- ಯುವಕರಿಗೆ ಕರೆ ನೀಡಿದ್ದ ವಿಡಿಯೋ ಕೆಲಕಾಲ ಕಣ್ಮರೆ
- ತಾಂತ್ರಿಕ ದೋಷದಿಂದ ಪ್ರಮಾದ: ಮೆಟಾ ಸ್ಪಷ್ಟನೆ
- ಸೂಕ್ತ ವಿವರಣೆ ನೀಡುವಂತೆ ಮೆಟಾಗೆ ಕೇಂದ್ರ ಸಮನ್ಸ್ನವದೆಹಲಿ: ಪ್ರಧಾನಿ ನರೇಂದ್ರ ಮೋದಿ ದೇಶದ ಯುವಜನರನ್ನು ಉದ್ದೇಶಿಸಿ ಮಾಡಿದ ಫೇಸ್ಬುಕ್ ಪೋಸ್ಟ್ ಅನ್ನು ಕೆಲಕಾಲ ತೆಗೆದುಹಾಕಿದ ಪ್ರಸಂಗ ಮಂಗಳವಾರ ಮುಂಜಾನೆ ನಡೆದಿದೆ. ಇದು ವಿವಾದಕ್ಕೀಡಾಗುತ್ತಿದ್ದಂತೆಯೇ ಇದು ತಾಂತ್ರಿಕ ಸಮಸ್ಯೆಯಿಂದ ಆಗಿದ್ದು ಎಂದು ಸ್ಪಷ್ಟಪಡಿಸಿದೆ.
ಮೂಲಗಳ ಪ್ರಕಾರ, ಕಾಕ್ರೋಚ್ ಜನತಾ ಪಕ್ಷ (ಸಿಜೆಪಿ) ಆಯೋಜಿಸಿದ್ದ ವಿದ್ಯಾರ್ಥಿಗಳ ಪ್ರತಿಭಟನೆಯ ಸಂದರ್ಭದಲ್ಲಿ ಜುಲೈ 23ರಂದು ಪ್ರಧಾನಿ ಮೋದಿ ಇನ್ಸ್ಟಾಗ್ರಾಂನಲ್ಲಿ ಯುವಕರಿಗೆ ಕರೆಯೊಂದನ್ನು ನೀಡಿದ್ದರು. ಅದನ್ನು ನಂತರ ಫೇಸ್ಬುಕ್ನಲ್ಲೂ ಹಾಕಿದ್ದರು. ಆದರೆ ಮಂಗಳವಾರ ನಸುಕಿನಲ್ಲಿ ಕೆಲಕಾಲ ಅದು ಕಣ್ಮರೆಯಾಗಿತ್ತು. ಆ ಪೋಸ್ಟ್ನ ಜಾಗದಲ್ಲಿ, ‘ಕಾನೂನು ವಿನಂತಿ (ಲೀಗಲ್ ಡಿಮ್ಯಾಂಡ್) ಕಾರಣ ಅದನ್ನು ತಡೆಹಿಡಿಯಲಾಗಿದೆ’ ಎಂದು ಬರೆಯಲಾಗಿತ್ತು.