ತನಿಮಾನಿಗ ದೈವಕ್ಕೆ ಗಗ್ಗರ ಕಟ್ಟಿದ 12 ವರ್ಷದ ಬಾಲಕ!

KannadaprabhaNewsNetwork |  
Published : Apr 05, 2026, 02:45 AM IST
ತನಿಮಾನಿಗ ದೈವಕ್ಕೆ ಗಗ್ಗರ ಕಟ್ಟಿದ ಸಮರ್ಥ್‌ | Kannada Prabha

ಸಾರಾಂಶ

ಕಾರ್ಕಳ ತಾಲೂಕಿನ ಸೂಡಿ ಗ್ರಾಮದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ 7ನೇ ತರಗತಿ ವಿದ್ಯಾರ್ಥಿ ಸಮರ್ಥ್‌, ಕಿರಿಯ ವಯಸ್ಸಿನಲ್ಲೇ ಭೂತ ಕೋಲ ಕಟ್ಟಿದ ಘಟನೆ ಸಾಮಾಜಿಕ ಜಾಣತಾಣದಲ್ಲಿ ವೈರಲ್ ಅಗಿದೆ. ಶಿರ್ಲಾಲು ಸೂಡಿ ಪಂಗ್ಲಬೆಟ್ಟು ಮುಂಡ್ಲಿ ಮುಗೇರಕಲ ದೈವಸ್ಥಾನದ ವರ್ಧಂತಿ ಉತ್ಸವದಲ್ಲಿ ಸಮರ್ಥ್‌ ತನಿಮಾನಿಗ ಹೆಣ್ಣು ದೈವಕ್ಕೆ ಗಗ್ಗರ ಕಟ್ಟಿದ್ದಾನೆ.

ಕಾರ್ಕಳ: ಕಾರ್ಕಳ ತಾಲೂಕಿನ ಸೂಡಿ ಗ್ರಾಮದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ 7ನೇ ತರಗತಿ ವಿದ್ಯಾರ್ಥಿ ಸಮರ್ಥ್‌, ಕಿರಿಯ ವಯಸ್ಸಿನಲ್ಲೇ ಭೂತ ಕೋಲ ಕಟ್ಟಿದ ಘಟನೆ ಸಾಮಾಜಿಕ ಜಾಣತಾಣದಲ್ಲಿ ವೈರಲ್ ಅಗಿದೆ. ಶಿರ್ಲಾಲು ಸೂಡಿ ಪಂಗ್ಲಬೆಟ್ಟು ಮುಂಡ್ಲಿ ಮುಗೇರಕಲ ದೈವಸ್ಥಾನದ ವರ್ಧಂತಿ ಉತ್ಸವದಲ್ಲಿ ಸಮರ್ಥ್‌ ತನಿಮಾನಿಗ ಹೆಣ್ಣು ದೈವಕ್ಕೆ ಗಗ್ಗರ ಕಟ್ಟಿದ್ದಾನೆ. ಮೂರು ತಲೆಮಾರುಗಳಿಂದ ಮುಂದುವರಿದ ಪರಂಪರೆಯ ಭಾಗವಾಗಿ, ಅಜ್ಜ ಮೋನು ಪಾಣರ ಮತ್ತು ತಂದೆ ಹರೀಶ ಅವರ ಹಾದಿಯಲ್ಲಿ ಸಮರ್ಥ್‌ ಕೂಡ ನಡೆದು ದೈವರಾಧನೆಗೆ ತನ್ನ ಕೊಡುಗೆ ನೀಡಿದ್ದಾನೆ.

ಅವಿವಾಹಿತರು ಮಾತ್ರ ಪಾಲ್ಗೊಳ್ಳುವ ವಿಶೇಷ ಆಚರಣೆಯ ಈ ಕೋಲದಲ್ಲಿ ಬಾಲಕನ ಭಾಗವಹಿಸುವಿಕೆ ಸ್ಥಳೀಯರಲ್ಲಿ ಸಂತಸ ಮೂಡಿಸಿದೆ. ಕಳೆದ ಬಾರಿ‌ ಶಿರ್ಲಾಲು ಸೂಡಿ ಪಂಗ್ಲಬೆಟ್ಟು ಮುಂಡ್ಲಿ ಮುಗೇರಕಲ ದೈವಸ್ಥಾನದ ವರ್ಧಂತಿ ಉತ್ಸವದಲ್ಲೂ ಕೂಡ ಗಗ್ಗರ ಕಟ್ಟಿದ್ದ ಯುವಪೀಳಿಗೆ ಸಂಸ್ಕೃತಿಯನ್ನು ಉಳಿಸುವ ದಿಶೆಯಲ್ಲಿ ಇದು ಒಳ್ಳೆಯ ಬೆಳವಣಿಗೆ ಎಂದು ಜನರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಅನ್ನದ ರಾಮಯ್ಯ ಅಲ್ಲ, ನೀನು ಚೀಲದ ರಾಮಯ್ಯ: ಆರ್‌.ಅಶೋಕ
ಉಪ ಚುನಾವಣೆಯಿಂದ ರಾಜ್ಯಕ್ಕೆ ಹೊಸ ದಿಕ್ಸೂಚಿ: ಸುನೀಲ್‌ ಕುಮಾರ್‌