ಕಾಶ್ಮೀರ ಗಡಿಯಲ್ಲಿ ಉಗ್ರರು ಮತ್ತೆ ಸಕ್ರಿಯ

KannadaprabhaNewsNetwork |  
Published : May 28, 2025, 12:29 AM IST
ಉಗ್ರವಾದ | Kannada Prabha

ಸಾರಾಂಶ

ಆಪರೇಷನ್‌ ಸಿಂದೂರ ನೀಡಿದ ಹೊಡೆತದ ಹೊರತಾಗಿಯೂ ಪಾಠ ಕಲಿತಂತೆ ಕಾಣದ ಪಾಕಿಸ್ತಾನ, ಕಾಶ್ಮೀರ ಗಡಿಯಲ್ಲಿ ಮತ್ತೆ ಉಗ್ರರ ಲಾಂಚ್‌ ಪ್ಯಾಡ್‌ಗಳನ್ನು ಸಕ್ರಿಯಗೊಳಿಸುತ್ತಿದೆ. ಉಗ್ರರು ಮತ್ತೆ ಅಲ್ಲಿ ಒಗ್ಗೂಡುತ್ತಿದ್ದಾರೆ ಎಂಬ ವಿಷಯ ಬೆಳಕಿಗೆ ಬಂದಿದೆ.

ಲಾಂಚ್‌ಪ್ಯಾಡ್‌ಗೆ ಮರಳುತ್ತಿರುವ ಉಗ್ರರು

ಮತ್ತೆ ಒಳನುಸುಳುವಿಕೆಗೆ ಉಗ್ರರ ಪ್ರಯತ್ನ

ಜಮ್ಮು: ಆಪರೇಷನ್‌ ಸಿಂದೂರ ನೀಡಿದ ಹೊಡೆತದ ಹೊರತಾಗಿಯೂ ಪಾಠ ಕಲಿತಂತೆ ಕಾಣದ ಪಾಕಿಸ್ತಾನ, ಕಾಶ್ಮೀರ ಗಡಿಯಲ್ಲಿ ಮತ್ತೆ ಉಗ್ರರ ಲಾಂಚ್‌ ಪ್ಯಾಡ್‌ಗಳನ್ನು ಸಕ್ರಿಯಗೊಳಿಸುತ್ತಿದೆ. ಉಗ್ರರು ಮತ್ತೆ ಅಲ್ಲಿ ಒಗ್ಗೂಡುತ್ತಿದ್ದಾರೆ ಎಂಬ ವಿಷಯ ಬೆಳಕಿಗೆ ಬಂದಿದೆ.

ಈ ಕುರಿತು ಮಂಗಳವಾರ ಇಲ್ಲಿ ಮಾಹಿತಿ ನೀಡಿರುವ ಬಿಎಸ್‌ಎಫ್‌ನ ಶಶಾಂಕ್‌ ಆನಂದ್‌, ‘ಉಗ್ರರು ಗಡಿಯ ಸಮೀಪವಿರುವ ಲಾಂಚ್‌ಪ್ಯಾಡ್‌ಗಳಿಗೆ ಹಿಂತಿರುಗುತ್ತಿದ್ದಾರೆ. ಬಹುಶಃ ಭಾರತೀಯ ಪ್ರದೇಶಕ್ಕೆ ನುಸುಳಲು ತಯಾರಿ ನಡೆಸುತ್ತಿದ್ದಾರೆ. ಅಂತಾರಾಷ್ಟ್ರೀಯ ಗಡಿಯಲ್ಲಿ ಅದರಲ್ಲೂ ವಿಶೇಷವಾಗಿ ಜಮ್ಮುವಿನ ಸಾಂಬಾ ವಲಯದಲ್ಲಿ ಉಗ್ರರ ಒಳನುಸುಳುವಿಕೆ ಪ್ರಯತ್ನಗಳು ನಡೆಯುತ್ತಿದೆ’ ಎಂದು ಹೇಳಿದ್ದಾರೆ. ಜತೆಗೆ ಆಪರೇಷನ್ ಸಿಂಧೂರ್ ಇನ್ನೂ ಸಕ್ರಿಯವಾಗಿದೆ. ಗಡಿಯುದ್ದಕ್ಕೂ ಬಿಎಸ್‌ಎಫ್ ಕಟ್ಟೆಚ್ಚರ ವಹಿಸಿದೆ. ಗಡಿ ಪ್ರದೇಶಗಳಲ್ಲಿ ಕಣ್ಗಾವಲು ಮತ್ತು ಮೇಲ್ವಿಚಾರಣಾ ವ್ಯವಸ್ಥೆಗಳನ್ನು ಹೆಚ್ಚಿಸುವ ಕುರಿತು ಭಾರತೀಯ ಸೇನೆಯೊಂದಿಗೆ ಸಮನ್ವಯ ನಡೆಸಿದ್ದೇವೆ’ ಎಂದರು.

