ದಶಕದ ಬಳಿಕ ಮತ್ತೆ ಕಾಂಗ್ರೆಸ್ ರಾಜ್ಯಭಾರ
ರಾಗಾ, ಖರ್ಗೆ, ಸಿದ್ದರಾಮಯ್ಯ ಸೇರಿ ಹಲವರು ಭಾಗಿ: ಪ್ರಮಾಣ ವಚನ ಕಾರ್ಯಕ್ರಮಕ್ಕೆ ಲೋಕಸಭಾ ವಿಪಕ್ಷ ನಾಯಕ ರಾಹುಲ್ ಗಾಂಧಿ, ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ, ವಯನಾಡು ಸಂಸದೆ ಪ್ರಿಯಾಂಕಾ ಗಾಂಧಿ ಸೇರಿದಂತೆ ಹೈಕಮಾಂಡ್ನ ಹಲವು ನಾಯಕರು ಭಾಗಿಯಾಗಲಿದ್ದಾರೆ. ಜತೆಗೆ ಕರ್ನಾಟಕ ಸಿಎಂ ಸಿದ್ದರಾಮಯ್ಯ, ತೆಲಂಗಾಣ ಮುಖ್ಯಮಂತ್ರಿ ರೇವಂತ್ ರೆಡ್ಡಿ ಸೇರಿದಂತೆ ಕಾಂಗ್ರೆಸ್ ಆಡಳಿತದಲ್ಲಿರುವ ಎಲ್ಲಾ ರಾಜ್ಯಗಳ ಮುಖ್ಯಮಂತ್ರಿಗಳಿಗೆ ಹಾಗೂ ತಮಿಳುನಾಡು ಸಿಎಂ ವಿಜಯ್ಗೂ ಆಹ್ವಾನ ಹೋಗಿದೆ.
==ಹಸುಗಳ ಬರ್ತ್ ಸರ್ಟಿಫಿಕೇಟ್ ಕೇಳಿದ ಬಂಗಾಳ ಬಿಜೆಪಿ ಶಾಸಕಿ!
ಇದು ಈಗ ತೃಣಮೂಲ ಕಾಂಗ್ರೆಸ್ ಟೀಕೆಗೆ ಕಾರಣವಾಗಿದೆ. ‘ಬಿಜೆಪಿ ಆಡಳಿತದ ಯಾವ ರಾಜ್ಯಗಳಲ್ಲಿ ಹಸುಗಳಿಗೆ ಜಜನ ಪ್ರಮಾಣ ಪತ್ರ ನೀಡಲಾಗುತ್ತಿದೆ?’ ಎಂದು ಪ್ರಶ್ನಿಸಿದೆ.
ನೀಟ್ ಸೋರಿಕೆ ವಿಚಾರದಲ್ಲಿ ಮೋದಿ ಕ್ಷಮೆ ಕೇಳಲಿ: ರಾಹುಲ್
==
ಎಲೆಕ್ಟ್ರಿಕ್ ವಾಹನ ಬಳಕೆ ಉತ್ತೇಜನಕ್ಕೆ ಈ ಕ್ರಮ
ತಿರುಮಲ: ಪರಿಸರ ಸಂರಕ್ಷಣೆ ಮತ್ತು ವಿದ್ಯುತ್ ವಾಹನಗಳನ್ನು ಉತ್ತೇಜಿಸುವ ಉದ್ದೇಶದಿಂದ ತಿರುಮಲ ಬೆಟ್ಟವನ್ನು ಪ್ರವೇಶಿಸುವ ಪೆಟ್ರೋಲ್ ಮತ್ತು ಡೀಸೆಲ್ ವಾಹನಗಳ ಮೇಲೆ ಭಾರಿ ಟೋಲ್ ವಿಧಿಸಲು ತಿರುಪತಿ ತಿಮ್ಮಪ್ಪನ ದೇವಸ್ಥಾನದ ನಿರ್ವಹಣೆ ಜವಾಬ್ದಾರಿಯನ್ನು ಹೊತ್ತಿರುವ ಟಿಟಿಡಿ ಚಿಂತನೆ ನಡೆಸಿದೆ.
