ಭಾರತದ ದಾಳಿಗೆ ಬಲಿಯಾದ ಉಗ್ರ ಅಜರ್‌ ಕುಟುಂಬಕ್ಕೆ ಪಾಕ್‌ 14 ಕೋಟಿ ಪರಿಹಾರ

Published : May 15, 2025, 06:25 AM IST
Jaish e Mohammad Masood Azhar

ಸಾರಾಂಶ

ಭಾರತದ ಆಪರೇಷನ್ ಸಿಂದೂರ ಕಾರ್ಯಾಚರಣೆಯಲ್ಲಿ ಹತರಾದ ಜೈಷ್‌ ಎ ಮೊಹಮ್ಮದ್‌ ಉಗ್ರ ಮಸೂದ್ ಅಜರ್ ಕುಟುಂಬದ 14 ಜನರಿಗೆ ಒಟ್ಟು 14 ಕೋಟಿ ರು. ಪರಿಹಾರ

 ನವದೆಹಲಿ: ಭಾರತದ ಆಪರೇಷನ್ ಸಿಂದೂರ ಕಾರ್ಯಾಚರಣೆಯಲ್ಲಿ ಹತರಾದ ಜೈಷ್‌ ಎ ಮೊಹಮ್ಮದ್‌ ಉಗ್ರ ಮಸೂದ್ ಅಜರ್ ಕುಟುಂಬದ 14 ಜನರಿಗೆ ಒಟ್ಟು 14 ಕೋಟಿ ರು. ಪರಿಹಾರ ನೀಡಲು ಪಾಕಿಸ್ತಾನ ಸರ್ಕಾರ ನಿರ್ಧರಿಸಿದೆ. ಈ ಮೂಲಕ ತಾನು ಉಗ್ರಪೋಷಿತ ರಾಷ್ಟ್ರ ಎನ್ನುವುದನ್ನು ಮತ್ತೊಮ್ಮೆ ಸಾಬೀತು ಪಡಿಸಿದೆ.

ಭಾರತದ ದಾಳಿಗೆ ಬಲಿಯಾದವರ ಕುಟುಂಬಕ್ಕೆ ಪಾಕಿಸ್ತಾನದ ಪ್ರಧಾನಿ ಶೆಹಬಾಜ್‌ ಷರೀಫ್‌ ತಲಾ 1 ಕೋಟಿ ರು, ಪರಿಹಾರ ಘೋಷಿಸಿದ್ದಾರೆ. ಅಜರ್ ಕುಟುಂಬದ 14 ಮಂದಿ ಸತ್ತಿದ್ದು, ಆತನೇ 14 ಕೋಟಿ ರು, ಪರಿಹಾರ ಪಡೆಯುವ ಸಾಧ್ಯತೆಯಿದೆ ಎಂದು ವರದಿಗಳು ಹೇಳಿವೆ. ಭಾರತದ ದಾಳಿಯಲ್ಲಿ ಅಜರ್‌ನ ಸಹೋದರಿ, ಭಾವ , ಅಳಿಯ ಮಕ್ಕಳು, ಆಪ್ತರು ಸೇರಿದಂತೆ 14 ಮಂದಿ ಸಾವನ್ನಪ್ಪಿದ್ದರು.

PREV
Stay updated with breaking India news (ರಾಷ್ಟ್ರೀಯ ಸುದ್ಧಿ) – national politics, economy, social issues, major events and real‑time headlines from across India only on KannadaPrabha News.

Recommended Stories

ಯುದ್ಧ 100 ದಿನ ಮುಂದುವರಿಯುವ ಸಾಧ್ಯತೆ!
ಕನ್ನಡತಿ ಕೃತಿ ಕಾರಂತ್‌ಗೆ ಜಾಗತಿಕ ಪ್ರಶಸ್ತಿ