ಜಿಲ್ಲೆಯಲ್ಲಿ ಮಳೆಗೆ 2 ಮನೆ ಹಾನಿ, 4 ಜಾನುವಾರು ಸಾವು

KannadaprabhaNewsNetwork |  
Published : Jun 12, 2025, 02:59 AM ISTUpdated : Jun 12, 2025, 03:00 AM IST
11ಕೆಡಿವಿಜಿ11-ದಾವಣಗೆರೆ ನಗರದಲ್ಲಿ ಬುಧವಾರ ಮಳೆಯಲ್ಲೇ ಮನೆ ಕಡೆ ಖುಷಿಯಿಂದ ಹೆಜ್ಜೆ ಹಾಕುತ್ತಿರುವ ಯುವತಿಯರು. ..................11ಕೆಡಿವಿಜಿ12, 13-ದಾವಣಗೆರೆ ನಗರದಲ್ಲಿ ಬುಧವಾರ ಮಳೆಯಲ್ಲೇ ಮನೆ ಕಡೆ ಖುಷಿಯಿಂದ ಹೆಜ್ಜೆ ಹಾಕುತ್ತಿರುವ ಯುವತಿಯರು. ..................11ಕೆಡಿವಿಜಿ14-ದಾವಣಗೆರೆ ನಗರದಲ್ಲಿ ಬುಧವಾರ ಮಳೆಯಲ್ಲೇ ಮನೆ ಕಡೆ ಹೊರಟಿರುವ ಮಹಿಳೆ. ...................11ಕೆಡಿವಿಜಿ15-ದಾವಣಗೆರೆ ನಗರದಲ್ಲಿ ಬುಧವಾರ ಮಳೆಯಲ್ಲೇ ಹೊರಟಿರುವ ಬೈಕ್ ಸವಾರರು. ....................11ಕೆಡಿವಿಜಿ16-ದಾವಣಗೆರೆ ನಗರದಲ್ಲಿ ಬುಧವಾರ ಮಳೆಯಲ್ಲೇ ಮನೆ ಕಡೆ ಹೊರಟಿರುವ ಮಹಿಳೆ....................11ಕೆಡಿವಿಜಿ17-ದಾವಣಗೆರೆ ನಗರದಲ್ಲಿ ಬುಧವಾರ ಸುರಿಯುವ ಮಳೆಯಲ್ಲೇ ಕೆಲಸಕ್ಕೆ ಹೊರಟಿರುವ ಶ್ರಮಿಕರು. | Kannada Prabha

ಸಾರಾಂಶ

ಜಿಲ್ಲೆಯಲ್ಲಿ ಸತತವಾಗಿ ಮಳೆ ಮುಂದುವರಿದಿದ್ದು, 2 ಮನೆಗಳು ಹಾನಿಗೀಡಾಗಿವೆ. ನಾಲ್ಕು ಜಾನುವಾರುಗಳು ಸಾವನ್ನಪ್ಪಿವೆ. ಕಳೆದ 3 ದಿನಗಳಿಂದ ಜಿಲ್ಲೆಯ ಜನತೆ ಮಲೆನಾಡಿನ ಮಳೆ ಅನುಭವ ಕಾಣುವಂತಾಗಿದೆ.

ಕನ್ನಡಪ್ರಭ ವಾರ್ತೆ ದಾವಣಗೆರೆ

ಜಿಲ್ಲೆಯಲ್ಲಿ ಸತತವಾಗಿ ಮಳೆ ಮುಂದುವರಿದಿದ್ದು, 2 ಮನೆಗಳು ಹಾನಿಗೀಡಾಗಿವೆ. ನಾಲ್ಕು ಜಾನುವಾರುಗಳು ಸಾವನ್ನಪ್ಪಿವೆ. ಕಳೆದ 3 ದಿನಗಳಿಂದ ಜಿಲ್ಲೆಯ ಜನತೆ ಮಲೆನಾಡಿನ ಮಳೆ ಅನುಭವ ಕಾಣುವಂತಾಗಿದೆ.

