ತೆಲುಗು ಬಿಗ್‌ಬಾಸ್‌ ವಿಜೇತ ಪ್ರಶಾಂತ್‌ ಬಂಧನ

KannadaprabhaNewsNetwork |  
Published : Dec 21, 2023, 01:15 AM IST
ಪಲ್ಲವಿ ಪ್ರಶಾಂತ್‌  | Kannada Prabha

ಸಾರಾಂಶ

ಬಿಗ್ ಬಾಸ್ ತೆಲುಗು ಸೀಸನ್-7 ವಿಜೇತ ಪಲ್ಲವಿ ಪ್ರಶಾಂತ್ ಅವರನ್ನು ಪೊಲೀಸರು ಬಂಧಿಸಿದ್ದಾರೆ. ರನ್ನರ್‌ ಅಪ್‌ ಕಾರನ್ನು ಪ್ರಶಾಂತ್‌ ಅಭಿಮಾನಿಗಳು ಧ್ವಂಸಗೊಳಿಸಿದ್ದಕ್ಕೆ ಪ್ರಕರಣ ದಾಖಲಿಸಿ, ಬಂಧಿಸಲಾಗಿದೆ.

ಹೈದರಾಬಾದ್‌: ಬಿಗ್ ಬಾಸ್ ತೆಲುಗು ಸೀಸನ್-7 ವಿಜೇತ ಪಲ್ಲವಿ ಪ್ರಶಾಂತ್ ಅವರ ಅಭಿಮಾನಿಗಳು ಕಾರ್ಯಕ್ರಮದ ರನ್ನರ್‌ ಅಪ್‌ ಆಗಿರುವ ಅಮರ್‌ದೀಪ್ ಚೌಧರಿ ಅವರನ್ನು ಕಾರನ್ನು ಧ್ವಂಸಗೊಳಿಸಿದ್ದಾರೆ. ಈ ಕಾರಣಕ್ಕೆ ಪ್ರಶಾಂತ್‌ರನ್ನು ಪೊಲೀಸರು ಬಂಧಿಸಿದ್ದಾರೆ. ಪ್ರಶಾಂತ್‌ ವಿಜೇತ ಎಂದು ಘೋಷಿಸಿದ ಬಳಿಕ ಅವರ ಅಭಿಮಾನಿಗಳು ಕಾರ್ಯಕ್ರಮದ ಸ್ಟುಡಿಯೋ ಬಳಿ ಜಮಾಯಿಸಿ ಅಲ್ಲೇ ಇದ್ದ ಚೌಧರಿ ಕಾರಿಗೆ ಹಾನಿ ಮಾಡಿದ್ದಾರೆ. ಪ್ರಶಾಂತ್ ಮತ್ತು ಆತನ ಫ್ಯಾನ್ಸ್ ವಿರುದ್ಧ ಕಾನೂನುಬಾಹಿರ ಗುಂಪುಗೂಡುವಿಕೆ ಮತ್ತು ವಿಧ್ವಂಸಕ ಕೃತ್ಯ ಪ್ರಕರಣ ದಾಖಲಿಸಲಾಗಿದೆ.

PREV
Stay updated with breaking India news (ರಾಷ್ಟ್ರೀಯ ಸುದ್ಧಿ) – national politics, economy, social issues, major events and real‑time headlines from across India only on KannadaPrabha News.

Recommended Stories

ಸಿದ್ದು ಆಪ್ತ 20 ಶಾಸಕರಿಗೆಜಾರಕಿಹೊಳಿ ಔತಣಕೂಟ- ಬೆಳಗಾವೀಲೂ ಗರಿಗೆದರಿದ ಬಣ ರಾಜಕೀಯ
ದಿಲ್ಲಿಯಲ್ಲಿ ಜ.1ರಿಂದ ಕೇಂದ್ರದ ಭಾರತ್‌ ಟ್ಯಾಕ್ಸಿ ಸಂಚಾರ