ವಂದೇ ಮಾತರಂಗೂ ರಾಷ್ಟ್ರಗೀತೆ ರೀತಿ ಸ್ಥಾನಕ್ಕೆ ಚಿಂತನೆ

KannadaprabhaNewsNetwork |  
Published : Jan 27, 2026, 04:15 AM ISTUpdated : Jan 27, 2026, 04:28 AM IST
Bankim chandra

ಸಾರಾಂಶ

ರಾಷ್ಟ್ರಗೀತೆಗೆ ಇರುವ ಶಿಷ್ಟಾಚಾರದ ನಿಯಮವನ್ನೂ ವಂದೇಮಾತರಂಗೂ ವಿಸ್ತರಣೆ ಮಾಡುವ ಬಗ್ಗೆ ಕೇಂದ್ರ ಸರ್ಕಾರ ಗಂಭೀರ ಚಿಂತನೆ ನಡೆಸಿದ್ದು, ಶೀಘ್ರವೇ ಈ ಕುರಿತು ಅದು ತನ್ನ ನಿರ್ಧಾರ ಪ್ರಕಟಿಸಲಿದೆ ಎಂದು ಮೂಲಗಳು ತಿಳಿಸಿವೆ.

 ನವದೆಹಲಿ: ರಾಷ್ಟ್ರಗೀತೆಗೆ ಇರುವ ಶಿಷ್ಟಾಚಾರದ ನಿಯಮವನ್ನೂ ವಂದೇಮಾತರಂಗೂ ವಿಸ್ತರಣೆ ಮಾಡುವ ಬಗ್ಗೆ ಕೇಂದ್ರ ಸರ್ಕಾರ ಗಂಭೀರ ಚಿಂತನೆ ನಡೆಸಿದ್ದು, ಶೀಘ್ರವೇ ಈ ಕುರಿತು ಅದು ತನ್ನ ನಿರ್ಧಾರ ಪ್ರಕಟಿಸಲಿದೆ ಎಂದು ಮೂಲಗಳು ತಿಳಿಸಿವೆ.

ವಂದೇ ಮಾತರಂಗೂ ನಿಯಮ ಅನ್ವಯ

ಒಂದು ವೇಳೆ ಈ ಚಿಂತನೆ ಕಾರ್ಯರೂಪಕ್ಕೆ ಬಂದರೆ ‘ರಾಷ್ಟ್ರಗೀತೆ ಜನಗಣಮನ ಗಾಯನದ ವೇಳೆ ಜನತೆ ಎದ್ದು ನಿಂತು ಗೌರವಿಸಬೇಕು’ ಎಂಬ ನಿಯಮ 150ನೇ ವರ್ಷಾಚರಣೆಯಲ್ಲಿರುವ ವಂದೇ ಮಾತರಂಗೂ ಅನ್ವಯವಾಗಲಿದೆ.

ಪ್ರಸ್ತುತ ಜನಗಣಮನ ಗಾಯನದ ವೇಳೆ ಜನರು ಎದ್ದು ನಿಂತು ಗೌರವ ಸಲ್ಲಿಸುವುದು ಕಡ್ಡಾಯ. ಇದನ್ನು ಉಲ್ಲಂಘಿಸಿದವರಿಗೆ ರಾಷ್ಟ್ರ ಗೌರವ 1971 ಹಾಗೂ ವಿಧಿ 51(ಎ) ಅಡಿಯಲ್ಲಿ 3 ವರ್ಷಗಳವರೆಗೆ ಶಿಕ್ಷೆ ವಿಧಿಸಲಾಗುತ್ತದೆ. ಇದೇ ನಿಯಮವನ್ನು ವಂದೇ ಮಾತರಂ ಗೀತೆಗೂ ಜಾರಿ ತರುವ ಸಾಧ್ಯತೆಗಳ ಕುರಿತು ಕೇಂದ್ರ ಗೃಹ ಸಚಿವಾಲಯವು ಚರ್ಚೆ ನಡೆಸುತ್ತಿದೆ ಎಂದು ಮೂಲಗಳು ತಿಳಿಸಿವೆ. ಒಂದು ವೇಳೆ ಜಾರಿಯಾದರೆ, ವಂದೇ ಮಾತರಂಗೂ ಎದ್ದು ನಿಂತು ಗೌರವ ಸಲ್ಲಿಕೆ ಕಡ್ಡಾಯವಾಗಲಿದೆ.

ಧರ್ಮದ ಗುಣಗಾನ ಮಾಡಲಾಗಿದೆ ಎಂದು ಆರೋಪ

ಆದರೆ, ವಂದೇಮಾತರಂನಲ್ಲಿ ಒಂದು ಧರ್ಮದ ಗುಣಗಾನ ಮಾಡಲಾಗಿದೆ ಎಂದು ಆರೋಪಿಸಿ ಕೆಲವು ಪಕ್ಷಗಳು ಹಾಗೂ ಕೆಲವು ಧಾರ್ಮಿಕ ಸಂಘಟನೆಗಳು ಅದರ ಗೀತ ಗಾಯನವನ್ನು ವಿರೋಧಿಸುತ್ತಿವೆ. ಇದರ ನಡುವೆಯೇ ಈ ವಿದ್ಯಾಮನ ನಡೆದಿದೆ.

ವಂದೇಮಾತರಂಗೆ 150 ವರ್ಷ ಹಿನ್ನೆಲೆಯಲ್ಲಿ ಇತ್ತೀಚೆಗೆ ಸಂಸತ್ತಿನಲ್ಲಿ ವಿಶೇಷ ಚರ್ಚೆ

ಈ ವೇಳೆಗೆ ಕಾಂಗ್ರೆಸ್‌ ಅವಧಿಯಲ್ಲಿ ಗೀತೆಗೆ ಅವಮಾನ ಎಂದು ಪ್ರಧಾನಿ ವಾಗ್ದಾಳಿ

ಈಗ ಸ್ವಾತಂತ್ರ್ಯ ಚಳವಳಿಗೆ ಸ್ಪೂರ್ತಿ ತುಂಬಿದ ಗೀತೆ ಸ್ಥಾನಮಾನ ಹೆಚ್ಚಳಕ್ಕೆ ಚಿಂತನೆ

ಈ ಕುರಿತು ಉನ್ನತ ಮಟ್ಟದ ಸಭೆ. ವಿವಿಧ ವಿಷಯ ಚರ್ಚೆ. ಶೀಘ್ರ ಹೊಸ ಸ್ಥಾನಮಾನ?

PREV
Stay updated with breaking India news (ರಾಷ್ಟ್ರೀಯ ಸುದ್ಧಿ) – national politics, economy, social issues, major events and real‑time headlines from across India only on KannadaPrabha News.
Read more Articles on

Recommended Stories

ಕಾಂಬೋ, ಥಾಯ್‌ ಯುದ್ಧ ವೇಳೆ ಕೆಡವಲಾಗಿದ್ದ ವಿಷ್ಣು ಪ್ರತಿಮೆ ಸ್ಥಳಕ್ಕೆ ಬುದ್ಧ ಪ್ರತಿಮೆ
ಇಂಡೋ-ಯುಎಸ್‌ ಟ್ರೇಡ್‌ ಡೀಲ್‌ಗೆ ಭಾರತದ ಅಳಿಯನೇ ಅಡ್ಡಿ : ಆರೋಪ