ಏಕೈಕ ರಾಜ್ಯಸಭಾ ಸ್ಥಾನ ಕಾಂಗ್ರೆಸ್‌ಗೆ ಬಿಟ್ಟುಕೊಟ್ಟ ಮುಖ್ಯಮಂತ್ರಿ ವಿಜಯ್‌

KannadaprabhaNewsNetwork |  
Published : Jun 05, 2026, 01:15 AM ISTUpdated : Jun 05, 2026, 04:41 AM IST
vijay congress

ಸಾರಾಂಶ

ಅಚ್ಚರಿಯ ಬೆಳವಣಿಗೆಯೊಂದರಲ್ಲಿ ತನ್ನ ಪಾಲಿಗೆ ಒದಗಿಬಂದಿದ್ದ ಏಕೈಕ ರಾಜ್ಯಸಭಾ ಸ್ಥಾನವನ್ನು ತಮಿಳುನಾಡಿನಲ್ಲಿ ಅಧಿಕಾರದಲ್ಲಿರುವ ಟಿವಿಕೆ ಪಕ್ಷವು ಮಿತ್ರಪಕ್ಷ ಕಾಂಗ್ರೆಸ್‌ಗೆ ನೀಡಿದೆ. ಈ ಸೀಟನ್ನು ಕಾಂಗ್ರೆಸ್‌, ಚುನಾವಣಾ ತಂತ್ರಗಾರ ಪ್ರವೀಣ್ ಚಕ್ರವರ್ತಿಗೆ ನೀಡುವ ಸಾಧ್ಯತೆ ಇದೆ.

ಚೆನ್ನೈ: ಅಚ್ಚರಿಯ ಬೆಳವಣಿಗೆಯೊಂದರಲ್ಲಿ ತನ್ನ ಪಾಲಿಗೆ ಒದಗಿಬಂದಿದ್ದ ಏಕೈಕ ರಾಜ್ಯಸಭಾ ಸ್ಥಾನವನ್ನು ತಮಿಳುನಾಡಿನಲ್ಲಿ ಅಧಿಕಾರದಲ್ಲಿರುವ ಟಿವಿಕೆ ಪಕ್ಷವು ಮಿತ್ರಪಕ್ಷ ಕಾಂಗ್ರೆಸ್‌ಗೆ ನೀಡಿದೆ.

ಪ್ರವೀಣ್ ಚಕ್ರವರ್ತಿಗೆ ನೀಡುವ ಸಾಧ್ಯತೆ

 ಈ ಸೀಟನ್ನು ಕಾಂಗ್ರೆಸ್‌, ಚುನಾವಣಾ ತಂತ್ರಗಾರ ಪ್ರವೀಣ್ ಚಕ್ರವರ್ತಿಗೆ ನೀಡುವ ಸಾಧ್ಯತೆ ಇದೆ. ತಮಿಳ್ನಾಡಲ್ಲಿ ವಿಜಯ್‌ ಸರ್ಕಾರ ರಚನೆಗೆ ಕಾಂಗ್ರೆಸ್‌ ಬೆಂಬಲ ನೀಡಿತ್ತು, ಜೊತೆಗೆ ಟಿವಿಕೆ-ಕಾಂಗ್ರೆಸ್‌ ಮೈತ್ರಿಕೂಟ ರಚನೆಯಲ್ಲಿ ಪ್ರವೀಣ್‌ ಚಕ್ರವರ್ತಿ ಮಹತ್ವದ ಪಾತ್ರವಹಿಸಿದ್ದರು. ಇದನ್ನು ಗಮನದಲ್ಲಿಟ್ಟುಕೊಂಡು ವಿಜಯ್‌ ಈ ನಿರ್ಧಾರ ತೆಗೆದುಕೊಂಡಿದ್ದಾರೆ ಎನ್ನಲಾಗಿದೆ. 

ಷಣ್ಮುಗಂರಿಂದ ತೆರವಾಗಿದ್ದ 1ರಾಜ್ಯಸಭಾ ಸ್ಥಾನ

ಇತ್ತೀಚೆಗೆ ನಡೆದಿದ್ದ ಅಸೆಂಬ್ಲಿ ಚುನಾವಣೆಯಲ್ಲಿ ಸ್ಪರ್ಧಿಸಿ ಗೆದ್ದಿರುವ ಎಐಎಡಿಎಂಕೆಯ ಷಣ್ಮುಗಂರಿಂದ ತೆರವಾಗಿದ್ದ 1ರಾಜ್ಯಸಭಾ ಸ್ಥಾನಕ್ಕೆ ಜೂ.18ರಂದು ಚುನಾವಣೆ ನಡೆಯಲಿದೆ.

PREV
Stay updated with breaking India news (ರಾಷ್ಟ್ರೀಯ ಸುದ್ಧಿ) – national politics, economy, social issues, major events and real‑time headlines from across India only on KannadaPrabha News.
Read more Articles on

Recommended Stories

ಆರ್‌ಎಸ್‌ಎಸ್‌ ಮುಖ್ಯಸ್ಥ ಭಾಗ್ವತ್‌ ಸಂಚರಿಸುತ್ತಿದ್ದ ರೈಲಿನ ಮೇಲೆ ಕಲ್ಲೆಸೆತ
ಟಿಎಂಸಿಯಿಂದ ಮಮತಾ ಔಟ್‌?