ಎಳನೀರು ಜ್ಯೂಸ್‌ ಸೇವಿಸಿ 137 ಮಂದಿ ಅಸ್ವಸ್ಥ, ಘಟಕ ಬಂದ್‌

KannadaprabhaNewsNetwork |  
Published : Apr 13, 2024, 01:06 AM ISTUpdated : Apr 13, 2024, 09:10 AM IST
tender, coconut, water

ಸಾರಾಂಶ

ಅಡ್ಯಾರಿನಲ್ಲಿ ಎಳನೀರು ಘಟಕ ಹಾಗೂ ಐಸ್‌ ಕ್ರೀಂ ಪಾರ್ಲರ್‌ನಲ್ಲಿ ಎಳನೀರು ಜ್ಯೂಸ್‌ ಸೇವಿಸಿ 137ಕ್ಕೂ ಹೆಚ್ಚು ಮಂದಿ ಅಸ್ವಸ್ಥರಾದ ಘಟನೆ ನಡೆದಿದ್ದು, ಈ ಸಂಬಂಧ ಘಟಕ ಹಾಗೂ ಪಾರ್ಲರ್‌ ಅನ್ನು ತಾತ್ಕಾಲಿಕವಾಗಿ ಬಂದ್‌ ಮಾಡಲಾಗಿದೆ.

 ಮಂಗಳೂರು : ಅಡ್ಯಾರಿನಲ್ಲಿ ಎಳನೀರು ಘಟಕ ಹಾಗೂ ಐಸ್‌ ಕ್ರೀಂ ಪಾರ್ಲರ್‌ನಲ್ಲಿ ಎಳನೀರು ಜ್ಯೂಸ್‌ ಸೇವಿಸಿ 137ಕ್ಕೂ ಹೆಚ್ಚು ಮಂದಿ ಅಸ್ವಸ್ಥರಾದ ಘಟನೆ ನಡೆದಿದ್ದು, ಈ ಸಂಬಂಧ ಘಟಕ ಹಾಗೂ ಪಾರ್ಲರ್‌ ಅನ್ನು ತಾತ್ಕಾಲಿಕವಾಗಿ ಬಂದ್‌ ಮಾಡಲಾಗಿದೆ.

ಅಲ್ಲದೆ ಎಳನೀರನ್ನು ಬೆಂಗಳೂರಿನ ಪ್ರಯೋಗಾಲಯಕ್ಕೆ ಕಳುಹಿಸಲಾಗಿದ್ದು, ವರದಿಗಾಗಿ ಕಾಯಲಾಗುತ್ತಿದೆ. ಈ ಬಗ್ಗೆ ಸಮಗ್ರ ವಿಚಾರಣೆ ನಡೆಸಲಾಗುವುದು ಎಂದು ದ.ಕ.ಜಿಲ್ಲಾ ಆರೋಗ್ಯಾಧಿಕಾರಿ ಡಾ.ತಿಮ್ಮಯ್ಯ ಹೇಳಿದ್ದಾರೆ. ಏ.10ರಂದು ಘಟನೆ ನಮ್ಮ ಗಮನಕ್ಕೆ ಬಂದಿದ್ದು ಘಟಕ್ಕೆ ತೆರಳಿ ಪರಿಶೀಲಿಸಿದ್ದೇವೆ ಎಂದರು.

ಕಾಲರಾ ಇಲ್ಲ: ಅಸ್ವಸ್ಥರಲ್ಲಿ ಬಹುತೇಕ ಮಂದಿ ಗುಣಮುಖರಾಗಿ ಮನೆಗೆ ತೆರಳಿದ್ದಾರೆ. ಒಬ್ಬರನ್ನು ಮಾತ್ರ ನಿಗಾದಲ್ಲಿ ಇರಿಸಲಾಗಿದೆ. ಅಸ್ವಸ್ಥರಲ್ಲಿ ಯಾರಲ್ಲೂ ಕಾಲರಾ ಪತ್ತೆಯಾಗಿಲ್ಲ ಎಂದರು. ಈ ಘಟನೆಗೆ ಕಾರಣ ಏನು? ಯಾರಾದರೂ ವೃತ್ತಿ ದ್ವೇಷದಲ್ಲಿ ವಿಷಪ್ರಾಶನ ಮಾಡಿದರೇ ಅಥವಾ ಸಿಬ್ಬಂದಿಯ ಎಡವಟ್ಟೇ ಎಂಬ ಬಗ್ಗೆ ಪರಿಶೀಲಿಸಲಾಗುವುದು ಎಂದರು.

ಎಳನೀರು ಜ್ಯೂಸ್‌ ಸೇವಿಸಿ ಅಸ್ವಸ್ಥರಾದ ಘಟನೆ ಏ.8ರಂದೇ ನಡೆದಿದೆ ಎಂದು ಜಾಲತಾಣಗಳಲ್ಲಿ ಮಾಹಿತಿ ಹರಿದಾಡತೊಡಗಿದೆ. ಆದರೆ ಈ ಘಟನೆ ನಮ್ಮ ಗಮನಕ್ಕೆ ಏ.10ರಂದು ಬಂದಿದ್ದು, ಅಂದೇ ಆಹಾರ ಇಲಾಖೆ ಅಧಿಕಾರಿಗಳ ಜತೆ ಘಟಕಕ್ಕೆ ತೆರಳಿ ಪರಿಶೀಲಿಸಿ ಮುಂಜಾಗ್ರತಾ ಕ್ರಮವಾಗಿ ಕೂಡಲೇ ಘಟಕ ಬಂದ್‌ ಮಾಡಿಸಲಾಗಿದೆ ಎಂದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಹೊಸಕೋಟೆಯಲ್ಲಿ ಜಾತ್ಯತೀತ ಸಿದ್ದಾಂತಗಳಿಗೆ ಮನ್ನಣೆ
ಪೌರಾಣಿಕ ಕಥೆಗಳು ಮನುಷ್ಯನಿಗೆ ನೈತಿಕ ದಾರಿದೀವಿಗೆ: ಶಿಕ್ಷಕಿ ಗಿರಿಜಾ ವಾಸುದೇವ್