ಈ ಬಗ್ಗೆ ಟಿಟಿಡಿಯ ಕಾರ್ಯನಿರ್ವಾಹಕ ಅಧಿಕಾರಿ ಎಂ. ರವಿಚಂದ್ರ ಅವರು ಮಾತನಾಡಿ, ‘ಇಲ್ಲಿಗೆ ಪ್ರತಿದಿನ ಸುಮಾರು 8000 ವಾಹನಗಳು ಬರುತ್ತವೆ. ಆದ್ದರಿಂದ ವಿದ್ಯುತ್ ಚಾಲಿತ ವಾಹನಗಳನ್ನು ಹೊರತುಪಡಿಸಿ ಬೇರೆಲ್ಲವುಗಳಿಂದ ಭಾರಿ ಟೋಲ್ ವಸೂಲಿ ಮಾಡುವ ಯೋಜನೆಯಿದೆ. ಆದರೆ ಇದು ಸದ್ಯಕ್ಕೆ ಜಾರಿಗೆ ಬರುವುದಿಲ್ಲ. ಮುಂದಿನ ದಿನಗಳಲ್ಲಿ ಜಾರಿಯಾಗಲಿದೆ’ ಎಂದರು.ಇವಿಗೆ ಉತ್ತೇಜನ:ಇವಿಗಳ ಬಳಕೆಯನ್ನು ಪ್ರೋತ್ಸಾಹಿಸುವ ಉದ್ದೇಶದಿಂದ ಅವುಗಳನ್ನು ಶುಲ್ಕದಿಂದ ಹೊರಗಿಡಲಾಗಿದೆ. ಜತೆಗೆ, ಅವುಗಳಿಗೆ ಅನುಕೂಲವಾಗುವಂತೆ ಆದಷ್ಟು ಬೇಗ ತಿರುಮಲದಲ್ಲಿ ಚಾರ್ಜಿಂಗ್ ಕೇಂದ್ರಗಳನ್ನು ಸ್ಥಾಪಿಸಲಾಗುವುದು ಎಂದ ರವಿಚಂದ್ರ, ‘ಈ ಕ್ರಮಗಳ ಮೂಲಕ ಬೆಟ್ಟದ ಪರಿಸರ ಸಂರಕ್ಷಣೆಯ ಜತೆಗೆ ಜಾಗತಿಕ ಅನಿಶ್ಚಿತತೆಯ ಸಮಯದಲ್ಲಿ ರಾಜ್ಯದ ಇಂಧನ ಭದ್ರತೆ ಕಾಪಾಡುವ ಉದ್ದೇಶವಿದೆ. ಜತೆಗೆ ಗಲಾಟೆ, ಮಾಲಿನ್ಯ ಮತ್ತು ದಟ್ಟಣೆಯನ್ನು ತಗ್ಗಿಸುವ ಗುರಿಯಿದೆ’ ಎಂದರು
ಟೌನ್ಶಿಪ್ ನಿರ್ಮಾಣ:ಜತೆಗೆ, ‘ಅಲಿಪಿರಿಯಲ್ಲಿ 500 ಎಕರೆ ವ್ಯಾಪ್ತಿಯಲ್ಲಿ ಹೊಸ ಟೌನ್ಶಿಪ್ ನಿರ್ಮಿಸಿ ಅದನ್ನು ನಿಶ್ಶಬ್ದ ಪ್ರದೇಶವೆಂದು ಘೋಷಿಸಲಾಗುವುದು’ ಎಂದೂ ಅವರು ತಿಳಿಸಿದರು.ಈಗಾಗಲೇ ತಿರುಪತಿ ಬೆಟ್ಟದ ಸುತ್ತ 150 ಎಕರೆ ಪ್ರದೇಶವನ್ನು ಗುರುತಿಸಲಾಗಿದ್ದು, ಅಲ್ಲಿ ಸಮೀಕ್ಷೆ ನಡೆಸಲಾಗಿದೆ. ಅಲ್ಲಿ ವಸತಿ, ಪಾರ್ಕಿಂಗ್, ಆಹಾರ ಕೇಂದ್ರ, ಪೂಜಾ ಸೌಲಭ್ಯಗಳನ್ನು ಒದಗಿಸಲಾಗುತ್ತದೆ. ತಿರುಮಲದಲ್ಲಿ ಲಭ್ಯವಿರುವ ಸೌಲಭ್ಯಗಳು ಅಲಿಪಿರಿಯಲ್ಲಿಯೂ ಲಭ್ಯವಿರುತ್ತವೆ ಎಂದು ರವಿಚಂದ್ರ ತಿಳಿಸಿದ್ದಾರೆ.
==ಹೋರ್ಮುಜ್ ದಾಟಿ ಗುಜರಾತ್ ತಲುಪಿದ 20,000 ಟನ್ ಎಲ್ಪಿಜಿ ಹಡಗು
ಕಾಂಡ್ಲಾ (ಗುಜರಾತ್): ಮಧ್ಯಪ್ರಾಚ್ಯದಿಂದ ಸೃಷ್ಟಿಯಾಗಿರುವ ಹೋರ್ಮುಜ್ ಬಿಕ್ಕಟ್ಟಿನ ನಡುವೆಯೇ 20,000 ಟನ್ ಎಲ್ಪಿಜಿ ಹೊತ್ತಿದ್ದ ಹಡಗು ಹೋರ್ಮುಜ್ ದಾಟಿ ಯಶಸ್ವಿಯಾಗಿ ಗುಜರಾತಿನ ಕಾಂಡ್ಲಾ ದೀನ್ದಯಾಳ್ ಬಂದರನ್ನು ಭಾನುವಾರ ತಲುಪಿದೆ.ಕತಾರ್ನಿಂದ ಹೊರಟಿದ್ದ ಮಾರ್ಷಲ್ ದ್ವೀಪದ ಧ್ವಜವಿದ್ದ ಎಂವಿ ಎಸ್ವೈಎಂಐ ನೌಕೆಯು ಮೇ 13ರಂದು ಹೋರ್ಮುಜ್ ದಾತ್ತ್ತು. ಯುದ್ಧ ಆರಂಭವಾದ ಬಳಿಕ ಹೋರ್ಮುಜ್ ದಾಟಿ ಇದುವರೆಗೆ ಭಾರತಕ್ಕೆ 12 ಎಲ್ಪಿಜಿ ಟ್ಯಾಂಕರ್ಗಳು ಮತ್ತು 1 ಕಚ್ಚಾ ತೈಲ ಟ್ಯಾಂಕರ್ ಸೇರಿ ಭಾರತದ ಧ್ವಜ ಹೊತ್ತ 13 ಹಡಗುಗಳು ಬಂದಿವೆ.