ಕನ್ನಡಪ್ರಭ ವಾರ್ತೆ ರಬಕವಿ-ಬನಹಟ್ಟಿ
ಎಲ್ಲ ದಾನಗಳಲ್ಲಿ ಅನ್ನದಾನಕ್ಕೆ ಹೆಚ್ಚಿನ ಪುಣ್ಯವಿದೆ. ಕಾಯಕ, ದಾಸೋಹ ಶರಣ ಸಂಸ್ಕೃತಿಯ ಮೂಲ ತಿರುಳಾಗಿದೆ ಎಂದು ಐಸಿಐಸಿಐ ಬ್ಯಾಂಕ್ ನಿವೃತ್ತ ವ್ಯವಸ್ಥಾಪಕ ಅಶೋಕ ಮಹಾಬಳಶೆಟ್ಟಿ ಹೇಳಿದರು.ರಬಕವಿಯ ಶ್ರೀದಾನಮ್ಮ ದೇವಸ್ಥಾನದಲ್ಲಿ ಡಿ.ಕೆ.ಕೊಟ್ರಶೆಟ್ಟಿ ಫೌಂಡೇಶನ್ ವತಿಯಿಂದ ಆಯೋಜಿಸಿದ್ದ ಅನ್ನ ಪ್ರಸಾದ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿದ ಅವರು, ರಬಕವಿಯ ಭಾರತ್ ಗ್ಯಾಸ್ ಸಂಸ್ಥೆಯ ಮಾಲೀಕ ಮತ್ತು ಬಸವಾ ಎಜ್ಯುಕೇಶನ್ ಫೌಂಡೇಶನ್ ಧುರೀಣ ಸೋಮಶೇಖರ ಕೊಟ್ರಶೆಟ್ಟಿ ಡಿ.ಕೆ.ಕೊಟ್ಟರಶೆಟ್ಟಿ ಫೌಂಡೇಶನ್ ಮೂಲಕ ಕಳೆದ ವರ್ಷಗಳಿಂದ ಅನ್ನ ಹಾಗೂ ಶಿಕ್ಷಣ ದಾಸೋಹ ನಡೆಸುತ್ತಿರುವುದು ಬಹುಶ್ರೇಷ್ಠ ಕಾರ್ಯವಾಗಿದೆ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.
ಪತ್ರಕರ್ತ ಬಸಯ್ಯ ವಸ್ತ್ರದ ಮಾತನಾಡಿ ಅನ್ನ, ಬಟ್ಟೆ, ವಸತಿ ಮೂಲ ಅವಶ್ಯಕತೆಗಳಾಗಿವೆ. ಮೊದಲಿಗೆ ಅನ್ನದ ಅಗತ್ಯತೆ ಸಕಲ ಜೀವಿಗಳಿಗೂ ಅತ್ಯಗತ್ಯವಾಗಿರುವುದರಿಂದ ಶ್ರೀಕ್ಷೇತ್ರದ ದರ್ಶನಾರ್ಥ ಬರುವ ಭಕ್ತರಿಗೆ ನಿರಂತರ ದಾಸೋಹ ನಡೆಸುತ್ತ ಕೊಟ್ರಶೆಟ್ಟಿಯವರು ಆದರ್ಶರಾಗಿದ್ದಾರೆ ಎಂದರು.ಮಲ್ಲಿಕಾರ್ಜುನ ಗಡೆಣ್ಣವರ ನಿರೂಪಿಸಿದರು. ಟ್ರಸ್ಟ್ ಅಧ್ಯಕ್ಷ ಶಿವಜಾತ ಉಮದಿ, ಈರಪ್ಪ ಪಟ್ಟಣಶೆಟ್ಟಿ, ರೇವಣಸಿದ್ದಪ್ಪ ಉಮದಿ, ಉದಯ ಜಿಗಜಿನ್ನಿ, ಡಾ.ಜಿ.ಎಚ್.ಚಿತ್ತರಗಿ, ನಾರಾಯಣರಾವ ಬೋರಗಿನಾಯಕ, ಬಸವರಾಜ ತೊರ್ಲಿ, ಪ್ರಭು ಉಮದಿ, ಅರ್ಚಕರು ಮತ್ತು ಭಾರತ ಗ್ಯಾಸ್ ಸಿಬ್ಬಂದಿ ಪಾಲ್ಗೊಂಡಿದ್ದರು.
