ಪರೀಕ್ಷಾ ವ್ಯವಸ್ಥೆ ಸುಧಾರಣೆಹೊಣೆ ಕನ್ನಡಿಗ ನಿಲೇಕಣಿಗೆ- ನಿಲೇಕಣಿ ನೇತೃತ್ವದಲ್ಲಿ ಉನ್ನತಮಟ್ಟದ ಕಾರ್ಯಪಡೆ ರಚನೆ ಘೋಷಣೆ- ಪ್ರಹ್ಲಾದ್ ಜೋಷಿ ಬಳಿಕ ಮತ್ತೊಬ್ಬ ಕನ್ನಡಿಗಗೆ ಪ್ರಧಾನಿ ಮೋದಿ ಮನ್ನಣೆ- ತಂತ್ರಜ್ಞಾನ ಆಧರಿತ, ಪಾರದರ್ಶಕ, ವಿಶ್ವಾಸಾರ್ಹ ವ್ಯವಸ್ಥೆ ಶಿಫಾರಸುನೀಟ್ ಪರೀಕ್ಷಾ ಅಕ್ರಮದ ಕುರಿತು ಜಿರಳೆ ಪಕ್ಷದ ಪ್ರತಿಭಟನೆಯಿಂದ ಸರ್ಕಾರ ಇಕ್ಕಟ್ಟಿಗೆಅದರ ಬೆನ್ನಲ್ಲೇ ಪರೀಕ್ಷಾ ಅಕ್ರಮ ಎಸಗುವವರ ವಿರುದ್ಧ ಕಠಿಣ ಕ್ರಮಕ್ಕೆ ಕೇಂದ್ರ ನಿರ್ಧಾರ
ಅದರ ಬೆನ್ನಲ್ಲೇ ಎನ್ಟಿಎ ಪರೀಕ್ಷಾ ವ್ಯವಸ್ಥೆ ಸುಧಾರಣೆಗೆ ಉನ್ನತ ಕಾರ್ಯಪಡೆ ರಚನೆ
ನಿಲೇಕಣಿ ನೇತೃತ್ವದ ತಂಡದಲ್ಲಿ ಇಸ್ರೋ ಮಾಜಿ ಬಾಸ್ ಸೋಮನಾಥ್ ಸೇರಿ ಅನೇಕರು3 ದಿನದಲ್ಲಿ ಮೂರನೇ ವಿಡಿಯೋ ಬಿಡುಗಡೆ ಮಾಡಿ ಪ್ರಧಾನಿ ನರೇಂದ್ರ ಮೋದಿ ಘೋಷಣೆಪಿಟಿಐ ನವದೆಹಲಿ
ಈ ಮೂಲಕ ಕೇಂದ್ರ ಶಿಕ್ಷಣ ಸಚಿವ ಖಾತೆಯು ಧಾರವಾಡ ಸಂಸದ ಪ್ರಹ್ಲಾದ ಜೋಶಿ ಪಾಲಾದ ಬೆನ್ನಲ್ಲೇ ಕನ್ನಡಿಗನಿಗೆ ಮತ್ತೊಂದು ಮಹತ್ವದ ಹುದ್ದೆ ಒಲಿದುಬಂದಿದೆ.
3ನೇ ವಿಡಿಯೋ ಮೂಲಕ ಘೋಷಣೆ:
‘ಪ್ರಖ್ಯಾತಜಾಗತಿಕ ತಂತ್ರಜ್ಞಾನ ತಜ್ಞ ನಂದನ್ ನಿಲೇಕಣಿ ನೇತೃತ್ವದಲ್ಲಿ ಪರೀಕ್ಷಾ ಸುಧಾರಣೆಗಳ ಕುರಿತು ಉನ್ನತ ಮಟ್ಟದ ಕಾರ್ಯಪಡೆ ರಚಿಸಲಾಗಿದೆ. ಕಾರ್ಯಪಡೆಯ ಸಲಹೆಗಳ ಮೇರೆಗೆ ಸರ್ಕಾರವು ದೀರ್ಘಕಾಲೀನ ರಚನಾತ್ಮಕ ಸುಧಾರಣೆಗಳನ್ನು ತರಲು, ತಂತ್ರಜ್ಞಾನ ದೃಷ್ಟಿಕೋನವನ್ನು ಜಾರಿಗೊಳಿಸಲು ಮತ್ತು ವ್ಯವಸ್ಥೆಯಲ್ಲಿನ ರಚನಾತ್ಮಕ ಸುಧಾರಣೆಗಳನ್ನು ಪುನರುಜ್ಜೀವನಗೊಳಿಸಲು ಸಹಾಯ ಮಾಡುತ್ತದೆ. ಇದು ಪರಿಪೂರ್ಣ ಪರೀಕ್ಷಾ ವ್ಯವಸ್ಥೆಯನ್ನು ಸ್ಥಾಪಿಸಲು ಕೆಲಸ ಮಾಡುತ್ತದೆ’ ಎಂದು ಪ್ರಧಾನಿ ಹೇಳಿದರು.
