ಕನ್ನಡಪ್ರಭ ವಾರ್ತೆ ಕೋಲಾರಶಿಕ್ಷಣ ಕ್ಷೇತ್ರಕ್ಕೆ ದೇಶದ ಜಿಡಿಪಿಯ ಶೇ.೬ರಷ್ಟು ಅನುದಾನ ಮೀಸಲಿರಿಸಬೇಕಿತ್ತು. ದುರದೃಷ್ಟಕರವೆಂದರೆ ಶೇ.೩ರಷ್ಟನ್ನೂ ಕೊಡುತ್ತಿಲ್ಲ. ಶಿಕ್ಷಣ ಕ್ಷೇತ್ರಕ್ಕೆ ಸರ್ಕಾರ ವಿನಿಯೋಗಿಸುತ್ತಿರುವ ಅನುದಾನವನ್ನು ಖರ್ಚು ಎಂದು ಭಾವಿಸಬಾರದು. ಅದನ್ನು ದೇಶದ ಭವಿಷ್ಯ ದೃಷ್ಟಿಯಿಂದ ಹೂಡಿಕೆ ಎಂಬುದಾಗಿ ಪರಿಗಣಿಸಬೇಕು ಎಂದು ಬೆಂಗಳೂರು ವಿಶ್ವವಿದ್ಯಾಲಯ ವಾಣಿಜ್ಯಶಾಸ್ತ್ರ ವಿಭಾಗದ ನಿವೃತ್ತ ಪ್ರಾಧ್ಯಾಪಕ ಪ್ರೊ.ಈರೇಶಿ.ಕೆ ಸಲಹೆ ನೀಡಿದರು.ನಗರ ಹೊರವಲಯದ ನಂದಿನಿ ಪ್ಯಾಲೇಸ್ನಲ್ಲಿ ಸೋಮವಾರ ನಡೆದ ಬೆಂಗಳೂರು ಉತ್ತರ ವಿಶ್ವವಿದ್ಯಾಲಯದ ೪ನೇ ವಾರ್ಷಿಕ ಘಟಿಕೋತ್ಸವದಲ್ಲಿ ಅವರು ಘಟಿಕೋತ್ಸವ ಭಾಷಣ ಮಾತನಾಡಿದರು. ಆರ್ತಿಕತೆಯಲ್ಲಿ 5ನೇ ಸ್ಥಾನ
ಇಂದಿನ ಅಧುನಿಕ ತಂತ್ರಜ್ಞಾನದ ಯುಗದಲ್ಲಿ ಪೋಷಕರು ತಮ್ಮ ಹೆಣ್ಣು ಮಕ್ಕಳನ್ನು ಹೊರಗೆ ಕಳುಹಿಸಬಾರದು ಎಂಬ ಕಟ್ಟುಪಾಡು ಭಾವನೆಗಳನ್ನು ಕಿತ್ತೊಗೆದು ಅವರಲ್ಲಿನ ಪ್ರತಿಭೆಗಳನ್ನು ಹೊರಹೊಮ್ಮಲು ಮುಕ್ತವಾದ ಅವಕಾಶ ಕಲ್ಪಿಸುವ ಮೂಲಕ ಸಮಸಮಾಜ ನಿರ್ಮಾಣಕ್ಕೆ ಒತ್ತು ನೀಡಬೇಕು ಎಂದು ಕಿವಿಮಾತು ತಿಳಿಸಿದರು.ಇಂದು ನರಸಾಪುರ ಬಳಿಯ ವಿಸ್ಟ್ರಾನ್ ಕಂಪನಿಯನ್ನು ಟಾಟಾ ಕಂಪನಿಯು ಪಡೆದಿದ್ದು ೧೫ ಸಾವಿರ ಹೆಣ್ಣು ಮಕ್ಕಳಿಗೆ ಉದ್ಯೋಗದ ಅವಕಾಶ ಕಲ್ಪಿಸಲಿದೆ ಹೆಣ್ಣು ಮಕ್ಕಳಿಗೆ ಉದ್ಯೋಗ ಅವಕಾಶ ಕಲ್ಪಿಸುವ ಮೂಲಕ ಸ್ವಾವಲಂಭಿಗಳಾಗಿ ಮಾಡಬೇಕು ಎಂದರು. ವಿವಿ ವ್ಯಾಪ್ತಿಯಲ್ಲಿ 280 ಕಾಲೇಜು
