* ಆಶ್ರಮಕ್ಕೆ ಪ್ರಶಾಂತ್‌ ಕಿಶೋರ್‌ ಶಿಫ್ಟ್ !

KannadaprabhaNewsNetwork |  
Published : May 22, 2026, 01:45 AM IST
ಪಿಕೆ | Kannada Prabha

ಸಾರಾಂಶ

ಜನ ಸುರಾಜ್‌ ಪಕ್ಷದ ಸಂಸ್ಥಾಪಕ, ಚುನಾವಣಾ ತಂತ್ರಗಾರಿಕೆ ನಿಪುಣ ಪ್ರಶಾಂತ್‌ ಕಿಶೋರ್‌ ಅವರು ಮನೆ ತೊರೆದು ಆಶ್ರಮ ಸೇರಿದ್ದಾರೆ. ಮುಂದಿನ ವಿಧಾನಸಭಾ ಚುನಾವಣೆ ವರೆಗೂ ಪಟನಾದ ಹೊರವಲಯದಲ್ಲಿರುವ ಆಶ್ರಮದಲ್ಲೇ ಇದ್ದುಕೊಂಡು ರಾಜಕೀಯ ಚಟುವಟಿಕೆಗಳನ್ನು ಮುಂದುವರಿಸುವುದಾಗಿ ಘೋಷಿಸಿದ್ದಾರೆ.

- ಮುಂದಿನ ಚುನಾವಣೆಗೆ ಆಶ್ರಮದಲ್ಲಿ ಕೂತು ಕೆಲಸ

- ಅಲ್ಲಿಂದಲೇ ಜನ್‌ ಸುರಾಜ್‌ ಪಕ್ಷದ ಸಂಘಟನೆ

- ಮುಂದೆ ಪಕ್ಷ ಉತ್ತಮ ಸಾಧನೆ ತೋರುವ ವಿಶ್ವಾಸ

ಪಟನಾ: ಜನ ಸುರಾಜ್‌ ಪಕ್ಷದ ಸಂಸ್ಥಾಪಕ, ಚುನಾವಣಾ ತಂತ್ರಗಾರಿಕೆ ನಿಪುಣ ಪ್ರಶಾಂತ್‌ ಕಿಶೋರ್‌ ಅವರು ಮನೆ ತೊರೆದು ಆಶ್ರಮ ಸೇರಿದ್ದಾರೆ. ಮುಂದಿನ ವಿಧಾನಸಭಾ ಚುನಾವಣೆ ವರೆಗೂ ಪಟನಾದ ಹೊರವಲಯದಲ್ಲಿರುವ ಆಶ್ರಮದಲ್ಲೇ ಇದ್ದುಕೊಂಡು ರಾಜಕೀಯ ಚಟುವಟಿಕೆಗಳನ್ನು ಮುಂದುವರಿಸುವುದಾಗಿ ಘೋಷಿಸಿದ್ದಾರೆ.

ಅಲ್ಲದೆ, ಮುಂದಿನ ವಿಧಾನಸಭಾ ಚುನಾವಣೆಯಲ್ಲಿ ತಮ್ಮ ಪಕ್ಷವು ತನ್ನ ಅಸ್ತಿತ್ವ ಸಾರಲಿದೆ ಎಂಬ ವಿಶ್ವಾಸವನ್ನು ಪಿಕೆ ಎಂದೇ ಹೆಸರಾದ ಅವರು ವ್ಯಕ್ತಪಡಿಸಿದ್ದಾರೆ.

ಸುದ್ದಿಗಾರರ ಜತೆಗೆ ಮಾತನಾಡಿದ ಅವರು, ‘ನಾನು ಕಳೆದ ರಾತ್ರಿ ಐಐಟಿ ಪಟನಾ ಸಮೀಪದಲ್ಲೇ ಇರುವ ಬಿಹಾರ ನವ ನಿರ್ಮಾಣ ಆಶ್ರಮಕ್ಕೆ ಸ್ಥಳಾಂತರಗೊಂಡಿದ್ದೇನೆ. ಮುಂದಿನ ವಿಧಾನಸಭಾ ಚುನಾವಣೆ ವರೆಗೆ ಅಲ್ಲೇ ಇರಲಿದ್ದೇನೆ. ಆ ಚುನಾವಣೆಯಲ್ಲಿ ನಮ್ಮ ಪಕ್ಷ ಉತ್ತಮ ಸಾಧನೆ ತೋರುವ ಭರವಸೆ ಇದೆ’ ಎಂದರು.

ರಾಜಕೀಯ ಸಲಹಾ ಸಂಸ್ಥೆ ಐ-ಪ್ಯಾಕ್‌ನ ಸಹಸಂಸ್ಥಾಪಕರಾಗಿರುವ ಪ್ರಶಾಂತ್‌ ಕಿಶೋರ್‌ ಅವರು 2024ರಲ್ಲಿ ಜನ ಸುರಾಜ್‌ ಪಕ್ಷ ಕಟ್ಟಿ ಈ ಬಾರಿಯ ಬಿಹಾರ ವಿಧಾನಸಭಾ ಚುನಾವಣೆಗೆ ಸ್ಪರ್ಧಿಸಿದ್ದರು. ಪಕ್ಷದ ರಾಷ್ಟ್ರೀಯ ಅಧ್ಯಕ್ಷ, ಬಿಜೆಪಿಯ ಮಾಜಿ ಸಂಸದ ಉದಯ್‌ ಸಿಂಗ್‌ ಅವರ ಒಡೆತನದ, ಪಟನಾ ಏರ್ಪೋರ್ಟ್‌ಗೆ ಸಮೀಪದಲ್ಲೇ ಇರುವ ಬಂಗಲೆಯಲ್ಲಿ ಈವರೆಗೆ ನೆಲೆಸಿದ್ದರು.

PREV
Stay updated with breaking India news (ರಾಷ್ಟ್ರೀಯ ಸುದ್ಧಿ) – national politics, economy, social issues, major events and real‑time headlines from across India only on KannadaPrabha News.

Recommended Stories

ವಿಜಯ್ ಸಂಪುಟಕ್ಕೆ ಇಬ್ಬರು ಕಾಂಗ್ರೆಸ್ಸಿಗರು ಸೇರಿ 23 ಮಂದಿ ಸೇರ್ಪಡೆ
2034ರವರೆಗೆ ದೇಶದಲ್ಲಿ ಬಿಜೆಪಿ ಪ್ರಾಬಲ್ಯ ತಗ್ಗಲ್ಲ: ಸಮೀಕ್ಷಾ ತಜ್ಞ- ಬಿಜೆಪಿಗೆ ಗೆಲುವು, ವಿಪಕ್ಷಕ್ಕೆ ಸೋಲು ತಪ್ಪಲ್ಲ: ಗುಪ್ತಾ- 70ರ ದಶಕದ ಕಾಂಗ್ರೆಸ್‌ನ ವರ್ಚಸ್ಸು ಈಗ ಬಿಜೆಪಿಗೆ