ಜಿಲ್ಲಾದ್ಯಂತ ಮಂಗಳವಾರ ವಾಡಿಕೆಯ 2.7 ಮಿಮೀ ಮಳೆಗೆ 12.0 ಮಿಮೀ ವಾಸ್ತವ ಮಳೆಯಾಗಿತ್ತು. ಮಲೆನಾಡಿನ ಸೆರಗುಗಳಾದ ಚನ್ನಗಿರಿಯಲ್ಲಿ 4.1 ಮಿಮೀ ಮಳೆಗೆ 17.8 ಮಿಮೀ ಮಳೆಯಾಗಿದ್ರೆ, ಹೊನ್ನಾಳಿಯಲ್ಲಿ 3.2 ಮಿಮೀ ವಾಡಿಕೆ ಮಳೆಗೆ 16.7 ಮಿಮೀ ಮಳೆಯಾಗಿದೆ.

ದಾವಣಗೆರೆಯಲ್ಲಿ 2.1 ಮಿಮೀ ವಾಡಿಕೆ ಮಳೆಗೆ 14.4 ಮಿಮೀ ಮಳೆಯಾಗಿದೆ. ಹರಿಹರದಲ್ಲಿ 2.1 ಮಿಮೀ ವಾಡಿಕೆ ಮಳೆಗೆ 13.7 ಮಿಮೀ, ಜಗಳೂರಿನಲ್ಲಿ 1.3 ಮಿಮೀ ವಾಡಿಕೆ ಮಳೆಗೆ 3.1 ಮಿಮೀ, ನ್ಯಾಮತಿಯಲ್ಲಿ 3.6 ಮಿಮೀ ವಾಡಿಕೆ ಮಳೆಗೆ 1.5 ಮಿಮೀ ಮಳೆಯಾಗಿದೆ.

ಹರಿಹರ ತಾಲೂಕಿನಲ್ಲಿ ಜೋರು ಮಳೆಯಿಂದಾಗಿ 4 ಜಾನುವಾರುಗಳು ಮೃತಪಟ್ಟಿವೆ. ದಾವಣಗೆರೆ ತಾಲೂಕಿನಲ್ಲಿ 1 ಮನೆ ಭಾಗಶಃ, ಚನ್ನಗಿರಿ ತಾಲೂಕಿನಲ್ಲಿ 1 ಮನೆ ತೀವ್ರ ಪ್ರಮಾಣದಲ್ಲಿ ಹಾನಿಯಾಗಿದೆ. ಕಂದಾಯ ಇಲಾಖೆ ಸೇರಿದಂತೆ ಸಂಬಂಧಿಸಿದ ಇಲಾಖೆಗಳಿಂದ ಪರಿಶೀಲನೆ ಕಾರ್ಯ ಮುಂದುವರಿದಿದೆ.

ಇಡೀ ಜಿಲ್ಲೆಯ ಬಹುತೇಕ ಕಡೆ ಬುಧವಾರವೂ ದಟ್ಟಮೋಡಗಳು ಆವರಿಸಿವೆ. ಬೆಳಗ್ಗೆಯಿಂದಲೇ ಮಳೆ ಸುರಿಯುವಂತಹ ಪರಿಸ್ಥಿತಿ ಇತ್ತು. ಮಧ್ಯಾಹ್ನ 1 ಗಂಟೆ ವೇಳೆಗೆ ಸುಮಾರು ಹೊತ್ತು ಅಲ್ಲಲ್ಲಿ ಜೋರು ಮಳೆಯಾಗಿದ್ದು, ಸ್ವಲ್ಪ ಹೊತ್ತು ಬಿಡುವು ಕೊಟ್ಟಿದ್ದ ಮಳೆರಾಯ ಮಕ್ಕಳು ಶಾಲೆ, ಕಾಲೇಜಿನಿಂದ ಮನೆಗೆ ಮರಳಲು, ಕೆಲಸ ಮುಗಿಸಿಕೊಂಡು ಜನರು ಮನೆ ತಲುಪಲೇನೋ ಎಂಬಂತೆ ಬಿಡುವು ಕೊಟ್ಟು ಮತ್ತೆ ರಾತ್ರಿ ಪೂರ್ತಿ ಸುರಿಯಿತು.

- - -

-11ಕೆಡಿವಿಜಿ11, 12-13, 14, 15, 16, 17:

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಜಿ ರಾಮ್‌ ಜಿ ರದ್ದು ಮಾಡಿ, ನರೇಗಾ ಮರುಸ್ಥಾಪಿಸಿ: ಸಿದ್ದು
ಸಚಿವ ತಿಮ್ಮಾಪುರ ರಾಜೀನಾಮೆಗೆ ಅಹೋರಾತ್ರಿ ಧರಣಿ