ಬೆಂಗಳೂರು ಉತ್ತರ ವಿಶ್ವವಿದ್ಯಾಲಯವು ಬಹುದಿನದ ಬೇಡಿಕೆಯ ಕನಸಾಗಿದ್ದು ಇಂದು ಬೃಹಧಾಕಾರವಾಗಿ ಬೆಳೆದಿದ್ದು ೨೮೦ ಕಾಲೇಜುಗಳನ್ನು ಒಳಗೊಂಡಿದೆ, ಬೆಂಗಳೂರು ವಿಶ್ವವಿದ್ಯಾಲಯವು ೮೦೦ ಕಾಲೇಜುಗಳನ್ನು ಒಳಗೊಂಡಿತ್ತು. ಇದನ್ನು ವಿಭಜಿಸಿ ಎರಡು ವಿಶ್ವವಿದ್ಯಾಲಯ ಮಾಡಲು ಚಿಂತನೇ ಇತ್ತು, ಆದರೆ ತುಮಕೊರು ಜಿಲ್ಲೆಯು ಪ್ರತ್ಯೇಕವಾಗ ಬೇಕೆಂಬ ಒತ್ತಡ ಬಂದಾಗ ಮೂರು ಭಾಗವಾಗಿದೆ ಎಂದು ತಿಳಿಸಿದರು.ನಮ್ಮ ವಿಶ್ವವಿದ್ಯಾಲಯದಲ್ಲಿ ೧.೩೦ ಲಕ್ಷಕ್ಕೂ ಹೆಚ್ಚು ವಿದ್ಯಾರ್ಥಿಗಳು ವ್ಯಾಸಂಗ ಮಾಡುತ್ತಿದ್ದಾರೆ. ಈ ಪೈಕಿ ೨೯ ಸಾವಿರ ಪದವಿ ವಿದ್ಯಾರ್ಥಿಗಳು, ೧೩ ಸಾವಿರ ಸ್ನಾತಕೋತ್ತರ ವಿದ್ಯಾರ್ಥಿಗಳಿದ್ದಾರೆ. ಅಮರಾವತಿಯಲ್ಲಿ ವಿ.ವಿ. ಕ್ಯಾಂಪಸ್ ಕಾಮಗಾರಿಗಳಿಗೆ ಚಾಲನೆ ನೀಡಿದ್ದು ವೇಗವಾಗಿ ಪ್ರಗತಿಯಲ್ಲಿದೆ ಎಂಬುವುದನ್ನು ವಾಟ್ಸ್ಆಪ್ಗಳಲ್ಲಿ ಚಿತ್ರಗಳ ವಿವರಗಳನ್ನು ಗಮನಿಸಬಹುದಾಗಿದ್ದು, ೨ನೇ ಹಂತದ ಕಾಮಗಾರಿಗಳು ಪ್ರಾರಂಭವಾಗಿದೆ, ೮೦ ಕೋಟಿಗಳಿಗೂ ಅಧಿಕ ಅನುದಾನದಲ್ಲಿ ಕಾಮಗಾರಿಗಳು ಮುಂದುವರೆದಿದೆ ಎಂದರು. ಗೌರವ ಡಾಕ್ಟರೇಟ್ ಪ್ರದಾನಬೆಂಗಳೂರು ಉತ್ತರ ವಿಶ್ವವಿದ್ಯಾಲಯದ ೪ನೇ ಘಟಿಕೋತ್ಸವ ಸಮಾರಂಭದಲ್ಲಿ ಜಾನಪದ ಕ್ಷೇತ್ರದಲ್ಲಿ ಸಲ್ಲಿಸಿರುವ ಸೇವೆಗಾಗಿ ಬಿ.ವಿ ವೆಂಕಟಗಿರಿಯಪ್ಪ, ವೈದ್ಯಕೀಯ ಹಾಗೂ ಸಮಾಜ ಸೇವೆಗಾಗಿ ವೈದೇಹಿ ವೈದ್ಯಕೀಯ ಸಂಸ್ಥೆಯ ಅಧ್ಯಕ್ಷ ಡಿ.ಎ. ಕಲ್ಪಜಾ ಹಾಗೂ ವಾಸ್ತು ಶಿಲ್ಪ ಶಿಕ್ಷಣ ಕೊಡುಗೆಗಾಗಿ ಪ್ರೊ.ಕೆ.ಎಸ್ ಅನಂತಕೃ?ರಿಗೆ ಉನ್ನತ ಶಿಕ್ಷಣ ಸಚಿವ ಡಾ.ಎಂ.ಸಿ.ಸುಧಾಕರ್ ಗೌರವ ಡಾಕ್ಟರೇಟ್ ಪ್ರಧಾನ ಮಾಡಿದರು.ಬೆಂಗಳೂರು ಉತ್ತರ ವಿಶ್ವವಿದ್ಯಾಲಯದ ಕುಲಪತಿ ಪ್ರೊ. ನಿರಂಜನ ವಾನಳ್ಳಿ, ಮೌಲ್ಯಮಾಪನ ಕುಲಸಚಿವ ಡಾ.ಕೆ. ತಿಪ್ಪೇಸ್ವಾಮಿ, ಆಡಳಿತ ಕುಲಸಚಿ ಪ್ರೊ.ಡಿ.ಕುಮುದ, ಸಿಂಡಿಕೇಟ್ ಸದಸ್ಯರಾದ ಸೀಸಂದ್ರ ಗೋಪಾಲಗೌಡ, ಅರ್ಬಾಜ್ ಪಾಷ, ವೆಂಕಟೇಶಪ್ಪ ಇದ್ದರು.