ಬಂಗಾಳದಲ್ಲಿ ಇ.ಡಿ. ಅಧಿಕಾರಿಗಳಿಗೆ ಥಳಿತ ಪ್ರಕರಣ ಸಿಬಿಐಗೆ ವರ್ಗ

KannadaprabhaNewsNetwork |  
Published : Mar 06, 2024, 02:16 AM ISTUpdated : Mar 06, 2024, 03:06 PM IST
ಸಿಬಿಐ | Kannada Prabha

ಸಾರಾಂಶ

ಹೈಕೋರ್ಟ್‌ ಆದೇಶದ ವಿರುದ್ಧ ಬಂಗಾಳ ಸರ್ಕಾರ ಸುಪ್ರೀಂಗೆ ಮೇಲ್ಮನವಿ ಸಲ್ಲಿಸಿದ್ದು, ಈ ಮೂಲಕ ಹೈಕೋರ್ಟ್‌ಗೆ ಸೆಡ್ಡು ಹೊಡೆದಿದೆ.

ಕೋಲ್ಕತಾ: ಪಡಿತರ ಹಗರಣ ಸಂಬಂಧ ಟಿಎಂಸಿ ನಾಯಕ ಶಜಹಾನ್‌ ತನಿಖೆಗೆ ಹೋಗಿದ್ದ ವೇಳೆ ಸಂದೇಶ್‌ಖಾಲಿಯಲ್ಲಿ ಜಾರಿ ನಿರ್ದೇಶನಾಲಯದ ಅಧಿಕಾರಿಗಳ ಮೇಲೆ ಹಲ್ಲೆ ಮಾಡಿದ ಪ್ರಕರಣವನ್ನು ಸಿಬಿಐಗೆ ವರ್ಗಾಯಿಸಿ ಕಲ್ಕತಾ ಹೈಕೋರ್ಟ್‌ ಮಂಗಳವಾರ ಮಹತ್ವದ ಆದೇಶ ಹೊರಡಿಸಿದೆ.

ಬಂಗಾಳದ ಪೊಲೀಸ್‌ ಅಧಿಕಾರಿಗಳು ಪಕ್ಷಪಾತಿಗಳಾಗಿದ್ದಾರೆ. ತನಿಖಾ ಸಂಸ್ಥೆಗಳ ಮೇಲಿನ ಜನರ ವಿಶ್ವಾಸ ಉಳಿಯಲು ಈ ಪ್ರಕರಣದಲ್ಲಿ ನ್ಯಾಯಸಮ್ಮತ, ಪಾರದರ್ಶಕ ಮತ್ತು ಸಮಗ್ರ ತನಿಖೆಯ ಅವಶ್ಯಕತೆ ಇದೆ. 

ಹೀಗಾಗಿ ಪ್ರಕರಣವನ್ನು ರಾಜ್ಯ ಪೊಲೀಸರ ಬದಲಾಗಿ ಸಿಬಿಐ ಮೂಲಕ ನಡೆಸಲು ಆದೇಶಿಸಲಾಗುತ್ತಿದೆ ಎಂದು ಕೋರ್ಟ್‌ ಹೇಳಿತು.ಮತ್ತೊಂದೆಡೆ ಹೈಕೋರ್ಟ್‌ ಆದೇಶ ಹೊರಬಿದ್ದ ಬೆನ್ನಲ್ಲೇ ಅದನ್ನು ಪ್ರಶ್ನಿಸಿ ಪಶ್ಚಿಮ ಬಂಗಾಳ ಸರ್ಕಾರ ಸುಪ್ರೀಂಕೋರ್ಟ್‌ನಲ್ಲಿ ಮೇಲ್ಮನವಿ ಸಲ್ಲಿಸಿದೆ.

ಕಳೆದ ಜ.5ರಂದು ಶಜಹಾನ್‌ ವಿಚಾರಣೆಗೆ ತೆರಳಿದ್ದ ವೇಳೆ, ಆತನ ಬೆಂಬಲಿಗರು ಅಧಿಕಾರಿಗಳ ಮೇಲೆ ಹಲ್ಲೆ ನಡೆಸಿದ್ದರು. ಈ ಪ್ರಕರಣದ ಬಳಿಕ ತಲೆಮರೆಸಿಕೊಂಡಿದ್ದ ಶಜಹಾನ್‌ನನ್ನು ಹೈಕೋರ್ಟ್‌ ಎಚ್ಚರಿಕೆ ಬಳಿಕ ಪೊಲೀಸರು ಫೆ.29ರಂದು ಬಂಧಿಸಿದ್ದರು.

PREV
Stay updated with breaking India news (ರಾಷ್ಟ್ರೀಯ ಸುದ್ಧಿ) – national politics, economy, social issues, major events and real‑time headlines from across India only on KannadaPrabha News.

Recommended Stories

2025 ಸುಧಾರಣೆಗಳ ಸಾರ್ಥಕ ವರ್ಷ: ಮೋದಿ ಹರ್ಷ
ಪತ್ರಕರ್ತರ ಹಿತರಕ್ಷಣೆಗೆ ಐಎಫ್‌ಡಬ್ಲ್ಯುಜೆ ಆಗ್ರಹ