ್ದಾರೆ.

ಮಂಗಳವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ‘ಅಂದು ಕಾಳಿಘಾಟ್ ಕಾಳಿ ಮಂದಿಕ್ಕೆ ನಾನು ಮೊದಲು ಭೇಟಿ ನೀಡಿ ಪೂಜೆ ಸಲ್ಲಿಸುವೆ. ಬಳಿಕ ನೀಡಿ ಎಲ್ಲ ಧರ್ಮೀಯರನ್ನು ಒಳಗೊಂಡು ಸಾಮರಸ್ಯ ಯಾತ್ರೆ ಆರಂಭವಾಗಲಿದೆ. 

ಈ ಯಾತ್ರೆ ಮಂದಿರ, ಮಸೀದಿ, ಚರ್ಚ್‌ ಹೀಗೆ ಎಲ್ಲ ಕಡೆಗಳಲ್ಲೂ ತೆರಳಲಿದೆ’ ಎಂದರು. ಜೊತೆಗೆ ಇದೇ ರೀತಿ ಮೆರವಣಿಗೆಗಳನ್ನು ಎಲ್ಲ ಜಿಲ್ಲೆಗಳಲ್ಲೂ ಆಯೋಜಿಸಲು ಟಿಎಂಸಿ ಕಾರ್ಯಕರ್ತರಿಗೆ ಮನವಿ ಮಾಡಿದರು.

‘ಪ್ರಾಣ ಪ್ರತಿಷ್ಠಾಪನೆ ಮಾಡುವುದು ಪುರೋಹಿತರ ಕೆಲಸ ಹೊರತು ರಾಜಕಾರಣಿಗಳದ್ದಲ್ಲ. ರಾಜಕಾರಣಿಗಳು ಕೇವಲ ಮೂಲಭೂತ ಸೌಕರ್ಯಗಳನ್ನು ಕಲ್ಪಿಸಬೇಕು’ ಎಂದು ಪ್ರಧಾನಿ ನರೇಂದ್ರ ಮೋದಿ ಅವರ ವಿರುದ್ಧ ಪರೋಕ್ಷವಾಗಿ ಟೀಕಿಸಿದರು.

PREV
Stay updated with breaking India news (ರಾಷ್ಟ್ರೀಯ ಸುದ್ಧಿ) – national politics, economy, social issues, major events and real‑time headlines from across India only on KannadaPrabha News.

Recommended Stories

ಷೇರಿಗಿಂತ ಚಿನ್ನ ಬೆಳ್ಳಿ ಹೂಡಿಕೆಯೇ ಹೆಚ್ಚು ಲಾಭ
=‘ಚೈನೀಸ್’ ಎಂದು ಬೈದು ತ್ರಿಪುರದ ಯುವಕನ ಹತ್ಯೆ