==

ಪಾಕ್‌ನ 75 ಗಡಿ ಪೋಸ್ಟ್‌, 42 ಸೇನಾ ಮುಂಚೂಣಿ ನೆಲೆ ಧ್ವಂಸ

ಜಮ್ಮು: ಪಾಕಿಸ್ತಾನದ ಸೇನೆಯ ಅಪ್ರಚೋದಿತ ದಾಳಿ ಯತ್ನಕ್ಕೆ ಪ್ರತಿಯಾಗಿ ಆಪರೇಷನ್ ಸಿಂದೂರದ ವೇಳೆ ಭಾರತೀಯ ಸೇನಾ ಪಡೆಗಳು ಪಾಕಿಸ್ತಾನದ 76 ಗಡಿ ಹೊರಠಾಣೆ ಹಾಗೂ 42 ಮುಂಚೂಣಿ ರಕ್ಷಣಾ ನೆಲೆ ಮತ್ತು ಉಗ್ರರ 3 ಲಾಂಚ್‌ಪ್ಯಾಡ್‌ಗಳನ್ನು ಧ್ವಂಸಗೊಳಿಸಿತ್ತು ಎಂದು ಬಿಎಸ್‌ಎಫ್‌ ಮಾಹಿತಿ ನೀಡಿದೆ.

40-50 ಉಗ್ರರನ್ನು ಭಾರತದೊಳಗೆ ಕಳಿಸುವ ಪ್ರಯತ್ನದ ಭಾಗವಾಗಿ ಪಾಕ್ ಸೇನೆಯು ಭಾರತದ 60 ಗಡಿ ಹೊರಠಾಣೆ ಹಾಗೂ 49 ಎಫ್‌ಡಿಎಲ್‌ಗಳನ್ನು ಗುರಿಯಾಗಿಸಿ ಶೆಲ್ ಮತ್ತು ಗುಂಡಿನ ದಾಳಿ ನಡೆಸಿತ್ತು. ಇದಕ್ಕೆ ಪ್ರತಿಯಾಗಿ ಬಿಎಸ್‌ಎಫ್ ದಾಳಿ ನಡೆಸಿ, ಪಾಕ್ ಪ್ರಯತ್ನವನ್ನು ಹಿಮ್ಮೆಟ್ಟಿಸಿತು ಎಂದು ಬಿಎಸ್‌ಎಫ್‌ನ ಡಿಐಜಿ ಚಿತೆರ್‌ಪೌಲ್ ಸಿಂಗ್ ಹೇಳಿದ್ದಾರೆ.

PREV
Stay updated with breaking India news (ರಾಷ್ಟ್ರೀಯ ಸುದ್ಧಿ) – national politics, economy, social issues, major events and real‑time headlines from across India only on KannadaPrabha News.

Recommended Stories

ದುಡಿಯುವ ಸ್ತ್ರೀಗೆ ಪತಿ ಜೀವನಾಂಶ ಕೊಡಬೇಕಿಲ್ಲ: ಅಲಹಾಬಾದ್‌ ‘ಹೈ’
ಸಂಸತ್‌ ದಾಳಿಗೆ 24 ವರ್ಷ: ಹುತಾತ್ಮರಿಗೆ ಗಣ್ಯರ ಗೌರವ