ಹರಿದ್ವಾರ: ಗುರುವಾರ ಇಲ್ಲಿಆತ್ಮ*ತ್ಯೆಗೆ ಶರಣಾದ ನಿಠಾರಿ ಹತ್ಯಾಕಾಂಡ ಪ್ರಕರಣದ ಆರೋಪಿ ಸುರಿಂದರ್ ಕೋಲಿ, ಕೇಸಿಂದ ಖುಲಾಸೆ ಬಳಿ ಹರಿದ್ವಾರದಲ್ಲಿ ತನ್ನ ಹೆಸರನ್ನು ಸದಾರಾಮ್ ಎಂದು ಬದಲಿಸಿಕೊಂಡು ವಾಸವಿದ್ದ ಎಂದು ತಿಳಿದುಬಂದಿದೆ.
2025ರಲ್ಲಿ ನಿಠಾರಿ ಕೇಸಿಂದ ದೋಷಮುಕ್ತ ಬಳಿಕ ಹರಿದ್ವಾರದಲ್ಲಿ ಉಳಿದುಕೊಳ್ಳಲು ಸ್ಥಳದ ಹುಡುಕಾಟದಲ್ಲಿದ್ದ. ತಿಂಗಳ ಹಿಂದೆ ಹರಿದ್ವಾರದಲ್ಲಿ ಜೈ ಕಶ್ಯಪ್ ಎನ್ನುವವರಿಗೆ ತಾನು ಸದಾ ರಾಮ್, ಅಲ್ಮೋರಾ ನಿವಾಸಿ, ತನಗೆ ಮನೆಯ ಅವಶ್ಯಕತೆಯಿದೆ ಎಂದು ಪರಿಚಯಿಸಿಕೊಂಡಿದ್ದ.
ಅವರು ಆತನಿಗೆ ಹರಿದ್ವಾರದಿಂದ 15 ಕಿ.ಮೀ ದೂರದ ರೋಶನಾಬಾದ್ನಲ್ಲಿ ಎಂಬ ಮನೆ ಕೊಡಿಸಿದ್ದರು. ಅಲ್ಲಿ ಕೆಲ ದಿನ ಆತ ವಾಸವಿದ್ದ. ಆದರೆ ಮನೆ ಮಾಲೀಕರು ಗುರುತಿನ ಪುರಾವೆ ಕೇಳಿದ ಬಳಿಕ ಆತ ಮನೆ ಖಾಲಿ ಮಾಡಿದ್ದ. ಬಳಿಕ ಕೋಲಿ ಹರಿದ್ವಾರಕ್ಕೆ ಸ್ಥಳಾಂತರಗೊಂಡು 2 ಕಡೆ ಸೆಕ್ಯೂರಿಟಿ ಗಾರ್ಡ್ ಕೆಲಸಕ್ಕೆ ಸೇರಿ, ಅದನ್ನೂ ಬಿಟ್ಟಿದ್ದ. ಸಾಯುವುದಕ್ಕೆ ಮೂರು ದಿನಗಳ ಹಿಂದಷ್ಟೇ ಭೂಪತ್ವಾಲಾದಲ್ಲಿ ಚಹಾ ಅಂಗಡಿ ತೆರೆದಿದ್ದ ಎಂಬುದು ತನಿಖೆ ವೇಳೆ ತಿಳಿದುಬಂದಿದೆ.