ಉ.ಪ್ರದೇಶ ಯುವಕರು ಕುಡುಕರು: ರಾಹುಲ್‌ ಗಾಂಧಿ ಹೊಸ ವಿವಾದ

KannadaprabhaNewsNetwork |  
Published : Feb 21, 2024, 02:01 AM ISTUpdated : Feb 21, 2024, 09:00 AM IST
ರಾಹುಲ್‌ | Kannada Prabha

ಸಾರಾಂಶ

ಉತ್ತರ ಪ್ರದೇಶದ ಯುವಕರು ರಾತ್ರೋರಾತ್ರಿ ರಸ್ತೆಯಲ್ಲಿ ಕುಡಿದು ಕುಣಿದಾಡುತ್ತಿದ್ದು, ಅವರ ಭವಿಷ್ಯ ಕಲ್ಮಶವಾಗಿದದೆ ಎನ್ನುವ ಮೂಲಕ ರಾಹುಲ್‌ ಗಾಂಧಿ ವಿವಾದ ಸೃಷ್ಟಿಸಿದ್ದಾರೆ.

ಲಖನೌ: ಭಾರತ್‌ ಜೋಡೋ ನ್ಯಾಯ್‌ ಯಾತ್ರೆಯಲ್ಲಿ ಭಾಗಿಯಾಗಿರುವ ರಾಹುಲ್‌ ಗಾಂಧಿ ಅವರು ಉತ್ತರ ಪ್ರದೇಶದ ಯುವಕರು ‘ಕುಡುಕರು’ ಎಂದು ಹೇಳಿಕೆ ನೀಡಿ ವಿವಾದ ಸೃಷ್ಟಿಸಿದ್ದಾರೆ.

ವಾರಾಣಸಿಯಲ್ಲಿ ಮೆರವಣಿಗೆಯಲ್ಲಿ ಮಾತನಾಡಿದ ರಾಹುಲ್‌,‘ ವಾರಾಣಸಿಯಲ್ಲಿ ಯುವಕರು ಕುಡಿದು ರಸ್ತೆ ಬದಿಯಲ್ಲಿ ಮಲಗಿದ್ದರು. ರಾತ್ರೋರಾತ್ರಿ ಕುಣಿದಾಡುತ್ತಿದ್ದರು.

ಇದನ್ನು ಕಂಡ ನನಗೆ ಉತ್ತರ ಪ್ರದೇಶದ ಯುವಕರ ಭವಿಷ್ಯ ಕಲ್ಮಶವಾಗಿದೆ ಎಂದೆನೆಸಿತು. ಇವರು ದಿಕ್ಕುದೆಸೆಯಿಲ್ಲದವರು’ ಎಂದು ಹೇಳಿದ್ದು, ಇದು ವಿವಾದಕ್ಕೆ ಕಾರಣವಾಗಿದೆ.

ವಾರಾಣಸಿ ಪ್ರಧಾನಿ ನರೇಂದ್ರ ಮೋದಿ ಅವರನ್ನು ಲೋಕಸಭೆ ಪ್ರತಿನಿಧಿಸುವ ಕ್ಷೇತ್ರ ಎಂಬುದು ವಿಶೇಷ.

PREV

Recommended Stories

ಭಾರತ-ಇಂಗ್ಲೆಂಡ್‌ ಸರಣಿ ಕ್ಲೈಮ್ಯಾಕ್ಸ್‌ ಇಂದು !
ಕೇರಳದ 2 ರು. ಡಾಕ್ಟರ್ ನಿಧನ