ಕನ್ನಡಪ್ರಭ ವಾರ್ತೆ ಶ್ರೀರಂಗಪಟ್ಟಣ
ಸಮಿತಿ ಅಧ್ಯಕ್ಷ ಸ್ವಾಮಿಗೌಡ ಮಾತನಾಡಿ, ಸ್ವಾಮಿ ವಿವೇಕಾನಂದರು ಭಾರತದ ಅತ್ಯಂತ ಪ್ರಭಾವ ಶಕ್ತಿಶಾಲಿ ತತ್ವಜ್ಞಾನಿಯಲ್ಲಿ ಒಬ್ಬರು. ಭಾರತದ ಸಾಮಾಜಿಕ ಸಮಸ್ಯೆಗಳ ಬಗೆಗೆ ವಿಶಾಲ ದೂರ ದೃಷ್ಟಿ ಸಂಕೇತವಾಗಿ ಪರಿಗಣಿತರಾಗಿದ್ದಾರೆ. ಹಾಗಾಗಿ ಸ್ವಾಮಿ ವಿವೇಕಾನಂದರ ಜನ್ಮದಿನವನ್ನು ರಾಷ್ಟ್ರೀಯ ಯುವ ದಿನ ಎಂದು ಜನವರಿ 12 ರಂದು ಆಚರಿಸಲಾಗುತ್ತಿದೆ ಎಂದರು.
ಕಾರ್ಯಕ್ರಮದಲ್ಲಿ ಪಿಎಲ್ಡಿ ಬ್ಯಾಂಕ್ ಅಧ್ಯಕ್ಷ ಬಿ.ಚೆಲುವೇಗೌಡ, ಕರವೇ ಮುಖಂಡ ಗಂಜಾಂ ಯೋಗಣ್ಣ, ಕಸಾಪ ನಗರ ಘಟಕ ಅಧ್ಯಕ್ಷ ಸುರೇಶ್, ಕಸಾಪ ಕೋಶಾಧ್ಯಕ್ಷ ಬಸವರಾಜು, ಹೊಸೂರ್ ರಮೇಶ್, ಸಂತೆ ಮಾಳ ಸುರೇಶ್, ಆಟೋ ರಾಮಣ್ಣ ಸೇರಿದಂತೆ ಇತರರು ಇದ್ದರು.ವಿವೇಕಾನಂದರ ಭಾವಚಿತ್ರಕ್ಕೆ ಪುಷ್ಪ ನಮನಶ್ರೀರಂಗಪಟ್ಟಣ:
ನಂತರ ವೆಂಕಟೇಶ್ ಮಾತನಾಡಿ, ಪ್ರಸ್ತುತ ಯುವ ಪೀಳಿಗೆಗೆ ಸ್ವಾಮಿ ವಿವೇಕಾನಂದರ ಆದರ್ಶ ವ್ಯಕ್ತಿಯಾಗಿದ್ದಾರೆ. ಯುವಕರು ಸಾಧಿಸುವ ಗುರಿ ಇಟ್ಟುಕೊಂಡು ಬೇರಡೆ ಗಮನ ಸೆಳೆಯದೆ ಉತ್ತಮ ಕಾರ್ಯಗಳನ್ನು ಸಾಧಿಸಬೇಕು ಎಂದರು.
ಈ ವೇಳೆ ಮುಸ್ಲಿಂ ಸೌಹಾರ್ದ ಒಕ್ಕೂಟದ ಅಧ್ಯಕ್ಷ ಅಪ್ಸರ್ ಪಾಷ, ಮುಖಂಡರಾದ ಅಯ್ಯಬ್ ಷರಿಪ್, ಅಪ್ತಬ್ ಅಹಮದ್, ಗಂಜಾಂ ಅಬ್ಬೆದುಬ್ಬ ಚರ್ಚಿನ ಪಾಧರ್ ಸಾಗೈಪುಷ್ಪರಾಜ್, ಪ್ರಸನ್ನ ಪಾಲಹಳ್ಳಿ, ದಾಸಪ್ರಕಾಶ್ ಬಲ್ಲೆನಹಳ್ಳಿ, ನಿವೃತ್ತ ಶಿಕ್ಷಕ ವೀರಭದ್ರಪ್ಪ, ಬೌದ್ಧ ಮಹಾಸಭಾ ಮಾಜಿ ಅಧ್ಯಕ್ಷ ಕೆ.ಟಿ.ರಂಗಯ್ಯ, ಜಯಶಂಕರ ಕಡತನಾಳ ಸೇರಿದಂತೆ ಇತರರು ಇದ್ದರು.
ಶ್ರೀರಂಗಪಟ್ಟಣ:
ಶಾಲೆ ಮುಖ್ಯ ಶಿಕ್ಷಕರಾದ ಮಹಾದೇವಸ್ವಾಮಿ ಮಾತನಾಡಿ, ವಿದ್ಯಾರ್ಥಿಗಳಿಗೆ ವಿವೇಕಾನಂದರ ಒಂದೊಂದು ವಾಕ್ಯವು ವಿವೇಕ ವಾಣಿ, ವೃತ್ತಿಪರ ಮತ್ತು ವೈಯುಕ್ತಿಕ ಪ್ರಗತಿಗೆ ಬಯಸುವವರಿಗೆ ದಾರಿ ದೀಪವಾಗಿದೆ ಎಂದರು.
ಶಾಲೆಯ ಶಿಕ್ಷಕರು ಸೇರಿದಂತೆ ವಿದ್ಯಾರ್ಥಿಗಳು ಹಾಜರಿದ್ದರು.