ಭಾರತಪ್ರಪಂಚವಿಶೇಷರಾಜಕೀಯಮನರಂಜನೆಅಪರಾಧಕ್ರೀಡೆಕರ್ನಾಟಕಇ- ಪೇಪರ್

ಬೆಳಗಾವಿ-ಗೋವಾ ಮಧ್ಯದ ರಸ್ತೆ ದುರಸ್ತಿಗೆ ಆಗ್ರಹ

KannadaprabhaNewsNetwork | Published : Feb 23, 2024 1:50 AM

ಗೋವಾ ಮತ್ತು ಅದರ ವಾಣಿಜ್ಯ ಆರ್ಥಿಕತೆಯು ಬೆಳಗಾವಿಯಿಂದ ದಿನಸಿ, ಹಾಲು, ತರಕಾರಿಗಳು, ಕೋಳಿ ಮತ್ತು ಮೊಟ್ಟೆ, ಹೂವುಗಳು ಇತ್ಯಾದಿ ವಸ್ತುಗಳ ಪೂರೈಕೆಯ ಮೇಲೆ ಸಂಪೂರ್ಣವಾಗಿ ಅವಲಂಬಿತವಾಗಿದೆ.

ಕನ್ನಡಪ್ರಭ ವಾರ್ತೆ ಬೆಳಗಾವಿ

ಬೆಳಗಾವಿಯಿಂದ ಚೋರ್ಲಾ ಮತ್ತು ಅನ್ಮೋಡ್ ಮಾರ್ಗವಾಗಿ ಗೋವಾಕ್ಕೆ ಸಂಪರ್ಕ ಕಲ್ಪಿಸುವ ರಸ್ತೆಯ ದುರಸ್ತಿ ಕಾರ್ಯವನ್ನು ತ್ವರಿತವಾಗಿ ಕೈಗೊಳ್ಳಬೇಕು ಎಂದು ಬೆಳಗಾವಿ ವರ್ತಕರ ವೇದಿಕೆಯ ಸದಸ್ಯರು ಗುರುವಾರ ಕೇಂದ್ರ ರಸ್ತೆ ಸಾರಿಗೆ ಮತ್ತು ಹೆದ್ದಾರಿ ಸಚಿವ ನಿತಿನ್ ಗಡ್ಕರಿ ಅವರಿಗೆ ಮನವಿ ಸಲ್ಲಿಸಿದರು.

