‘ಮೊಬೈಲ್‌, ಜೈಶ್ರೀರಾಂ ಚಟ ಹತ್ತಿಸಿ ಹಸಿವಿನಿಂದ ಯುವಕರ ಸಾವು ಮೋದಿ ಬಯಕೆ: ರಾಹುಲ್‌

KannadaprabhaNewsNetwork |  
Published : Mar 06, 2024, 02:15 AM IST
ರಾಹುಲ್‌ ಜೊತೆ ಬಾಕ್ಸರ್‌ ವಿಜೇಂದರ್‌ ಸಿಂಗ್‌ | Kannada Prabha

ಸಾರಾಂಶ

ಪ್ರಧಾನಿ ವಿರುದ್ಧ ರಾಹುಲ್‌ ವಾಗ್ದಾಳಿ ನಡೆಸಿದ್ದು, ದೇಶದ ಯುವಕರಿಗೆ ಮೊಬೈಲ್‌ ಮತ್ತು ಶ್ರೀರಾಮ ಭಜನೆಯ ಗೀಳು ಹತ್ತಿಸಿ ಅವರನ್ನು ಹಸಿವಿನಿಂದ ಸಾಯಲು ಬಯಸಿದ್ದಾರೆ ಎಂದಿದ್ದಾರೆ.

ಶಾಜಾಪುರ್‌: ರಾಷ್ಟ್ರದ ಯುವಜನತೆ ಸದಾಕಾಲ ಮೊಬೈಲ್‌ನಲ್ಲಿ ಕಾಲ ಕಳೆಯುತ್ತಾ, ದಿನವಿಡೀ ಜೈ ಶ್ರೀರಾಂ ಘೋಷಣೆಯನ್ನು ಕೂಗುತ್ತಾ ಹಸಿವಿನಿಂದ ಸಾಯಬೇಕೆಂಬುದು ಪ್ರಧಾನಿ ಮೋದಿ ಬಯಕೆಯಾಗಿದೆ ಎನ್ನುವ ಮೂಲಕ ಕಾಂಗ್ರೆಸ್‌ ನಾಯಕ ರಾಹುಲ್ ಗಾಂಧಿ ವಿವಾದ ಸೃಷ್ಟಿಸಿದ್ದಾರೆ. ಭಾರತ್‌ ಜೋಡೋ ನ್ಯಾಯ ಯಾತ್ರೆ ಸಾಗುವ ವೇಳೆ ಬಿಜೆಪಿ ಕಾರ್ಯಕರ್ತರು ಜೈಶ್ರೀರಾಂ ಘೋಷಣೆ ಕೂಗಿದ್ದಕ್ಕೆ ತಿರುಗೇಟು ನೀಡಿದ ರಾಹುಲ್‌, ‘ದೇಶದಲ್ಲಿ ನಿರುದ್ಯೋಗ ಹೆಚ್ಚುತ್ತಿದ್ದರೂ ಉದ್ಯೋಗ ಸೃಷ್ಟಿಗೆ ಒತ್ತು ನೀಡದೆ ಪ್ರಧಾನಿ ಮೋದಿಯವರು ದೇಶದ ಯುವಜನತೆಯನ್ನು ಜಾತಿಯ ಹೆಸರಿನಲ್ಲಿ ಎತ್ತಿಕಟ್ಟಿ ಅವರು ಶ್ರೀರಾಮನ ಘೋಷಣೆ ಕೂಗುತ್ತಾ ಹಸಿವಿನಿಂದ ಸಾಯಲಿ ಎಂದು ಬಯಸಿದ್ದಾರೆ’ ಎಂದಿದ್ದಾರೆ.

PREV
Stay updated with breaking India news (ರಾಷ್ಟ್ರೀಯ ಸುದ್ಧಿ) – national politics, economy, social issues, major events and real‑time headlines from across India only on KannadaPrabha News.

Recommended Stories

2025 ಸುಧಾರಣೆಗಳ ಸಾರ್ಥಕ ವರ್ಷ: ಮೋದಿ ಹರ್ಷ
ಪತ್ರಕರ್ತರ ಹಿತರಕ್ಷಣೆಗೆ ಐಎಫ್‌ಡಬ್ಲ್ಯುಜೆ ಆಗ್ರಹ