;Resize=(412,232))
ತಿರುವನಂತಪುರಂ: ಮನರೇಗಾದ ಬದಲು ಕೇಂದ್ರ ಸರ್ಕಾರ ಇತ್ತೀಚೆಗೆ ಅಂಗೀಕರಿಸಿದ ‘ಜಿ ರಾಮ್ ಜಿ’ ಕಾಯ್ದೆ ಹಿಂಪಡೆಯಬೇಕೆಂದು ಆಗ್ರಹಿಸಿ ಕೇರಳ ವಿಧಾನಸಭೆ ಗುರುವಾರ ನಿರ್ಣಯ ಅಂಗೀಕರಿಸಿದೆ.
ಇದರೊಂದಿಗೆ ಇಂಥ ನಿರ್ಣಯ ಅಂಗೀಕರಿಸಿದ 4ನೇ ರಾಜ್ಯವಾಗಿ ಹೊರಹೊಮ್ಮಿದೆ. ಈಗಾಗಲೇ ಕರ್ನಾಟಕ, ತೆಲಂಗಾಣ, ತಮಿಳುನಾಡಿನಲ್ಲಿ ಇಂತಹ ನಿರ್ಣಯ ಅಂಗೀಕಾರವಾಗಿದೆ. ಸಂಸದೀಯ ವ್ಯವಹಾರಗಳ ಸಚಿವ ಎಂ.ಬಿ. ರಾಜೇಶ್ ಗುರುವಾರ ವಿಧಾನಸಭೆಯಲ್ಲಿ ಈ ಕುರಿತ ನಿರ್ಣಯ ಮಂಡಿಸಿದರು. ವಿಪಕ್ಷಗಳ ವಿರೋಧದ ನಡುವೆ ಅವರ ನಿರ್ಣಯವನ್ನು ಅಂಗೀಕರಿಸಲಾಯಿತು.
‘ಹೊಸ ಕಾಯ್ದೆ ಅಡಿಯಲ್ಲಿ ಶೇ.40ರಷ್ಟು ಖರ್ಚನ್ನು ರಾಜ್ಯಸರ್ಕಾರ ಭರಿಸಬೇಕಾಗಿರುವುದರಿಂದ ಇದು ಹೊರೆಯಾಗಲಿದೆ. ಇವು ಹಿಂದಿನ ಕಾನೂನಿನಲ್ಲಿದ್ದ ಹಕ್ಕನ್ನು ಕಸಿಯುತ್ತದೆ. ಕೇರಳದ ಹಲವು ಗ್ರಾಮಗಳು ಈ ಯೋಜನೆಯಿಂದ ಹೊರಗುಳಿಯಬಹುದು’ ಎಂದು ಅವರು ಆರೋಪಿಸಿದರು.