ಸಾರ್ವಜನಿಕ ಆಸ್ತಿಗೆ ಹಾನಿ ಮಾಡಿದ ವ್ಯಕ್ತಿಗಳಿನ್ನು ಪರಿಹಾರ ನೀಡಬೇಕು!

KannadaprabhaNewsNetwork |  
Published : Mar 05, 2024, 01:31 AM IST
ನಷ್ಟ | Kannada Prabha

ಸಾರಾಂಶ

ಪ್ರತಿಭಟನೆ ಸೇರಿದಂತೆ ಯಾವುದೇ ಸಮಯದಲ್ಲಿ ಸಾರ್ವಜನಿಕ ಆಸ್ತಿಪಾಸ್ತಿಗೆ ಹಾನಿ ಉಂಟು ಮಾಡಿದ ವ್ಯಕ್ತಿಗಳಿಂದಲೇ ನಷ್ಟದ ಹಣ ಭರಿಸುವ ಹೊಸ ಕಾನೂನು ಜಾರಿಗೆ ಉತ್ತರಾಖಂಡ ಸರ್ಕಾರ ನಿರ್ಧರಿಸಿದೆ.

ಡೆಹ್ರಾಡೂನ್‌: ಪ್ರತಿಭಟನೆ ಸೇರಿದಂತೆ ಯಾವುದೇ ಸಮಯದಲ್ಲಿ ಸಾರ್ವಜನಿಕ ಆಸ್ತಿಪಾಸ್ತಿಗೆ ಹಾನಿ ಉಂಟು ಮಾಡಿದ ವ್ಯಕ್ತಿಗಳಿಂದಲೇ ನಷ್ಟದ ಹಣ ಭರಿಸುವ ಹೊಸ ಕಾನೂನು ಜಾರಿಗೆ ಉತ್ತರಾಖಂಡ ಸರ್ಕಾರ ನಿರ್ಧರಿಸಿದೆ. ಈ ಕುರಿತು ಸುಗ್ರೀವಾಜ್ಞೆ ಮೂಲಕ ಕಾನೂನು ಜಾರಿಗೆ ಸರ್ಕಾರ ನಿರ್ಧರಿಸಿದ್ದು, ಅದಕ್ಕೆ ರಾಜ್ಯ ಸಚಿವ ಸಂಪುಟ ಸೋಮವಾರ ತನ್ನ ಅನುಮೋದನೆ ನೀಡಿದೆ.ಅಕ್ರಮ ಮದರಸಾ ಧ್ವಂಸದ ಬಳಿಕ ಇತ್ತೀಚೆಗೆ ಹಲ್‌ದ್ವಾನಿಯಲ್ಲಿ ಭಾರೀ ಹಿಂಸಾಚಾರ ನಡೆದು ಹಲವರು ಸಾವನ್ನಪ್ಪಿ, ಸಾರ್ವಜನಿಕ ಆಸ್ತಿಪಾಸ್ತಿಗೆ ಭಾರೀ ಹಾನಿ ಉಂಟಾದ ಬೆನ್ನಲ್ಲೇ ಮುಖ್ಯಮಂತ್ರಿ ಪುಷ್ಕರ್ ಧಾಮಿ ನೇತೃತ್ವದ ಸರ್ಕಾರ ಈ ನಿರ್ಧಾರ ಕೈಗೊಂಡಿದೆ.ಈ ಸುಗ್ರೀವಾಜ್ಞೆ ಮೂಲಕ ರಾಜ್ಯದಲ್ಲಿ ವಿಶೇಷ ಕ್ಲೇಮು ನ್ಯಾಯಾಧಿಕರಣ ರಚಿಸಲಾಗುವುದು. ಇದು ಸಾರ್ವಜನಿಕ ಆಸ್ತಿಪಾಸ್ತಿಗೆ ಹಾನಿ ಉಂಟಾದ ವೇಳೆ ದಂಗೆಕೋರರಿಂದಲೇ ನಷ್ಟ ವಸೂಲಿ ಮಾಡಲಿದೆ. ಈ ಕುರಿತು ಪ್ರತಿಕ್ರಿಯೆ ನೀಡಿರುವ ಮುಖ್ಯಮಂತ್ರಿ ಧಾಮಿ, ‘ರಾಜ್ಯದಲ್ಲಿ ಶಾಂತಿ ಭಂಗಕ್ಕೆ ಯತ್ನ ಮಾಡುವವರು ಇನ್ನು ಭಾರೀ ಬೆಲೆ ತೆರಬೇಕಾಗಿ ಬರಲಿದೆ. ಈ ಕಾನೂನು ಪವಿತ್ರ ದೇವಭೂಮಿಯ ಹೆಸರಿಗೆ ಕಳಂಕ ತರಲು ಯತ್ನಿಸುವವ ಮುಂದಿನ ಹಲವು ತಲೆಮಾರುಗಳು ಕೂಡಾ ಪರಿಣಾಮಗಳನ್ನು ನೆನಪಿಟ್ಟುಕೊಳ್ಳುವ ಮಾದರಿಯನ್ನು ಸೃಷ್ಟಿಸಲಿದೆ’ ಎಂದು ಹೇಳಿದರು.

PREV
Stay updated with breaking India news (ರಾಷ್ಟ್ರೀಯ ಸುದ್ಧಿ) – national politics, economy, social issues, major events and real‑time headlines from across India only on KannadaPrabha News.

Recommended Stories

ಗದ್ದಲದ ಮಧ್ಯೆಯೇ ‘ಜಿ ರಾಮ್‌ ಜಿ’ ವಿಧೇಯಕ ಲೋಕಸಭೇಲಿ ಮಂಡನೆ
ಆಳಸಮುದ್ರ ಡ್ರೋನ್‌ ಬಳಸಿದ ಉಕ್ರೇನ್‌ : ರಷ್ಯಾ ಸಬ್‌ಮರೀನ್‌ ಧ್ವಂಸ