ಮದುವೆಗೆ ಮುನ್ನವೇ ವರ ಓಡಿಹೋದ್ರೆ ನಾವೇನು ಮಾಡಲಾಗುತ್ತೆ: ಯಾದವ್‌

KannadaprabhaNewsNetwork |  
Published : May 13, 2024, 12:01 AM ISTUpdated : May 13, 2024, 04:53 AM IST
ಮೋಹನ್ ಯಾದವ್‌ | Kannada Prabha

ಸಾರಾಂಶ

ಮದುವೆಗೆ ಮುನ್ನವೇ ವರ ಓಡಿಹೋದರೆ ನಾವೇನು ಮಾಡಲಾಗುತ್ತದೆ ಎಂದು ಇಂದೋರ್‌ ಲೋಕಸಭಾ ಕ್ಷೇತ್ರದ ಕಾಂಗ್ರೆಸ್‌ ಅಭ್ಯರ್ಥಿ ತನ್ನ ನಾಮಪತ್ರ ಹಿಂಪಡೆದಿರುವ ಬಗ್ಗೆ ಮಧ್ಯ ಪ್ರದೇಶದ ಮುಖ್ಯಮಂತ್ರಿ ಮೋಹನ್‌ ಯಾದವ್‌ ವ್ಯಂಗ್ಯವಾಡಿದ್ದಾರೆ.

ಇಂದೋರ್‌: ಮದುವೆಗೆ ಮುನ್ನವೇ ವರ ಓಡಿಹೋದರೆ ನಾವೇನು ಮಾಡಲಾಗುತ್ತದೆ ಎಂದು ಇಂದೋರ್‌ ಲೋಕಸಭಾ ಕ್ಷೇತ್ರದ ಕಾಂಗ್ರೆಸ್‌ ಅಭ್ಯರ್ಥಿ ತನ್ನ ನಾಮಪತ್ರ ಹಿಂಪಡೆದಿರುವ ಬಗ್ಗೆ ಮಧ್ಯ ಪ್ರದೇಶದ ಮುಖ್ಯಮಂತ್ರಿ ಮೋಹನ್‌ ಯಾದವ್‌ ವ್ಯಂಗ್ಯವಾಡಿದ್ದಾರೆ.

 ಮದುವೆಗೆಂದು ಇಡೀ ಗ್ರಾಮವನ್ನ ಕರೆದು ಎಲ್ಲಾ ಸಿದ್ಧತೆ ಮಾಡಿಕೊಂಡಾಗ, ಮದುವೆಗೆ ಮುನ್ನವೇ ವರ ಓಡಿ ಹೋದರೆ ನಾವೇನು ಮಾಡಬೇಕು ಎಂದು ಹೇಳಿದ್ದಾರೆ. ಏ.29ರಂದು ಇಂದೋರ್‌ ಕ್ಷೇತ್ರದ ಕಾಂಗ್ರೆಸ್‌ ಅಭ್ಯರ್ಥಿ ಅಕ್ಷಯ್ ಕಾಂತಿ ಬಾಮ್‌ ಸಲ್ಲಿಸಿದ್ದ ನಾಮಪತ್ರವನ್ನು ಹಿಂಪಡೆದಿದ್ದು, ಬಿಜೆಪಿಗರ ಜೊತೆ ಕಾಣಿಸಿಕೊಂಡಿದ್ದಾರೆ. 

ಇದಕ್ಕೆ ಹತಾಶರಾದ ಕಾಂಗ್ರೆಸಿಗರು ಇಂದೋರ್‌ ಕ್ಷೇತ್ರದಲ್ಲಿ ಬಿಜೆಪಿಗೆ ಮತ ಹಾಕುವದಕ್ಕಿಂತ ನೋಟಾಗೆ ಮತಹಾಕಲು ಕರೆ ನೀಡಿದ್ದರು. ಮೇ 13ರಂದು ಇಲ್ಲಿ ಚುನಾವಣೆ ನಡೆಯಲಿದೆ.

PREV
Stay updated with breaking India news (ರಾಷ್ಟ್ರೀಯ ಸುದ್ಧಿ) – national politics, economy, social issues, major events and real‑time headlines from across India only on KannadaPrabha News.

Recommended Stories

ಇಸ್ರೋ ಹೊಸ ಮೈಲುಗಲ್ಲು-6100 ಕೆಜಿ ತೂಕದ ಉಪಗ್ರಹ 15 ನಿಮಿಷದಲ್ಲಿ ಕಕ್ಷೆಗೆ
ಶತ್ರು- ಮಿತ್ರರಿಗೆ ಮಹಾ ಸಹೋದರರ ಸವಾಲ್‌!