ಗೋವಾ ಮತ್ತು ಅದರ ವಾಣಿಜ್ಯ ಆರ್ಥಿಕತೆಯು ಬೆಳಗಾವಿಯಿಂದ ದಿನಸಿ, ಹಾಲು, ತರಕಾರಿಗಳು, ಕೋಳಿ ಮತ್ತು ಮೊಟ್ಟೆ, ಹೂವುಗಳು ಇತ್ಯಾದಿ ವಸ್ತುಗಳ ಪೂರೈಕೆಯ ಮೇಲೆ ಸಂಪೂರ್ಣವಾಗಿ ಅವಲಂಬಿತವಾಗಿದೆ. ಬೆಳಗಾವಿ ಅತೀ ದೊಡ್ಡ ವಾಣಿಜ್ಯ ಕೇಂದ್ರವಾಗಿದೆ ಮತ್ತು ದಶಕಗಳಿಂದ ಗೋವಾಕ್ಕೆ ಪೂರೈಕೆ ಬೆಂಬಲ ಕೇಂದ್ರವಾಗಿರುವುದುರ ಜತೆಗೆ ಗೋವಾ ಅತೀ ದೊಡ್ಡ ಅಂತಾರಾಷ್ಟ್ರೀಯ ಪ್ರವಾಸಿ ಆಕರ್ಷಣೆಯಾಗಿದೆ. ಆದರೆ, ಈ ಎರಡು ಸ್ಥಳಗಳನ್ನು ಸಂಪರ್ಕಿಸುವ ಕೆಟ್ಟ ರಸ್ತೆಗಳು ವ್ಯಾಪಾರಿಗಳು, ಪೂರೈಕೆದಾರರು, ಸಾಗಣೆದಾರರು, ಪ್ರವಾಸಿಗರಿಗೆ ಬಹಳಷ್ಟು ಅನಾನುಕೂಲತೆ ಉಂಟುಮಾಡುತ್ತವೆ. ಕೋವಿಡ್ ನಂತರದ ದಿನಗಳಲ್ಲಿ ಈಗಾಗಲೇ ಹೊರೆಯಾಗಿರುವ ವಲಯದ ಮೇಲೆ ಹೆಚ್ಚುವರಿ ಆರ್ಥಿಕ ಹೊರೆಯಾಗಿದೆ. ಹುಬ್ಬಳ್ಳಿ, ಧಾರವಾಡ, ಬೆಳಗಾವಿ, ಬಳ್ಳಾರಿ, ವಿಜಯಪುರ, ನಿಪ್ಪಾಣಿ, ಕೊಲ್ಹಾಪುರ, ಕಾರವಾರ ಮುಂತಾದ ನೆರೆಯ ಜಿಲ್ಲೆಗಳಿಂದ ಪ್ರತಿದಿನ ಗೋವಾಕ್ಕೆ ಬಹುತೇಕ ಅಗತ್ಯ ವಸ್ತುಗಳನ್ನು ಹೊತ್ತುಕೊಂಡು ಹೋಗುವ ವಾಹನಗಳಿಂದ ಹೆಚ್ಚುವರಿ ಹೊರೆಯಾಗಿದೆ. ಆದ್ದರಿಂದ, ಚಂದಗಡ ಜಾಂಬ್ರೆ ಅಣೆಕಟ್ಟು ಪ್ರದೇಶದ ಮೂಲಕ ಮೋಪಾ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದ ಹೊಸ ಸಂಪರ್ಕ ರಸ್ತೆಯ ಸಮೀಕ್ಷೆ ಮಾಡಬೇಕು. ಮೋಪಾ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣವನ್ನು ಸಂಪರ್ಕಿಸುವ ಚಂದಗಡದ ಮೂಲಕ ಈ ರಸ್ತೆಯು ಆರ್ಥಿಕತೆ ಹೆಚ್ಚಿಸುತ್ತದೆ ಮತ್ತು ಚಂದಗಡ, ಅಜ್ರಾ, ಗಡಿಂಗ್ಲಜ್‌ , ಕೊಲ್ಲಾಪುರ, ಬೆಳಗಾವಿ, ಹುಬ್ಬಳ್ಳಿ ಧಾರವಾಡ ಮತ್ತು ಸುತ್ತ-ಮುತ್ತಲಿನ ವಾಣಿಜ್ಯ ಚಟುವಟಿಕೆ ಮತ್ತು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣವು 100 ಕಿಮೀ ಗಿಂತ ಕಡಿಮೆಯಿಲ್ಲ. ಅದಕ್ಕಾಗಿ ಸಮೀಕ್ಷೆಯನ್ನು ಪ್ರಾರಂಭಿಸಲು ಆಗ್ರಹಿಸಿದರು.

ಅತ್ಯುತ್ತಮ ಮೂಲಸೌಕರ್ಯಗಳನ್ನು ಬಳಸಿಕೊಂಡು ತ್ವರಿತಗತಿ ಆಧಾರದ ಮೇಲೆ ದುರಸ್ತಿ ಕಾರ್ಯಗಳನ್ನು ಪ್ರಾರಂಭಿಸಬೇಕು ಎಂದು ವಿನಂತಿಸಿಕೊಂಡರು.

ಈ ಸಮಯದಲ್ಲಿ ವೇದಿಕೆ ಅಧ್ಯಕ್ಷ ಸತೀಶ ತೆಂಡೂಲ್ಕರ್, ಸದಸ್ಯರಾದ ಕಿರಣ ಗಾವಡೆ, ಅರುಣ್ ಕುಲಕರ್ಣಿ ಸೇರಿದಂತೆ ಮತ್ತಿತರರು ಉಪಸ್ಥಿತರಿದ್ದರು.