ಫೋಟೊ-೮ಆರ್ಬಿಕೆ೮/ ರಬಕವಿಯ ಶ್ರೀದಾನಮ್ಮದೇವಿ ದೇವಾಲಯದಲ್ಲಿ ಯುಗಾದಿ ಅಮಾವಾಸ್ಯೆ ನಿಮಿತ್ಯ ಡಿ.ಕೆ.ಕೊಟ್ರಶೆಟ್ಟಿ ಫೌಂಡೇಶನ್ವರು ಆಯೋಜಿಸಿದ್ದ ಅನ್ನಪ್ರಸಾದಕ್ಕೆ ಬಸಯ್ಯ ವಸ್ತçದ ಚಾಲನೆ ನೀಡಿದರು.ಕನ್ನಡಪ್ರಭ ವಾರ್ತೆ,ರಬಕವಿ-ಬನಹಟ್ಟಿ,ಏ.೮. :- ರಬಕವಿಯ ಭಾರತ್ ಗ್ಯಾಸ್ ಸಂಸ್ಥೆಯ ಮಾಲೀಕರು ಮತ್ತು ಬಸವಾ ಎಜ್ಯುಕೇಶನ್ ಫೌಂಡೇಶನ್ ಧುರೀಣರು ಆಗಿರುವ ಸೋಮಶೇಖರ ಕೊಟ್ರಶೆಟ್ಟಿ ಡಿ.ಕೆ.ಕೊಟ್ಟರಶೆಟ್ಟಿ ಫೌಂಡೇಶನ್ ಮೂಲಕ ಕಳೆದ ವರ್ಷಗಳಿಂದ ಅನ್ನದಾಸೋಹ ನಡೆಸುತ್ತಿರುವುದು ಮತ್ತು ಶಿಕ್ಷಣ ದಾಸೋಹ ನಡೆಸುತ್ತಿರುವುದು ಬಹುಶ್ರೇಷ್ಠ ಕಾರ್ಯವಾಗಿದೆ ಎಂದು ಐಸಿಐಸಿಐ ಬ್ಯಾಂಕ್ ನಿವೃತ್ತ ವ್ಯವಸ್ಥಾಪಕ ಅಶೋಕ ಮಹಾಬಳಶೆಟ್ಟಿ ನುಡಿದರು.ರಬಕವಿಯ ಶ್ರೀದಾನಮ್ಮ ದೇವಸ್ಥಾನದಲ್ಲಿ ಡಿ.ಕೆ.ಕೊಟ್ರಶೆಟ್ಟಿ ಫೌಂಡೇಶನ್ ವತಿಯಿಂದ ಆಯೋಜಿಸಿದ್ದ ಅನ್ನ ಪ್ರಸಾದ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿದ ಅವರು ಎಲ್ಲ ದಾನಗಳಲ್ಲಿ ಅನ್ನದಾನಕ್ಕೆ ಹೆಚ್ಚಿನ ಪುಣ್ಯವಿದೆ. ಕಾಯಕ, ದಾಸೋಹ ಶರಣ ಸಂಸ್ಕೃತಿಯ ಮೂಲ ತಿರುಳಾಗಿದ್ದು, ಉದ್ಯಮಿ ಸೋಮಶೇಖರ ತಮ್ಮ ಕಾಯಕದಿಂದ ಅನ್ನದಾಸೋಹ ಮತ್ತು ಶಿಕ್ಷಣ ದಾಸೋಹ ನಡೆಸುತ್ತ ಮಾದರಿಯಾಗಿದ್ದಾರೆಂದು ಶ್ಲಾಘಿಸಿ ಸನ್ಮಾನಿಸಿದರು. ಪತ್ರಕರ್ತ ಬಸಯ್ಯ ವಸ್ತçದ ಮಾತನಾಡಿ ಅನ್ನ, ಬಟ್ಟೆ, ವಸತಿ ಮೂಲ ಅವಶ್ಯಕತೆಗಳಾಗಿದ್ದು, ಮೊದಲಿಗೆ ಅನ್ನದ ಅಗತ್ಯತೆ ಸಕಲ ಜೀವಿಗಳಿಗೂ ಅತ್ಯಗತ್ಯವಾಗಿರುವುದರಿಂದ ಶ್ರೀಕ್ಷೇತ್ರದ ದರ್ಶನಾರ್ಥ ಬರುವ ಭಕ್ತರಿಗೆ ನಿರಂತರ ದಾಸೋಹ ನಡೆಸುತ್ತ ಕೊಟ್ರಶೆಟ್ಟಿಯವರು ಆದರ್ಶರಾಗಿದ್ದಾರೆಂದರು.ಮಲ್ಲಿಕಾರ್ಜುನ ಗಡೆಣ್ಣವರ ನಿರೂಪಿಸಿದರು. ಟ್ರಸ್ಟ ಅಧ್ಯಕ್ಷ ಶಿವಜಾತ ಉಮದಿ, ಈರಪ್ಪ ಪಟ್ಟಣಶೆಟ್ಟಿ, ರೇವಣಸಿದ್ದಪ್ಪ ಉಮದಿ, ಉದಯ ಜಿಗಜಿನ್ನಿ, ಡಾ.ಜಿ.ಎಚ್.ಚಿತ್ತರಗಿ, ನಾರಾಯಣರಾವ ಬೋರಗಿನಾಯಕ, ಬಸವರಾಜ ತೊರ್ಲಿ, ಪ್ರಭು ಉಮದಿ, ಅರ್ಚಕರು ಮತ್ತು ಭಾರತ ಗ್ಯಾಸ್ ಸಿಬ್ಬಂದಿವರ್ಗದವರು ಪಾಲ್ಗೊಂಡಿದ್ದರು.