ಆಧಾರ್ ಶಿಲ್ಪಿಗೆ ಮಣೆ ಏಕೆ?:
ಮುಂಬರುವ ವರ್ಷಗಳಲ್ಲಿ ಪರೀಕ್ಷೆಗಳನ್ನು ನಡೆಸುವಲ್ಲಿ ತಂತ್ರಜ್ಞಾನ ಪ್ರಮುಖ ಪಾತ್ರ ವಹಿಸಲಿರುವ ಕಾರಣದಿಂದ, ಡಿಜಿಟಲ್ ಮೂಲಸೌಕರ್ಯ ಅಭಿವೃದ್ಧಿಪಡಿಸಿದ ಅನುಭವವುಳ್ಳ ಇವರಿಗೆ ಈ ಜವಾಬ್ದಾರಿ ನೀಡಲಾಗಿದೆ. ನೀಟ್ ಸೇರಿ ಅನೇಕ ಮಹತ್ವದ ಪರೀಕ್ಷೆಗಳನ್ನು ಎನ್ಟಿಎ ನಡೆಸುತ್ತಿದ್ದು, ಅವುಗಳ ಸುಧಾರಣೆಗೆ ನಿಲೇಕಣಿ ಟೀಂ ಶಿಫಾರಸು ಮಾಡಲಿದೆ.
ಕನ್ನಡಿಗರಾದ ನಂದನ್ ನಿಲೇಕಣಿ ಅವರು ಐಐಟಿ ಬಾಂಬೆಯಿಂದ ಎಲೆಕ್ಟ್ರಿಕಲ್ ಎಂಜಿನಿಯರಿಂಗ್ ಪದವಿಯನ್ನು ಪಡೆದವರು. 1981ರಲ್ಲಿ ಎನ್.ಆರ್. ನಾರಾಯಣ ಮೂರ್ತಿ ಅವರೊಂದಿಗೆ ಸೇರಿ ಇನ್ಫೋಸಿಸ್ ಎಂಬ ಟೆಕ್ ಸಂಸ್ಥೆ ಹುಟ್ಟುಹಾಕಿದ ಇವರು, 2002-2007ರ ಅವಧಿಯಲ್ಲಿ ಅದರ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಆಗಿದ್ದರು.
ಬಳಿಕ ಭಾರತೀಯರಿಗೆ ವಿಶೇಷ ಬಯೋಮೆಟ್ರಿಕ್ ಗುರುತನ್ನು ನೀಡುವ ಆಧಾರ್ ಜಾರಿಗೆ ತರಲೆಂದು ರಚಿಸಲಾದ ಭಾರತದ ವಿಶಿಷ್ಟ ಗುರುತಿನ ಪ್ರಾಧಿಕಾರದ (ಯುಡಿಎಐ) ಮುಖ್ಯಸ್ಥರನ್ನಾಗಿ ನಿಲೇಕಣಿ ಅವರನ್ನು 2009ರಲ್ಲಿ ನೇಮಿಸಲಾಯಿತು. ಆಗ ಆಧಾರ್ ಕಾರ್ಡ್ ತಂತ್ರಜ್ಞಾನವನ್ನು ರೂಪಿಸಿ ಜನಜನಿತರಾದರು. ಈ ಜವಾಬ್ದಾರಿ ವಹಿಸಿಕೊಳ್ಳುವ ಮುನ್ನ ಅವರು ಇನ್ಫೋಸಿಸ್ ತೊರೆದಿದ್ದರು, 2017ರಲ್ಲಿ ಮತ್ತೆ ಅದರ ಕಾರ್ಯನಿರ್ವಾಹಕೇತರ ಅಧ್ಯಕ್ಷರಾಗಿ ಸೇರಿಕೊಂಡರು.ಈ ನಡುವೆ 2014ರಲ್ಲಿ ನಿಲೇಕಣಿ ಬೆಂಗಳೂರು ದಕ್ಷಿಣ ಲೋಕಸಭಾ ಕ್ಷೇತ್ರದಲ್ಲಿ ಕಾಂಗ್ರೆಸ್ ಅಭ್ಯರ್ಥಿಯಾಗಿ ಸ್ಪರ್ಧಿಸಿ ಬಿಜೆಪಿಯ ಎಚ್.ಎನ್. ಅನಂತಕುಮಾರ್ ವಿರುದ್ಧ ಸೋತಿದ್ದರು.